AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಡ್ರೈವರ್ ಜೊತೆ ಧಾಬಾದಲ್ಲಿ ಸೈರಸ್ ಮಿಸ್ತ್ರಿ; ಹಳೆಯ ಫೋಟೋ ವೈರಲ್

Cyrus Mistry : ಇತ್ತೀಚೆಗೆ ಕಾರು ಅಪಘಾತದಲ್ಲಿ ನಿಧನರಾದ ಉದ್ಯಮಿ ಸೈರಸ್​ ಮಿಸ್ತ್ರಿ ಅವರ ಹಳೆಯ, ಫೋಟೋ ಇಲ್ಲಿದೆ. ಈ ಡಿಜಿಟಲ್​ ಯುಗ ಯಾವ ನೆನಪನ್ನೂ ಹೀಗೆ ಉಕ್ಕಿಸುತ್ತಲೇ ಇರುತ್ತದೆ.

Trending : ಡ್ರೈವರ್ ಜೊತೆ ಧಾಬಾದಲ್ಲಿ ಸೈರಸ್ ಮಿಸ್ತ್ರಿ; ಹಳೆಯ ಫೋಟೋ ವೈರಲ್
ತನ್ನ ಡ್ರೈವರ್​ ಜೊತೆ ಧಾಬಾ ಒಂದರಲ್ಲಿ ಊಟ ಮಾಡುತ್ತಿರುವ ಸೈರಸ್ ಮಿಸ್ತ್ರಿ
TV9 Web
| Edited By: |

Updated on:Sep 08, 2022 | 5:11 PM

Share

Trending : ಇತ್ತೀಚೆಗೆ ಕಾರು ಅಪಘಾತದಲ್ಲಿ ತೀರಿದ ಉದ್ಯಮಿ, ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ಸೈರಸ್​ ಮಿಸ್ತ್ರಿಯವರ ಹಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೈರಸ್​ ತಮ್ಮ ಡ್ರೈವರ್ ಜೊತೆ ಪ್ರಯಾಣದಲ್ಲಿದ್ದಾಗ ಧಾಬಾವೊಂದರಲ್ಲಿ ಒಟ್ಟಿಗೆ ಕುಳಿತು ಊಟ ಮಾಡುತ್ತಿರುವ ಫೋಟೋ ಇದಾಗಿದೆ. ‘ಸಾವಿರ ಶಬ್ದಗಳನ್ನು ಈ ಒಂದು ಫೋಟೋ ಹೇಳುತ್ತದೆ. ಸೈರಸ್ ಮಿಸ್ತ್ರಿಯವರ ಈ ಸರಳತನವನ್ನು ನೋಡಿ. ರಸ್ತೆ ಬದಿಯ ಧಾಬಾದಲ್ಲಿ ತಮ್ಮ ಡ್ರೈವರ್​ನೊಂದಿಗೆ ಊಟವನ್ನು ಆಸ್ವಾದಿಸುತ್ತಿದ್ಧಾರೆ. ಹೌದು, ಅವರು ವಿಮಾನ ಪ್ರಯಾಣಕ್ಕಿಂತ ರೋಡ್​ಟ್ರಿಪ್​ ಮತ್ತು ರಸ್ತೆಬದಿ ಆಹಾರವನ್ನು ಹೆಚ್ಚು ಇಷ್ಟಪಡುತ್ತಿದ್ದರು’ ಎಂಬ ಒಕ್ಕಣೆಯೊಂದಿಗೆ Parsi Zoroastrians Worldwide – The Hyderabadi Page ಈ ಫೋಟೋ ಹಂಚಿಕೊಂಡಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಫೋಟೋದಲ್ಲಿ ಮಿಸ್ತ್ರಿಯವರ ಉಡುಪನ್ನು ಗಮನಿಸಿ, ಸರಳವಾಗಿದೆ. ಈ ಫೋಟೋ ತೆಗೆದವರ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ಆದರೂ ಕೆಲವರು, 2016ರಲ್ಲಿ ಛಾಯಾಗ್ರಾಹಕ ಮೆಹ್ತೋ ಎನ್ನುವವರು ತೆಗೆದ ಫೋಟೋ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಪೋಸ್ಟ್​ ಅನ್ನು 1,02,000 ಜನರು ಇಷ್ಟಪಟ್ಟಿದ್ದಾರೆ. 160 ಜನ ಪ್ರತಿಕ್ರಿಯಿಸಿದ್ದಾರೆ. 74 ಜನರು ಮರುಹಂಚಿಕೊಂಡಿದ್ದಾರೆ.

ವ್ಯಕ್ತಿ ಕಣ್ಮುಂದೆ ಇರದಿದ್ದರೂ ವ್ಯಕ್ತಿಯ ಒಳ್ಳೆಯತನ, ಸರಳತನದಿಂದ ನೆನಪುಗಳು ಹೀಗೆ ಆಗಾಗ ತೇಲುತ್ತಿರುತ್ತವೆ. ಅದರಲ್ಲೂ ಇದು ಡಿಜಿಟಲ್​ ಯುಗ. ಎಲ್ಲವೂ ದಾಖಲಾಗುತ್ತಿರುತ್ತದೆ.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:58 pm, Thu, 8 September 22

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?