AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಆರ್​ಡಿ ಟಾಟಾ ಮೊದಲ ಬಾರಿಗೆ ಪೈಲಟ್​ ಪರವಾನಗಿ ಪತ್ರ ಪಡೆದ ಪೋಸ್ಟ್​ ಹಂಚಿಕೊಂಡ ಟಾಟಾ ಗ್ರುಪ್​

929ರಲ್ಲಿ ಜೆಆರ್​ಡಿ ಟಾಟಾ ಮೊದಲ ಬಾರಿಗೆ ಏರ್​ ಇಂಡಿಯಾಗೆ (Air India) ಪೈಲಟ್​ ಆಗಿ ವಿಮಾನ ಸೇವೆ ಆರಂಭಿಸಿದ್ದರು. ಇದೀಗ ಟಾಟಾ ಗ್ರುಪ್​ ಆ ಹಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಜೆಆರ್​ಡಿ ಟಾಟಾ ಮೊದಲ ಬಾರಿಗೆ ಪೈಲಟ್​ ಪರವಾನಗಿ ಪತ್ರ ಪಡೆದ ಪೋಸ್ಟ್​ ಹಂಚಿಕೊಂಡ ಟಾಟಾ ಗ್ರುಪ್​
ಟಾಟಾ ಗ್ರುಪ್​ ಶೇರ್​ ಮಾಡಿದ ಪೋಸ್ಟ್​
TV9 Web
| Edited By: |

Updated on:Feb 11, 2022 | 11:28 AM

Share

ಭಾರತ ಕೈಗಾರಿಕೋದ್ಯಮಮದಲ್ಲಿ ಅಚ್ಚಳಿಯದೆ ಇರುವ ಹೆಸರು ಜೆಆರ್​ಡಿ ಟಾಟಾ (JRD TATA). ಭಾರತಕ್ಕೆ ವಿಮಾನ ಸೇವೆಯನ್ನು ಒದಗಿಸಿ ಬರೋಬ್ಬರಿ 53 ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿ ಭಾರತದ ಕೈಗಾರಿಕಾ ನಕ್ಷೆಯಲ್ಲಿ ಮಹತ್ವದ ಛಾಪನ್ನು ಮೂಡಿಸಿದ ಭಾರತೀಯರಲ್ಲೊಬ್ಬರು. ಇವರು ಮೊದಲ ಬಾರಿಗೆ ವಾಣಿಜ್ಯ ಏವಿಯೇಟರ್​ ಪ್ರಮಾಣ ಪತ್ರವನ್ನು(commercial aviator’s certificate) ಗಳಿಸಿದ ಭಾರತದ ಮೊದಲ ಕೈಗಾರಿಕೋದ್ಯಮಿ. 1929ರಲ್ಲಿ ಜೆಆರ್​ಡಿ ಟಾಟಾ ಮೊದಲ ಬಾರಿಗೆ ಏರ್​ ಇಂಡಿಯಾಗೆ (Air India) ಪೈಲಟ್​ ಆಗಿ ವಿಮಾನ ಸೇವೆ ಆರಂಭಿಸಿದ್ದರು. ಇದೀಗ ಟಾಟಾ ಗ್ರುಪ್​ ಆ ಹಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸದ್ಯ ಈ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ.

View this post on Instagram

A post shared by Tata Group (@tatacompanies)

ಟಾಟಾ ಸಂಸ್ಥೆ ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಹಳೆಯ ಕತೆಯನ್ನು ಸಂಕ್ಷಿಪ್ತವಾಗಿ ಶೇರ್​ ಮಾಡಲಾಗಿದೆ. 1929ರಲ್ಲಿ  ಜೆಆರ್​ಡಿ ಟಾಟಾ ಮೊದಲ ಬಾರಿಗೆ ಪೀಲೆಟ್​ ಆಗಿದ್ದರ ಬಗ್ಗೆ ಗೊತ್ತಾ? ಎಂದು ಆರಂಭವಾಗುವ ಪೋಸ್ಟ್​ನ ಶೀರ್ಷಿಕೆ 1929ರ ಫೆ.10ರಂದು ಜೆಆರ್​ಡಿ ಟಾಟಾ ಪೈಲೆಟ್​​ ಆಗುವ ಮೂಲಕ ವಾಣಿಜ್ಯ ಏವಿಯೇಟರ್​ ಪ್ರಮಾಣ ಪತ್ರ ಪಡೆದ ಭಾರತದ ಮೊದಲ ಪೈಲೆಟ್​ ಎನಿಸಿಕೊಂಡಿದ್ದಾರೆ. ಈ ಮೊದಲು ಏರ್​ ಇಂಡಿಯಾ ಟಾಟಾ ಏರ್​ ಸರ್ವಿಸ್​ ಎನ್ನುವ ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿತ್ತು.  1932ರಲ್ಲಿ ಮೊದಲ ಬಾರಿಗೆ  ಕರಾಚಿಯಿಂದ ಹಾರಾಟ ಆರಂಭಿಸಿದ ವಿಮಾನ ತಾಸಿಗೆ 100 ಮೈಲಿ ದೂರವನ್ನು ಕ್ರಮಿಸಿತ್ತು ಎಂದು ಮಾಹಿತಿ ನೀಡುವ ಮೂಲಕ ಎರಡು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ನಿನ್ನೆ ಹಂಚಿಕೊಂಡ ಈ ಫೋಟೋ 5 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳಿಸಿದೆ. ಭಾರತೀಯ ಕೈಗಾರಿಕೋದ್ಯಮದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಜೆಆರ್​ಡಿ ಟಾಟಾಅ ಅವರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಅಲೆಕ್ಸಾದಿಂದ ಬಂದ ಹಾಡಿಗೆ ಕ್ಯೂಟ್​ ಸ್ಟೆಪ್​ ಹಾಕಿದ ಮಗು: ವಿಡಿಯೋ ವೈರಲ್​

Published On - 11:08 am, Fri, 11 February 22

Follow Us
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!