AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಎಲೆಕ್ಟ್ರಿಕ್ ಬೈಕ್​ನ ಹಾರ್ನ್​ ಕೇಳಿ ನಗುತ್ತೀರೋ ಅಥವಾ…

Horns : ಹಿಂದಿರುಗಿ ನೋಡದೆಯೇ ಯಾವ ಹಾರ್ನ್​ ಯಾವ ಗಾಡಿಯದು ಎನ್ನುವುದು ನಮಗೆ ಗೊತ್ತಾಗಿಬಿಡುತ್ತದೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಇಲ್ಲಿರುವ ಹಾರ್ನ್​ ಕೇಳಿ, ನಿಮ್ಮ ಅಭಿಪ್ರಾಯ ತಿಳಿಸಿ.

Viral Video: ಈ ಎಲೆಕ್ಟ್ರಿಕ್ ಬೈಕ್​ನ ಹಾರ್ನ್​ ಕೇಳಿ ನಗುತ್ತೀರೋ ಅಥವಾ...
ವಿಚಿತ್ರ ಹಾರ್ನ್​​ವುಳ್ಳ ಎಲೆಕ್ಟ್ರಿಕ್ ಬೈಕ್​
Follow us
ಶ್ರೀದೇವಿ ಕಳಸದ
|

Updated on: Aug 01, 2023 | 5:43 PM

Bikes : ಬಾಲ್ಯದಿಂದಲೂ ನೀವು ಕೇಳಿದಂತ ಹಾರ್ನ್​ ಶಬ್ದಗಳನ್ನು ನೆನಪಿಸಿಕೊಳ್ಳಿ; ಸೈಕಲ್​, ದ್ವಿಚಕ್ರವಾಹನ ಆಟೋ, ಟಂಟಂ, ಟೆಂಪೋ, ಟ್ರಕ್​, ಬಸ್​ ಹೀಗೆ… ಥರಥರದ ಶಬ್ದಗಳು ನಿಮ್ಮ ಸ್ಮೃತಿಪಟಲದ ಮೇಲೆ ಹಾಗೇ ಅಚ್ಚೊತ್ತಿಯೇ ಇವೆ, ಯಾವ ಹಾರ್ನ್​ ಶಬ್ದ ಯಾವ ವಾಹನದ್ದು ಎನ್ನುವುದನ್ನು ಶಬ್ದದ ಮೂಲಕವೇ ಗ್ರಹಿಸುವಷ್ಟು. ಆದರೆ ‘ಜಲ್ದೀ ವಹಾಂ ಸೇ ಹಠೋ’ ಎಂಬ ಧ್ವನಿ ನಿಮ್ಮನ್ನು ತಲುಪಿದರೆ ನೀವು ಏನು ಮಾಡುತ್ತೀರಿ?  ಇದೀಗ ವೈರಲ್ ಆಗಿರುವ ಈ ಎಲೆಕ್ಟ್ರಿಕ್ ಬೈಕ್‌ನ (Electric Bike) ಹಾರ್ನ್​ ನಿಮ್ಮನ್ನು ನಗಿಸುತ್ತದೆಯೋ, ಭಯ ಬೀಳಿಸುತ್ತದೆಯೋ?

ಎಲೆಕ್ಟ್ರಿಕ್ ದ್ವಿಚಕ್ರವಾಹನದ ಈ ಹಾರ್ನ್ನೆ ನೆಟ್ಟಿಗರನ್ನು ಪ್ರತಿಕ್ರಿಯಿಸುವಂತೆ ಮಾಡುತ್ತಿದೆ. ಈ ವಿಡಿಯೋ ಅನ್ನು @dakuwithchaku ಎಂಬ ಟ್ವಿಟರ್​ ಖಾತೆದಾರರು ಟ್ವೀಟ್ ಮಾಡಿದ್ದಾರೆ. ಸುರಿಯುತ್ತಿರುವ ಮಳೆಯಲ್ಲಿ ಈ ಬೈಕ್​ ಸವಾರ ಹಾರ್ನ್ ಒತ್ತಿದಾಗ ‘ಬೇಗನೇ ಎಲ್ಲರೂ ಇಲ್ಲಿಂದ ಸರಿಯಿರಿ’ ಎಂದು ಕೂಗುತ್ತದೆ. ಎರಡು ದಿನಗಳ ಹಿಂದೆ ಮಾಡಲಾದ ಈ ಪೋಸ್ಟ್​ ಅನ್ನು ಈತನಕ 1.1 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ.

ಇದನ್ನೂ ಓದಿ : Viral Video: ಈ ಬಾಲಗಂಧರ್ವ ನಿಮ್ಮೂರಲ್ಲಿದ್ದಾನೆಯೇ? ದಯವಿಟ್ಟು ತಿಳಿಸಿ

ಯಾಕೆಂದು ಗೊತ್ತಿಲ್ಲ ನಾನಂತೂ ಈ ವಿಡಿಯೋ ಅನ್ನು ಬಹಳ ಪ್ರೀತಿಸುತ್ತಿದ್ದೇನೆ, ನಗುತ್ತಲೇ ಇದ್ದೇನೆ ಎಂದಿದ್ದಾರೆ ಒಬ್ಬರು. ನನ್ನ ಐಡಿಯಾ ಕದಿಯುವುದನ್ನು ನಿಲ್ಲಿಸಿ ಎಂದು ಇನ್ನೊಬ್ಬರು ಹೇಳಿದ್ದಾರೆ. ಛೆ ಎಂಥ ಕಿರಿಕಿರಿಯಾಗುತ್ತದೆ ಇದು ಎಂದಿದ್ದಾರೆ ಮತ್ತೊಬ್ಬರು. ಇಷ್ಟೊಂದು ಶಬ್ದ ಬೇಕೆ? ಮೊದಲೇ ಶಬ್ದಮಾಲಿನ್ಯದಿಂದ ಸಾಕಾಗಿದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ‘ಈ ಮಗು ಯಾರು, ಭೇಟಿಯಾಗಬೇಕು, ಅಪ್ಪಿಕೊಳ್ಳಬೇಕು’; ಶಂಕರ್ ಮಹಾದೇವನ್ 

ಉಳಿದವರಿಗೇನೋ ಇದು ನಗು ತರಿಸಬಹುದು. ಆದರೆ ಮಕ್ಕಳು, ಮುದುಕರು ಮತ್ತು ಸೂಕ್ಷ್ಮ ಮನಸ್ಸಿನವರು ಈ ಗಾಡಿಯ ಹಾರ್ನ್ ಕೇಳಿದರೆ ಇಡೀ ದಿನ ಅವರನ್ನಿದು ಕಾಡದೇ ಬಿಡದು.

ಈ ವಿಡಿಯೋ ನೋಡಿದ ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!