AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಕೇರಳದ ಎಸ್​ಬಿಐ ಬ್ಯಾಂಕ್​ಗೆ ಓಣಮ್​ ದಿನ ಬಂದ ‘ರಾಜಾ ಮಹಾಬಲಿ’

Onam : ಹಬ್ಬದ ದಿನವೂ ಉದ್ಯೋಗಿಯ ಬದ್ಧತೆ ಶ್ಲಾಘನಾರ್ಹ ಎಂದು ಕೆಲವರು. ಎಸ್​ಬಿಐ ಸಿಬ್ಬಂದಿ ತನ್ನ ಡ್ರೆಸ್​ ಕೋಡ್​ ನಿಯಮ ಮುರಿದಿರುವುದು ಸರಿಯಲ್ಲ ಎಂದು ಮತ್ತಷ್ಟು ಜನ. ಅಂತೂ ಈ ವಿಡಿಯೋ ವೈರಲ್!

Viral Video : ಕೇರಳದ ಎಸ್​ಬಿಐ ಬ್ಯಾಂಕ್​ಗೆ ಓಣಮ್​ ದಿನ ಬಂದ ‘ರಾಜಾ ಮಹಾಬಲಿ’
ಗ್ರಾಹಕರೊಂದಿಗೆ ಮಹಾಬಲಿ!
TV9 Web
| Edited By: |

Updated on:Sep 06, 2022 | 11:52 AM

Share

Onam : ಓಣಂ ಹಬ್ಬದ ದಿನ ಕೇರಳದಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರು ಮಹಾಬಲಿಯಂತೆ ವೇಷ ಧರಿಸಿ ಬಂದು ಕರ್ತವ್ಯನಿರತರಾದ ವಿಡಿಯೋ ವೈರಲ್ ಆಗುತ್ತಿದೆ. ಹತ್ತು ದಿನಗಳ ಕಾಲ ಸಂಭ್ರಮದಿಂದ ಆಚರಿಸುವ ಓಣಂಗೆ ಅದರದೇ ಆದ ಪುರಾಣ ಐತಿಹ್ಯವಿದೆ. ಪ್ರತೀ ವರ್ಷ ತನ್ನ ಪ್ರಜೆಗಳನ್ನು ಕಾಣಲು ರಾಜ ಮಹಾಬಲಿ ಬರುತ್ತಾನೆ. ಅವನನ್ನು ಸ್ವಾಗತಿಸಲೆಂದು ಜನರು ಹಬ್ಬದ ಸಂಭ್ರಮದಲ್ಲಿ ತೊಡಗಿಕೊಳ್ಳುತ್ತಾರೆ. ಆಥಂದಿಂದ ಆರಂಭವಾಗಿ  ಹತ್ತು ದಿನಗಳ ಕಾಲ ತಿರುವೋಣಂಗೆ ಇದು ಮುಕ್ತಾಯವಾಗುತ್ತದೆ. ಈ ಆಚರಣೆಯಿಂದ ಶುಭ ಪ್ರಾಪ್ತಿಯಾಗುತ್ತದೆ  ಎಂಬ ಪ್ರತೀತಿ ಇದೆ. ಹಾಗಾಗಿ ಬ್ಯಾಂಕ್​ ಗ್ರಾಹಕರಿಗೆಲ್ಲ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಬ್ಯಾಂಕ್​ ಉದ್ಯೋಗಿ ಹೀಗೆ ಮಹಾಬಲಿಯಂತೆ ವೇಷ ಧರಿಸಿ ಬಂದರೋ!?

ಕೇರಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತಲಶ್ಶೇರಿಯ ಉದ್ಯೋಗಿಯೇ ವೇಷ ಧರಿಸಿ ಬಂದವರು. ಟ್ವಿಟರ್​ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಅನ್ನು ನಿಕ್ಸನ್ ಜೋಸೆಫ್ ಭಾನುವಾರದಂದು  ಹಂಚಿಕೊಂಡಿದ್ದಾರೆ. ‘ಎಸ್‌ಬಿಐ ಸಿಬ್ಬಂದಿಯೊಬ್ಬರು ರಾಜ ಮಹಾಬಲಿಯಂತೆ ವೇಷಧರಿಸಿ ಕೌಂಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಉತ್ಸಾಹಕ್ಕೆ ಅಭಿನಂದನೆಗಳು’ ಎಂಬ ಒಕ್ಕಣೆ ಈ ವಿಡಿಯೋಗಿದೆ. ಇದು 32,000ಕ್ಕಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಮೆಚ್ಚಿದವರ ಸಂಖ್ಯೆ ಇನ್ನೇನು 1,000ಕ್ಕೆ ತಲುಪಲಿದೆ.

ಗ್ರಾಹಕರು ಮಹಾಬಲಿ ವೇಷಧಾರಿ ಸಿಬ್ಬಂದಿಯೊಂದಿಗೆ ವ್ಯವಹರಿಸುವುದನ್ನು ನೆಟ್ಟಿಗರು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಹಬ್ಬದ ದಿನವೂ ವ್ಯಕ್ತಿಯ ವೃತ್ತಿಬದ್ಧತೆ ಅದ್ಭುತ!’ ಎಂದು ಟ್ವಿಟರ್​ ಖಾತೆದಾರರು ಪ್ರತಿಕ್ರಿಯಸಿದ್ದಾರೆ. ಇನ್ನೊಬ್ಬರು, ‘ಬ್ಯಾಂಕ್​ಗಳು ಹೀಗೆ ಎಲ್ಲ ಹಬ್ಬಗಳನ್ನೂ ಹೀಗೆ ಉತ್ಸಾಹದಿಂದ ಆಚರಿಸಬೇಕು’ ಎಂದಿದ್ದಾರೆ. ‘ಸಂಸ್ಕೃತಿ, ಸೇವೆ ಮತ್ತು ಮಾರ್ಕೆಟಿಂಗ್ ಈ ಮೂರನ್ನು ಸಂಯೋಜಿಸಿರುವ ಹೊಸ ಪಥ’ ಎಉ ಮಗದೊಬ್ಬರು ತಿಳಿಸಿದ್ದಾರೆ.

ಆದರೆ ಕೆಲ ಟ್ವಿಟ್ಟರ್ ಖಾತೆದಾರರು, ಹಬ್ಬಕ್ಕೆ ಉದ್ಯೋಗಿಯು ಇಂಥ ಉಡುಗೆ ಧರಿಸಿದ್ದನ್ನು ಟೀಕಿಸಿದ್ದಾರೆ. ಸಾಮಾನ್ಯವಾಗಿ ಎಸ್‌ಬಿಐ ಉದ್ಯೋಗಿಗಳು ಡ್ರೆಸ್ ಕೋಡ್ ಹೊಂದಿದ್ದಾರೆ. ಆ ನಿಯಮವನ್ನು ಮುರಿಯಬಾರದು ಎಂದಿದ್ದಾರೆ.

ಈ ವರ್ಷ ಆಗಸ್ಟ್​ 30ರಿಂದ ಪ್ರಾರಂಭವಾದ ಈ ಹಬ್ಬ ಸೆಪ್ಟೆಂಬರ್ 8ರಂದು ಮುಗಿಯುತ್ತದೆ. ಸಿಬ್ಬಂದಿ ಇನ್ನೂ ಯಾವ ಯಾವ ವೇಷ ಹಾಕುತ್ತಾರೋ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:51 am, Tue, 6 September 22

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ