AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಸಾಲಾ ದೋಸೆ ಐಸ್​ಕ್ರೀಮ್​ ಕಂಡು ಮೂಗುಮುರಿದ ನೆಟ್ಟಿಗರು

ವಿಡಿಯೋವನ್ನು ದಿ ಗ್ರೇಟ್​ ಇಂಡಿಯಾ ಫುಡ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ಹಂಚಿಕೊಂಡಿದೆ. ಈ ವಿಡಿಯೋಕ್ಕೆ ದೆಹಲಿಯ ಸ್ಪೆಷಲ್​ ಮಸಾಲಾ ದೋಸೆ ಎಂದು ಕ್ಯಾಪ್ಷನ್​ ನೀಡಲಾಗಿದೆ. 

Viral Video: ಮಸಾಲಾ ದೋಸೆ ಐಸ್​ಕ್ರೀಮ್​ ಕಂಡು ಮೂಗುಮುರಿದ ನೆಟ್ಟಿಗರು
ಮಸಾಲಾ ದೋಸೆ ಐಸ್​ಕ್ರೀಮ್​
TV9 Web
| Edited By: |

Updated on:Jan 19, 2022 | 4:29 PM

Share

ಭಾರತದ ವಿವಿದೆಡೆ ವಿವಿಧ ರೀತಿಯ ಅಹಾರಗಳು ಪ್ರಸಿದ್ಧಿ ಪಡೆದಿರುತ್ತವೆ. ದಕ್ಷಿಣ ಭಾರತದಲ್ಲಿ ಒಂದು ರೀತಿಯ ಆಹಾರ ಶೈಲಿಯಿದ್ದರೆ, ದಕ್ಷಣ ಭಾರತದಲ್ಲಿ ಬೇರೆ ರೀತಿಯ ಆಹಾರ ಹೆಚ್ಚು ಜನಪ್ರಿಯವಾಗಿರುತ್ತದೆ. ಅವುಗಳಲ್ಲಿ ಮಸಾಲಾ ದೋಸೆ (Masala dosa) ಕೂಡ ಒಂದು. ಮಸಾಲಾ ದೋಸೆ ದಕ್ಷಿಣ ಭಾರತದ ಹೊಟೇಲ್​ಗಳಲ್ಲಿ ಸಿಗುವ ಸಾಮಾನ್ಯ ತಿನಿಸಾಗಿದೆ. ಅಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೂ ಬಾಯಿ ಚಪ್ಪರಿಸಿ ತಿನ್ನುವ ಖಾದ್ಯವಾಗಿದೆ. ಇದಕ್ಕೆ ಐಸ್​ಕ್ರೀಮ್​ ಮಿಕ್ಸ್​​ ಮಾಡಿದರೆ ಹೇಗಿರುತ್ತದೆ? ಹೌದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದೆ. ಮಸಾಲಾದೋಸೆಗೆ ಐಸ್​ಕ್ರಿಮ್​ ಸೇರಿಸಿ ಕೊಡುವ ಈ ಖಾದ್ಯ ವೈರಲ್​ ಆಗಿದೆ. ಈ ಮಸಾಲಾ ದೋಸಾ ಐಸ್​ಕ್ರೀಮ್​ (Masala dosa ice cream) ನೋಡಿ ನೆಟ್ಟಿಗರು ಮೂಗು ಮುರಿದಿದ್ದಾರೆ. ದೆಹಲಿಯ ಬೀದಿ ಬದಿ ವ್ಯಾಪಾರಿಯೊಬ್ಬ ತಯಾರಿಸುವ ಈ ತಿನಿಸಿನ ವಿಡಿಯೋ ಸಖತ್​ ವೈರಲ್ (Viral Video) ಆಗಿದೆ.

ವಿಡಿಯೋವನ್ನು ದಿ ಗ್ರೇಟ್​ ಇಂಡಿಯಾ ಫುಡ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ಹಂಚಿಕೊಂಡಿದೆ. ಈ ವಿಡಿಯೋಕ್ಕೆ ದೆಹಲಿಯ ಸ್ಪೆಷಲ್​ ಮಸಾಲಾ ದೋಸೆ ಎಂದು ಕ್ಯಾಪ್ಷನ್​ ನೀಡಲಾಗಿದೆ. 20 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ ನೋಡಿ ನೆಟ್ಟಿಗರು ಇದೆಂತಹ ತಿನಿಸು ಎಂದು ದೂರಿದ್ದಾರೆ. ವಿಡಿಯೋದಲ್ಲಿ ಅಂಗಡಿಯ ಮಾಲೀಕ ಮಸಾಲಾ ದೋಸೆಯನ್ನು ಮೊದಲು ಕತ್ತರಿಸಿ, ನಂತರ ಅದಕ್ಕೆ ಐಸ್​ಕ್ರೀಮ್​ ಮಿಶ್ರಣ ಮಾಡುತ್ತಾನೆ. ನಂತರ ಅದನ್ನು  ಪ್ಲೇಟ್​ಗೆ ಹಾಕಿ ಕೊಡುತ್ತಾನೆ. ಸದ್ಯ ವಿಡಿಯೋ ನೋಡಿದ ಕೆಲವರು ಈ ತಿಂಡಿಯನ್ನು ತಿನ್ನಲೇಬೇಕು ಎಂದಿದ್ದಾರೆ. ಇನ್ನೂ ಕೆಲವರು ಹೊಸ ಖಾದ್ಯವನ್ನು ನೊಡಿ ಮುಗುಮುರಿದ್ದಾರೆ.

ಈ ಹಿಂದೆ ಲಕ್ನೌನ ಪಾಸ್ಟ್​ಫುಡ್​ ತಯಾರಕನೊಬ್ಬ ಗೋಲಗಪ್ಪಾದೊಂದಿಗೆ ನೂಡಲ್ಸ್​ ಮಿಶ್ರಣ ಮಾಡಿ ನೀಡಿದ್ದ ವಿಡಿಯೋ ವೈರಲ್​ ಆಗಿತ್ತು. ಇದೀಗ ಐಸ್​ಕ್ರೀಮ್​ ಮಸಾಲಾ ದೋಸೆಯ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:

ಕಿಡ್ನಾಪ್​ ಆಗಿದ್ದೇನೆ ಎಂದು ತಂದೆಗೆ ನಕಲಿ ಸಂದೇಶ ಕಳುಹಿಸಿದ ಮಗ: 30 ಲಕ್ಷ ರೂ.ಗೆ ಬೇಡಿಕೆ

Published On - 4:28 pm, Wed, 19 January 22

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ