AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತ್ಯಸಂಸ್ಕಾರ ಮಾಡಲು ಹೋಗಿ ಶವಪೆಟ್ಟಿಗೆಯೊಂದಿಗೆ ಗುಂಡಿಯೊಳಗೆ ಬಿದ್ದ ಇಡೀ ಕುಟುಂಬ

ಇಡೀ ಕುಟುಂಬವು ತಮ್ಮ ಮನೆಯ ಸದಸ್ಯನ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸುತ್ತಾ, ಮೌನವಾಗಿ ಸ್ಮಶಾನಕ್ಕೆ ಸಾಗಿತ್ತು. ಅಲ್ಲಿ ಶವದ ಪೆಟ್ಟಿಗೆಯನ್ನು ಗುಂಡಿಯ ಬಳಿ ತೆಗೆದುಕೊಂಡು ಹೋಗುತ್ತಿದ್ದಾಗ ಮರದ ವೇದಿಕೆ ಕುಸಿದು ಎಲ್ಲರೂ ಕೆಳಗೆ ಬಿದ್ದಿದ್ದಾರೆ. ಮಾರ್ಚ್​ 21ರಂದು ಬೆಂಜಮಿನ್ ಅವಿಲ್ಸ್​ ಎಂಬುವವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಗೆಂದು ಕುಟುಂಬ ಸದಸ್ಯರು ಸ್ಮಶಾನಕ್ಕೆ ಆಗಮಿಸಿದ್ದರು.

ಅಂತ್ಯಸಂಸ್ಕಾರ ಮಾಡಲು ಹೋಗಿ ಶವಪೆಟ್ಟಿಗೆಯೊಂದಿಗೆ ಗುಂಡಿಯೊಳಗೆ ಬಿದ್ದ ಇಡೀ ಕುಟುಂಬ
ಸ್ಮಶಾನ ಸಮಾಧಿImage Credit source: The daily Guardian
Follow us
ನಯನಾ ರಾಜೀವ್
|

Updated on:Apr 10, 2025 | 11:26 AM

ಫಿಲಡೆಲ್ಫಿಯಾ, ಏಪ್ರಿಲ್ 10: ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆಂದು ಸ್ಮಶಾನ(Cemetery)ಕ್ಕೆ ಹೋಗಿದ್ದ ಕುಟುಂಬವು ಶವ ಪೆಟ್ಟಿಗೆಯೊಂದಿಗೆ ಗುಂಡಿಗೆ ಬಿದ್ದಿರುವ ಘಟನೆ ಫಿಲಡೆಲ್ಫಿಯಾದಲ್ಲಿ ನಡೆದಿದೆ. ಶವ ಪೆಟ್ಟಿಗೆಯನ್ನು ಹೊತ್ತು ಕುಟುಂಬ ಸದಸ್ಯರು ಭಾರವಾದ ಮನಸ್ಸಿನೊಂದಿಗೆ ಸ್ಮಶಾನಕ್ಕೆಬಂದಿದ್ದರು. ಮಾರ್ಚ್​ 21ರಂದು ಬೆಂಜಮಿನ್ ಅವಿಲ್ಸ್​ ಎಂಬುವವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಗೆಂದು ಕುಟುಂಬ ಸದಸ್ಯರು ಸ್ಮಶಾನಕ್ಕೆ ಆಗಮಿಸಿದ್ದರು. ಅಂತಿಮ ವಿಧಿವಿಧಾನಗಳಿಗಾಗಿ ಗ್ರೀನ್‌ಮೌಂಟ್ ಸ್ಮಶಾನದಲ್ಲಿ ಪ್ರೀತಿಪಾತ್ರರು ಒಟ್ಟುಗೂಡಿದಾಗ, ದುರಂತ ಸಂಭವಿಸಿದೆ.

ಗುಂಡಿಯ ಬಳಿ ಶವಪೆಟ್ಟಿಯೆನ್ನು ಕೆಳಗೆ ಇಳಿಸಲು ಪ್ರಯತ್ನಿಸುತ್ತಿದ್ದಾಗ ಕುಟುಂಬ ಸದಸ್ಯರ ಸಮೇತ ಎಲ್ಲರೂ ಸಮಾಧಿಗೆಂದು ತೋಡಲಾಗಿದ್ದ ಗುಂಡಿಯಲ್ಲಿ ಬಿದ್ದಿದ್ದಾರೆ. ಆಘಾತಕಾರಿ ಘಟನೆಯಲ್ಲಿ ಮೃತರ ಮಗ ಶವ ಪೆಟ್ಟಿಗೆ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ
Image
ಭಾರತದಲ್ಲಿ ಪಾತ್ರೆ ತೊಳೆಯುವ ಯಂತ್ರಗಳು ಏಕೆ ಜನಪ್ರಿಯವಾಗಿಲ್ಲ?
Image
ಗರ್ಭಿಣಿ ಪತ್ನಿಗೆ ನಡುರಸ್ತೆಯಲ್ಲೇ ಕಲ್ಲಿನಿಂದ ಜಜ್ಜಿ ಪತಿಯಿಂದ ಹಲ್ಲೆ
Image
ಚೀತಾಗಳ ದಾಹ ನೀಗಿಸಲು ಹೋಗಿ ಕೆಲಸ ಕಳೆದುಕೊಂಡ ಸಿಬ್ಬಂದಿ
Image
ಹೇ ನನ್ನ ಕಂದಮ್ಮನನ್ನು ಎಲ್ಲಿಗೆ ಹೊತ್ಕೊಂಡು ಹೋಗ್ತಾ ಇದ್ದೀಯಾ

ಐದಾರು ಮಂದಿ ಶವ ಪೆಟ್ಟಿಗೆ ಹಿಡಿದು ಮರದ ವೇದಿಕೆಯಂತಿದ್ದ ಸ್ಥಳಕ್ಕೆ ಬಂದಿದ್ದಾರೆ, ಕೂಡಲೇ ಆ ವೇದಿಕೆ ಕುಸಿದಿತ್ತು, ಅಲ್ಲಿ ಮುಂದಿರುವ ಗುಂಡಿಯಲ್ಲಿ ಎಲ್ಲರೂ ಬಿದ್ದಿದ್ದಾರೆ. ಹಲವು ಮಂದಿಗೆ ಕೈಕಾಲುಗಳು ಮುರಿದಿವೆ. ಸ್ಮಶಾನದಲ್ಲಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿರುವ ಬಗ್ಗೆ ಅವಿಲ್ಸ್ ಕುಟುಂಬವು ಕೋಪ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿತು.

ಮತ್ತಷ್ಟು ಓದಿ: ವೇಗವಾಗಿ ಚಲಿಸುವ ರೈಲಿನ ಫುಟ್ ಬೋರ್ಡಿಂಗ್ ಮೇಲೆ ವಿದ್ಯಾರ್ಥಿಗಳ ಹುಚ್ಚಾಟ, ಇಲ್ಲಿದೆ ವಿಡಿಯೋ

ಕ್ಯಾಮೆರಾದಲ್ಲಿ ಸೆರೆಯಾದ ಈ ಆಘಾತಕಾರಿ ಘಟನೆ ಈಗ ವೈರಲ್ ಆಗಿದ್ದು, ಅಂತ್ಯಕ್ರಿಯೆ ಪದ್ಧತಿಗಳಲ್ಲಿನ ಸುರಕ್ಷತಾ ಮಾನದಂಡಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ವಿಷಯದ ಬಗ್ಗೆ ಗ್ರೀನ್‌ಮೌಂಟ್ ಸ್ಮಶಾನವು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:22 am, Thu, 10 April 25

ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ