Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಗಾಲಿಗಳೇ ಇಲ್ಲ ಈ ಟ್ರಕ್​ಗೆ; ಭಾರತೀಯ ಡ್ರೈವರ್​ಗಳಿಗೆ ಮಾತ್ರ ಈ ಸಾಹಸ ಸಾಧ್ಯ ಎನ್ನುತ್ತಿದ್ದಾರೆ ನೆಟ್ಟಿಗರು

Viral Video : ಆದರೆ ತಿರುವಿನಲ್ಲಿ ಇವನು ಹೇಗೆ ಇದನ್ನು ನಿಭಾಯಿಸುತ್ತಾನೆ ಎಂದು ಕೇಳಿದ್ದಾರೆ ಕೆಲವರು. ನೀವು 2050ರಲ್ಲಿ ಜೀವಿಸುತ್ತಿದ್ದೀರಿ! ಎಂದಿದ್ದಾರೆ ಮತ್ತೊಬ್ಬರು. ಭಾರತೀಯ ಡ್ರೈವರ್​ಗಳ ಶಕ್ತಿಯೇ ಇದು ಎಂದಿದ್ದಾರೆ ಹಲವರು.

ಮುಂಗಾಲಿಗಳೇ ಇಲ್ಲ ಈ ಟ್ರಕ್​ಗೆ; ಭಾರತೀಯ ಡ್ರೈವರ್​ಗಳಿಗೆ ಮಾತ್ರ ಈ ಸಾಹಸ ಸಾಧ್ಯ ಎನ್ನುತ್ತಿದ್ದಾರೆ ನೆಟ್ಟಿಗರು
ಟ್ರಕ್ಕಿನ ಮುಂಗಾಲಿಗಳಿಲ್ಲದೆ ಚಲಿಸುತ್ತಿದೆ!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 04, 2023 | 10:21 AM

Viral Video : ನಮ್ಮ ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಎನ್ನುವುದನ್ನು ಆಗಾಗ ನೋಡುತ್ತಲೇ ಇರುತ್ತೇವೆ. ತಮ್ಮ ಕೌಶಲದಿಂದ ಯಾರನ್ನೂ ಮೋಡಿಗೆ ಒಳಮಾಡುವಂಥ ಸಾಮರ್ಥ್ಯ ಇಲ್ಲಿಯವರಿಗಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಮನುಷ್ಯ ಓಡಿಸುತ್ತಿರುವ ಟ್ರಕ್​ಗೆ ಮುಂಗಾಲಿಗಳೇ ಇಲ್ಲ. ಬಹುಶಃ ಈ ಟ್ರಕ್​ ಅಪಘಾತಕ್ಕೆ ಒಳಗಾದದ್ದು ಇರಬೇಕು. ಆದರೂ ಅದನ್ನು ತನ್ನ ಮಾತು ಕೇಳುವಷ್ಟರ ಮಟ್ಟಿಗೆ ರಿಪೇರಿ ಮಾಡಿಕೊಂಡು ಹೆದ್ದಾರಿಯಲ್ಲಿ ಓಡಿಸುತ್ತಿರುವ ಅವನ ಧೈರ್ಯಕ್ಕೆ ಸಲಾಮ್!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Sukhsam Sharma (@_fun_zone_91)

ಇದನ್ನು ನೋಡುತ್ತಿರುವ ಯಾರಿಗೂ ಇದು ಖಂಡಿತ ಗೊಂದಲಕ್ಕೆ ಬೀಳಿಸುತ್ತದೆ. ಹೀಗೆ ಅಪಾಯಕ್ಕೆ ಒಡ್ಡಿಕೊಳ್ಳಲು ಮಹಾನ್​ ಧೈರ್ಯ ಬೇಕು ಒಂದು. ಇನ್ನೊಂದು ಮುಂಗಾಲಿಗಳಿಲ್ಲದೆ ಅದು ಓಡುತ್ತಿರುವುದಾದರೂ ಹೇಗೆ? ವಿಡಿಯೋ ಅನ್ನು ಈಗಾಗಲೇ 4.8 ಮಿಲಿಯನ್ ಜನರು ನೋಡಿದ್ದಾರೆ. 4 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : ಮದುವೆಯಲ್ಲಿ ವರ, ವಧುವಿನ ಲೈವ್ ಪೋರ್ಟ್ರೇಟ್ ಮಾಡಿದ ವಿಡಿಯೋ ವೈರಲ್; ಎಂಥಾ ಅದೃಷ್ಟ ಎಂದ ನೆಟ್ಟಿಗರು ​

ಆದರೆ ಅನೇಕರು ಇದು ಅತ್ಯಂತ ಅಪಾಯಕಾರಿ ನಡೆ ಎಂದು ಹೇಳಿದ್ದಾರೆ. ಏನಿದ್ದರೂ ಇಂಥದೆಲ್ಲ ಭಾರತೀಯ ಟ್ರಕ್​ ಡ್ರೈವರ್​ಗಳಿಗೆ ಮಾತ್ರ ಸಾಧ್ಯ ಎಂದಿದ್ದಾರೆ ಹಲವರು. ಆದರೆ ತಿರುವಿನಲ್ಲಿ ಇವನು ಹೇಗೆ ಇದನ್ನು ನಿಭಾಯಿಸುತ್ತಾನೆ ಎಂದು ಕೇಳಿದ್ದಾರೆ ಕೆಲವರು. ನೀವು 2050ರಲ್ಲಿ ಜೀವಿಸುತ್ತಿದ್ದೀರಿ! ಎಂದಿದ್ದಾರೆ ಮತ್ತೊಬ್ಬರು. ಭಾರತೀಯ ಡ್ರೈವರ್​ಗಳ ಶಕ್ತಿಯೇ ಇದು ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 10:21 am, Wed, 4 January 23

ಮರಿ ಹುಲಿಗಳ ರಾಜ ಗಾಂಭೀರ್ಯ ನಡಿಗೆ ನೋಡಿ
ಮರಿ ಹುಲಿಗಳ ರಾಜ ಗಾಂಭೀರ್ಯ ನಡಿಗೆ ನೋಡಿ
ಚಿತ್ರರಂಗ ಕೇಳಿದ್ದನ್ನೆಲ್ಲ ಬಜೆಟ್​ನಲ್ಲಿ ಕೊಟ್ಟಿದ್ದಾರೆ: ಸಾಧು ಕೋಕಿಲ
ಚಿತ್ರರಂಗ ಕೇಳಿದ್ದನ್ನೆಲ್ಲ ಬಜೆಟ್​ನಲ್ಲಿ ಕೊಟ್ಟಿದ್ದಾರೆ: ಸಾಧು ಕೋಕಿಲ
ಎತ್ತಿನಹೊಳೆ ಯೋಜನೆ ಚರ್ಚಿಸಲು 18ರಂದು ದೆಹಲಿ ಹೋಗುತ್ತೇನೆ: ಶಿವಕುಮಾರ್
ಎತ್ತಿನಹೊಳೆ ಯೋಜನೆ ಚರ್ಚಿಸಲು 18ರಂದು ದೆಹಲಿ ಹೋಗುತ್ತೇನೆ: ಶಿವಕುಮಾರ್
ಹಲಾಲ್ ಬಜೆಟ್ ಅಂದವರಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ
ಹಲಾಲ್ ಬಜೆಟ್ ಅಂದವರಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ
ಮಲ್ಟಿಪ್ಲೆಕ್ಸ್​ ಟಿಕೆಟ್ ದರದ ಮೇಲೆ ನಿಯಂತ್ರಣ, ಫಿಲ್ಮ್ ಚೇಂಬರ್ ಸಂತಸ
ಮಲ್ಟಿಪ್ಲೆಕ್ಸ್​ ಟಿಕೆಟ್ ದರದ ಮೇಲೆ ನಿಯಂತ್ರಣ, ಫಿಲ್ಮ್ ಚೇಂಬರ್ ಸಂತಸ
ಗ್ರೇಟರ್ ಬೆಂಗಳೂರು ಪ್ರತಿಯೊಬ್ಬ ಕನ್ನಡಿಗನ ಕನಸಾಗಿದೆ: ಶಿವಕುಮಾರ್
ಗ್ರೇಟರ್ ಬೆಂಗಳೂರು ಪ್ರತಿಯೊಬ್ಬ ಕನ್ನಡಿಗನ ಕನಸಾಗಿದೆ: ಶಿವಕುಮಾರ್
ರೈತರಿಗೆ ₹10,000 ಕೋಟಿ ಮೀಸಲಿಟ್ಟರೆ ಯಾವ ಮೂಲೆಗಾದೀತು? ಮೈಸೂರು ರೈತರು
ರೈತರಿಗೆ ₹10,000 ಕೋಟಿ ಮೀಸಲಿಟ್ಟರೆ ಯಾವ ಮೂಲೆಗಾದೀತು? ಮೈಸೂರು ರೈತರು
ಬಜೆಟ್​ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ, ಇಲ್ಲಿದೆ ನೇರ ಪ್ರಸಾರ
ಬಜೆಟ್​ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ, ಇಲ್ಲಿದೆ ನೇರ ಪ್ರಸಾರ
ಮುಸಲ್ಮಾನರಿಗೆ ಮೀಸಲಾತಿ ನೀಡಿದ್ದನ್ನು ಕೋರ್ಟಲ್ಲಿ ಪ್ರಶ್ನಿಸುತ್ತೇವೆ: ಶಾಸಕ
ಮುಸಲ್ಮಾನರಿಗೆ ಮೀಸಲಾತಿ ನೀಡಿದ್ದನ್ನು ಕೋರ್ಟಲ್ಲಿ ಪ್ರಶ್ನಿಸುತ್ತೇವೆ: ಶಾಸಕ
ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದ್ದು ಶ್ಲಾಘನೀಯ: ಹೆಬ್ಬಾರ್
ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದ್ದು ಶ್ಲಾಘನೀಯ: ಹೆಬ್ಬಾರ್