AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಸಾಲಾ ದೋಸೆ ಐಸ್​ಕ್ರೀಮ್​ ಕಂಡು ಮೂಗುಮುರಿದ ನೆಟ್ಟಿಗರು

ವಿಡಿಯೋವನ್ನು ದಿ ಗ್ರೇಟ್​ ಇಂಡಿಯಾ ಫುಡ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ಹಂಚಿಕೊಂಡಿದೆ. ಈ ವಿಡಿಯೋಕ್ಕೆ ದೆಹಲಿಯ ಸ್ಪೆಷಲ್​ ಮಸಾಲಾ ದೋಸೆ ಎಂದು ಕ್ಯಾಪ್ಷನ್​ ನೀಡಲಾಗಿದೆ. 

Viral Video: ಮಸಾಲಾ ದೋಸೆ ಐಸ್​ಕ್ರೀಮ್​ ಕಂಡು ಮೂಗುಮುರಿದ ನೆಟ್ಟಿಗರು
ಮಸಾಲಾ ದೋಸೆ ಐಸ್​ಕ್ರೀಮ್​
TV9 Web
| Edited By: |

Updated on:Jan 19, 2022 | 4:29 PM

Share

ಭಾರತದ ವಿವಿದೆಡೆ ವಿವಿಧ ರೀತಿಯ ಅಹಾರಗಳು ಪ್ರಸಿದ್ಧಿ ಪಡೆದಿರುತ್ತವೆ. ದಕ್ಷಿಣ ಭಾರತದಲ್ಲಿ ಒಂದು ರೀತಿಯ ಆಹಾರ ಶೈಲಿಯಿದ್ದರೆ, ದಕ್ಷಣ ಭಾರತದಲ್ಲಿ ಬೇರೆ ರೀತಿಯ ಆಹಾರ ಹೆಚ್ಚು ಜನಪ್ರಿಯವಾಗಿರುತ್ತದೆ. ಅವುಗಳಲ್ಲಿ ಮಸಾಲಾ ದೋಸೆ (Masala dosa) ಕೂಡ ಒಂದು. ಮಸಾಲಾ ದೋಸೆ ದಕ್ಷಿಣ ಭಾರತದ ಹೊಟೇಲ್​ಗಳಲ್ಲಿ ಸಿಗುವ ಸಾಮಾನ್ಯ ತಿನಿಸಾಗಿದೆ. ಅಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೂ ಬಾಯಿ ಚಪ್ಪರಿಸಿ ತಿನ್ನುವ ಖಾದ್ಯವಾಗಿದೆ. ಇದಕ್ಕೆ ಐಸ್​ಕ್ರೀಮ್​ ಮಿಕ್ಸ್​​ ಮಾಡಿದರೆ ಹೇಗಿರುತ್ತದೆ? ಹೌದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದೆ. ಮಸಾಲಾದೋಸೆಗೆ ಐಸ್​ಕ್ರಿಮ್​ ಸೇರಿಸಿ ಕೊಡುವ ಈ ಖಾದ್ಯ ವೈರಲ್​ ಆಗಿದೆ. ಈ ಮಸಾಲಾ ದೋಸಾ ಐಸ್​ಕ್ರೀಮ್​ (Masala dosa ice cream) ನೋಡಿ ನೆಟ್ಟಿಗರು ಮೂಗು ಮುರಿದಿದ್ದಾರೆ. ದೆಹಲಿಯ ಬೀದಿ ಬದಿ ವ್ಯಾಪಾರಿಯೊಬ್ಬ ತಯಾರಿಸುವ ಈ ತಿನಿಸಿನ ವಿಡಿಯೋ ಸಖತ್​ ವೈರಲ್ (Viral Video) ಆಗಿದೆ.

ವಿಡಿಯೋವನ್ನು ದಿ ಗ್ರೇಟ್​ ಇಂಡಿಯಾ ಫುಡ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ಹಂಚಿಕೊಂಡಿದೆ. ಈ ವಿಡಿಯೋಕ್ಕೆ ದೆಹಲಿಯ ಸ್ಪೆಷಲ್​ ಮಸಾಲಾ ದೋಸೆ ಎಂದು ಕ್ಯಾಪ್ಷನ್​ ನೀಡಲಾಗಿದೆ. 20 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ ನೋಡಿ ನೆಟ್ಟಿಗರು ಇದೆಂತಹ ತಿನಿಸು ಎಂದು ದೂರಿದ್ದಾರೆ. ವಿಡಿಯೋದಲ್ಲಿ ಅಂಗಡಿಯ ಮಾಲೀಕ ಮಸಾಲಾ ದೋಸೆಯನ್ನು ಮೊದಲು ಕತ್ತರಿಸಿ, ನಂತರ ಅದಕ್ಕೆ ಐಸ್​ಕ್ರೀಮ್​ ಮಿಶ್ರಣ ಮಾಡುತ್ತಾನೆ. ನಂತರ ಅದನ್ನು  ಪ್ಲೇಟ್​ಗೆ ಹಾಕಿ ಕೊಡುತ್ತಾನೆ. ಸದ್ಯ ವಿಡಿಯೋ ನೋಡಿದ ಕೆಲವರು ಈ ತಿಂಡಿಯನ್ನು ತಿನ್ನಲೇಬೇಕು ಎಂದಿದ್ದಾರೆ. ಇನ್ನೂ ಕೆಲವರು ಹೊಸ ಖಾದ್ಯವನ್ನು ನೊಡಿ ಮುಗುಮುರಿದ್ದಾರೆ.

ಈ ಹಿಂದೆ ಲಕ್ನೌನ ಪಾಸ್ಟ್​ಫುಡ್​ ತಯಾರಕನೊಬ್ಬ ಗೋಲಗಪ್ಪಾದೊಂದಿಗೆ ನೂಡಲ್ಸ್​ ಮಿಶ್ರಣ ಮಾಡಿ ನೀಡಿದ್ದ ವಿಡಿಯೋ ವೈರಲ್​ ಆಗಿತ್ತು. ಇದೀಗ ಐಸ್​ಕ್ರೀಮ್​ ಮಸಾಲಾ ದೋಸೆಯ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:

ಕಿಡ್ನಾಪ್​ ಆಗಿದ್ದೇನೆ ಎಂದು ತಂದೆಗೆ ನಕಲಿ ಸಂದೇಶ ಕಳುಹಿಸಿದ ಮಗ: 30 ಲಕ್ಷ ರೂ.ಗೆ ಬೇಡಿಕೆ

Published On - 4:28 pm, Wed, 19 January 22

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ