AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲ್ಲಿಗೇರುವ ಮೊದಲು ಇರಾನಿ ಯುವಕ, ‘ನನ್ನ ಸಾವಿಗೆ ಯಾರೂ ಶೋಕಿಸಬೇಡಿ, ಕುರಾನ್ ಪಠಿಸುವುದು ಅಥವಾ ಪ್ರಾರ್ಥನೆ ಮಾಡುವುದು ನಂಗೆ ಬೇಕಿಲ್ಲ,’ ಎಂದ!

ನಂತರ ಕೊನೆಯದಾಗಿ ಮಾಜಿದ್ರೆಜಾ, ‘ನನ್ನ ಸಾವನ್ನು ನೀವೆಲ್ಲ ಸಂಭ್ರಮಿಸಬೇಕು, ಮ್ಯೂಸಿಕ್ ಹಾಕಿಕೊಂಡು ಕುಣಿಯಬೇಕು,’ ಅಂತ ಹೇಳಿದ್ದಾನೆ.

ಗಲ್ಲಿಗೇರುವ ಮೊದಲು ಇರಾನಿ ಯುವಕ, ‘ನನ್ನ ಸಾವಿಗೆ ಯಾರೂ ಶೋಕಿಸಬೇಡಿ, ಕುರಾನ್ ಪಠಿಸುವುದು ಅಥವಾ ಪ್ರಾರ್ಥನೆ ಮಾಡುವುದು ನಂಗೆ ಬೇಕಿಲ್ಲ,’ ಎಂದ!
ಮಾಜಿದ್ರೆಜಾ ರಹನಾವಾರ್ಡ್ Image Credit source: Free Press Journal
TV9 Web
| Edited By: |

Updated on: Dec 17, 2022 | 11:38 AM

Share

ಇರಾನಿನ ಮಾಜಿದ್ರೆಜಾ ರಹನಾವಾರ್ಡ್ (Majidreza Rahanavard,) ಗಲ್ಲಿಗೇರುವ ಮೊದಲು ಆಡಿದ ಕೊನೆಯ ಮಾತುಗಳು ಇಂಟರ್ನೆಟ್ ವ್ಯಾಪಕವಾಗಿ ಹರಿದಾಡುತ್ತಿವೆ. 23-ವರ್ಷ-ವಯಸ್ಸಿನವನಾಗಿದ್ದ ಮೊಹ್ಸೆನ್ ಶೆಕಾರಿಯನ್ನು (Mohsen Shekari) ಭದ್ರತಾ ಸಿಬ್ಬಂದಿಯ ಸದಸ್ಯನೊಬ್ಬನನ್ನು ಗಾಯಗೊಳಿಸಿದ ಆರೋಪದಲ್ಲಿ ನೇಣಿಗೆ ಹಾಕಿದ (hanged) 4 ದಿನಗಳ ನಂತರ ಮಾಜಿದ್ರೆಜಾನ್ನು ಗಲ್ಲಿಗೇರಿಸಲಾಗಿತ್ತು. ಸರ್ಕಾರ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಕ್ಕೆ ಮಾಜಿದ್ರೆಜಾನನ್ನು ಸೋಮವಾರ ಅಂದರೆ ಡಿಸೆಂಬರ್ 12, 2022 ರಂದು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.

ಇರಾನಿ ವ್ಯಕ್ತಿಯನ್ನು ಗಲ್ಲಿಗೇರಿಸುವ ಮೊದಲು; ಸಾಯುವ ಮುಂಚೆ ಏನು ಹೇಳಲು ಬಯಸುವೆ ಅಂತ ಕೇಳಿದಾಗ ಅವನು ಹೇಳಿದ್ದನ್ನು ಕನ್ನಡಕ್ಕೆ ತರ್ಜುಮೆ ಮಾಡಿದರೆ ಅದರ ಸಾರಾಂಶ ಹೀಗಿರುತ್ತದೆ: ‘ಯಾರೊಬ್ಬರೂ ನನ್ನ ಗೋರಿಯ ಬಳಿ ಬಂದು ಶೋಕ ವ್ಯಕ್ತಪಡಿಸುವುದು ನನಗಿಷ್ಟವಿಲ್ಲ. ಕುರಾನ್ ಪಠಿಸುವುದು ಅಥವಾ ಪ್ರಾರ್ಥನೆ ಮಾಡುವುದು ನನಗೆ ಬೇಕಿಲ್ಲ.’ ನಂತರ ಕೊನೆಯದಾಗಿ ಮಾಜಿದ್ರೆಜಾ, ‘ನನ್ನ ಸಾವನ್ನು ನೀವೆಲ್ಲ ಸಂಭ್ರಮಿಸಬೇಕು, ಮ್ಯೂಸಿಕ್ ಹಾಕಿಕೊಂಡು ಕುಣಿಯಬೇಕು,’ ಅಂತ ಹೇಳಿದ್ದಾನೆ.

ಬೆಲ್ಜಿಯಂನ ಸಂಸತ್ ಸದಸ್ಯರಾಗಿರುವ ದರಿಯಾ ಸಫಾಯಿ ಈ ವಿಡಿಯೋ ಫುಟೇಜನ್ನು ಟ್ಚಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮಾಜಿದ್ರೆಜಾನ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿರುವುದನ್ನು ಮತ್ತು ಅವನ ಎಡಬಲದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸದಸ್ಯರು ಇರುವುದನ್ನು ನೋಡಬಹುದು.

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್