Viral: ಥ್ರೆಡ್; ‘ಇದೇನು ನಮ್ಮ ಜಿಲೇಬಿಯೋ?’ ಗೊಂದಲಕ್ಕೆ ಬಿದ್ದ ನೆಟ್ಟಿಗರು

Thread : ಈ ಲೋಗೋ ತಮಿಳು ವರ್ಣಮಾಲೆಯ "ಕು" ಅಕ್ಷರದಿಂದ ಪ್ರೇರಣೆಗೊಂಡಿದೆ ಎಂದು ಕೆಲವರು. ಇದು ಮಲಯಾಳಂನ "ಥ್ರ್" ಮತ್ತು "ಕ್ರಾ" ಹೋಲುತ್ತದೆ ಎಂದು ಕೆಲವರು. ಎಂಥದೂ ಇಲ್ಲ, ಇದು ''ಓಂ'' ಎಂದು ಹಲವರು. ಏನಂತೀರಿ ನೀವು?

Viral: ಥ್ರೆಡ್; 'ಇದೇನು ನಮ್ಮ ಜಿಲೇಬಿಯೋ?' ಗೊಂದಲಕ್ಕೆ ಬಿದ್ದ ನೆಟ್ಟಿಗರು
ಸೋಶಿಯಲ್ ಮೀಡಿಯಾ ಅಪ್ಲಿಕೇಷನ್​ ''ಥ್ರೆಡ್​ '' ಜಿಲೇಬಿಯಂತಿದೆಯೇ?
Follow us
|

Updated on:Jul 08, 2023 | 2:42 PM

Thread : ಮೆಟಾ (META) ಸಂಸ್ಥೆಯು ಗುರುವಾರದಂದು ಅಧಿಕೃತವಾಗಿ ಥ್ರೆಡ್ ಎಂಬ ಸೋಶಿಯಲ್ ಮೀಡಿಯಾ ಅಪ್ಲಿಕೇಷನ್ (Social Media Application)​ ಅನ್ನು ಮಾರುಕಟ್ಟೆಗೆ​ ಬಿಡುಗಡೆ ಮಾಡಿದೆ. ಟ್ವಿಟರ್​ಗೆ ಪೈಪೋಟಿ ನೀಡಲೆಂದೇ ಈ ಹೊಸ ಅಪ್ಲಿಕೇಷನ್ ಅನ್ನು ರೂಪಿಸಲಾಗಿದೆ. ನೆಟ್ಟಿಗರು ನಾಲ್ಕು ದಿನಗಳಿಂದ ಸತತವಾಗಿ ಇದರ ಲೋಗೋದ ಸುತ್ತ ಸುತ್ತುತ್ತ ಟ್ರೆಂಡ್​ ಮತ್ತು ಟ್ರೋಲ್ ಮಾಡುತ್ತಿದ್ದಾರೆ.

ದಕ್ಷಿಣ ಭಾರತೀಯರು, ಇದು ದ್ರಾವಿಡ ವರ್ಣಮಾಲೆಗಳನ್ನು ಹೋಲುತ್ತಿದೆ ಎಂದು ತಮ್ಮ ತಮ್ಮ ಭಾಷೆಯ ವರ್ಣಮಾಲೆಯ ಅಕ್ಷರಗಳನ್ನುಈ ಥ್ರೆಡ್​ಗೆ ಹೋಲಿಸಿ ಸೋದಾಹರಿಸುತ್ತಿದ್ದಾರೆ. ಇದು ತಮಿಳು ವರ್ಣಮಾಲೆಯ “ಕು” ಅಕ್ಷರದಿಂದ ಪ್ರೇರೇಪಣೆಗೊಂಡಿದೆ ಎಂದು ಹಲವಾರು ಜನ ಹೇಳಿದ್ದಾರೆ. ಹಾಗೆಯೇ ಮಲಯಾಳಿಗರು, ಮಲಯಾಳದ “ಥ್ರ್” ಮತ್ತು “ಕ್ರಾ” ಅನ್ನು ಹೋಲುತ್ತದೆ ಎಂದಿದ್ದಾರೆ.

ಆದರೆ ಕೆಲ ನೆಟ್ಟಿಗರು ಇದು ಹಿಂದೂಧರ್ಮದ “ಓಂ” ಅನ್ನು ಕೂಡ ಪ್ರತಿನಿಧಿಸುತ್ತಿದೆ ಎಂದು ವಾದಿಸುತ್ತಿದ್ದಾರೆ. ತಿಂಡಿಪ್ರಿಯರು ಮಾತ್ರ ಇದು ಖಂಡಿತ ಜಿಲೇಬಿಯನ್ನು ಹೋಲುತ್ತಿದೆ ಎಂದು ಪಟ್ಟು ಹಿಡಿದು ಟೀಕಿಸಿ ಟ್ರೋಲ್ ಮಾಡುತ್ತಿದ್ದಾರೆ. ಸದ್ಯಕ್ಕಂತೂ ಜನ ತಮ್ಮ ಬೆಳಗಿನ ತಿಂಡಿಯಲ್ಲಿ ಜಿಲೇಬಿ ತಿನ್ನುತ್ತಿದ್ದೇವೆಂಬಂತೆ ಈ ಥ್ರೆಡ್​ ಅಪ್ಲಿಕೇಷನ್​ ಓಪನ್ ಮಾಡುತ್ತಿದ್ದಾರೆ. ಇನ್ನು ಇದೇ ಅವರಿಗೆ ಶಕ್ತಿ ಎಂದು ಟ್ವೀಟ್ ಮಾಡಿದ್ದಾರೆ ಒಬ್ಬರು. ಈ ಲೋಗೋ ನೋಡಿದಾಗೆಲ್ಲ ನನಗೆ ಜಿಲೇಬಿ ತಿನ್ನುವ ಆಸೆ ಉಂಟಾಗುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಅರೆ ಇದು ಕಿವಿಯಂತೆ ಕಾಣುತ್ತಿಲ್ಲವೆ? ಎಂದು ಕೆಲವರು ಹೇಳಿದ್ದಾರೆ. ಅಂತೂ ಈ ಹೊಸ ಅಪ್ಲಿಕೇಷನ್​ ಅನ್ನು ಒಂದು ದಿನದಲ್ಲಿ ಸುಮಾರು 30ಮಿಲಿಯನ್​ಗಿಂತಲೂ ಹೆಚ್ಚು ಜನ ಡೌನ್​ಲೋಡ್ ಮಾಡಿಕೊಂಡಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:36 pm, Sat, 8 July 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ