AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬಲೆಗೆ ಬಿದ್ದ ಬೃಹತ್‌ ಗಾತ್ರದ ಕಾಟ್ಲಾ ಮೀನು; ಬಂಪರ್‌ ಹೊಡೆದ ಮೀನುಗಾರ

ಸಮುದ್ರದಲ್ಲಿ ಮೀನುಗಾರಿಕೆಯ ಸಮಯದಲ್ಲಿ ದೈತ್ಯಾಕಾರದ ಮೀನುಗಳು ಬಲೆಗೆ ಬೀಳುವುದು ಸಾಮಾನ್ಯ. ನದಿ ನೀರಿನಲ್ಲಿ ಬೃಹದಾಕಾರದ ಮೀನುಗಳು ಮೀನುಗಳು ಅಷ್ಟಾಗಿ ಕಾಣಸಿಗುವುದಿಲ್ಲ. ಆದ್ರೆ ಇಲ್ಲೊಬ್ಬ ಮೀನುಗಾರ ಬೀಸಿದ ಬಲೆಗೆ ಬರೋಬ್ಬರಿ 32.5 ಕೆಜಿ ತೂಕದ ಕಾಟ್ಲಾ ಮೀನು ಬಿದ್ದಿದ್ದು, ಬಲೆಗೆ ಬಿದ್ದ ದೈತ್ಯ ಮೀನನ್ನು ಕಂಡು ಮೀನುಗಾರ ಫುಲ್‌ ಖುಷ್‌ ಆಗಿದ್ದಾರೆ. ಬಲೆಗೆ ಬಿದ್ದ ದೈತ್ಯ ಕಾಟ್ಲಾ ಮೀನಿನ ಫೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Viral: ಬಲೆಗೆ ಬಿದ್ದ ಬೃಹತ್‌ ಗಾತ್ರದ ಕಾಟ್ಲಾ ಮೀನು; ಬಂಪರ್‌ ಹೊಡೆದ  ಮೀನುಗಾರ
ಬಲೆಗೆ ಬಿದ್ದ ಕಾಟ್ಲಾ ಮೀನು
ಮಾಲಾಶ್ರೀ ಅಂಚನ್​
| Edited By: |

Updated on:Apr 21, 2025 | 3:55 PM

Share

ತೆಲಂಗಾಣ, ಏ. 21: ಜೀವನ ಸಾಗಿಸಲು ಮೀನು ಹಿಡಿಯುವುದನ್ನೇ (Fishing) ಕಾಯಕ ಮಾಡಿಕೊಂಡವರು ಹಲವರಿದ್ದಾರೆ. ಕೆಲವರು ಆಳ ಸಮುದ್ರದಲ್ಲಿ (deep ocean) ಮೀನುಗಾರಿಕೆಯಲ್ಲಿ ತೊಡಗಿಕೊಂಡರೆ, ಇನ್ನೂ ಕೆಲವರು ನದಿ ನೀರಿನಲ್ಲಿ (river) ಮೀನು ಹಿಡಿಯುವವರಿದ್ದಾರೆ. ಆದ್ರೆ ಸಮುದ್ರದಲ್ಲಿ ಸಿಕ್ಕ ಹಾಗೆ ನದಿಯಲ್ಲಿ ಬೃಹತ್‌ ಗಾತ್ರದ ಮೀನು (huge fish)  ಸಿಗುವುದು ಬಲು ಅಪರೂಪ. ನದಿಯಲ್ಲಿ ಯಾವಾಗ್ಲೂ ಸಣ್ಣ ಸಣ್ಣ ಮೀನುಗಳೇ ಬಲೆಗೆ ಬೀಳುತ್ತವೆ. ಆದ್ರೆ ತೆಲಂಗಾಣದ (Telangana) ಮೀನುಗಾರರೊಬ್ಬರಿಗೆ (fisherman) ನದಿ ನೀರಿನಲ್ಲಿ ಬರೋಬ್ಬರಿ 32.5 ಕೆ.ಜಿ ತೂಕದ ಕಾಟ್ಲಾ (Catla) ಮೀನು ಸಿಕ್ಕಿದೆ.  ಮೀನುಗಾರ ನರೇಶ್ (Naresh) ಬೀಸಿದ ಬಲೆಗೆ ದೈತ್ಯಾಕಾರದ ಮೀನು ಬಿದ್ದಿದ್ದು, ಬೃಹದಾಕಾರದ ಮತ್ಸ್ಯ ಕಂಡು ಮೀನುಗಾರ ಫುಲ್‌ ಖುಷಿಯಾಗಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಂಗಲ್ಲಪಲ್ಲಿಯ ಮೀನುಗಾರ ನರೇಶ್‌ ಎಂದಿನಂತೆ ಮಿಡ್‌ ಮಾನೇರು ಡ್ಯಾಮ್‌ ಬಳಿ ಮೀನುಗಾರಿಕೆಗೆ ತೆರಳಿದ್ದರು. ಯಾವಾಗಲೂ ಬೀಳುವ ಹಾಗೆ ಸಣ್ಣಸಣ್ಣ ಮೀನುಗಳೇ ಬೀಳುತ್ತವೆ ಎಂದು ಅವರು ಬೀಸಿದ ಬಲೆಯನ್ನು ನದಿ ನೀರಿನಿಂದ ಮೇಲಕ್ಕೆ ಎತ್ತಿದ್ದರು. ಎಷ್ಟೇ ಎತ್ತಿದರೂ ಬಲೆ ಮೇಲಕ್ಕೆ ಬರಲೇ ಇಲ್ಲ. ಆ ಸಂದರ್ಭದಲ್ಲಿ ನರೇಶ್‌ ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಮೆಲ್ಲಗೆ ಬಲೆಯನ್ನು ಮೇಲಕ್ಕೆ ಎತ್ತಿದ್ದು, ಆ ಬಲೆಗೆ ಬಿದ್ದ ದೈತ್ಯಾಕಾರದ ಮೀನನ್ನು ಕಂಡು ನರೇಶ್‌ ಖುಷಿಯಾಗಿದ್ದಾರೆ. ಸಣ್ಣ ಮೀನುಗಳೇ ಬಲೆಗೆ ಬೀಳುತ್ತವೆ ಎಂದುಕೊಂಡಿದ್ದ ನರೇಶ್‌ ಬಲೆಗೆ ಬಿದ್ದ ಬೃಹತ್‌ ಗಾತ್ರದ ಕಾಟ್ಲಾ ಮೀನನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ಇದನ್ನೂ ಓದಿ: ಹೊಸ ಜೀವನಕ್ಕೆ ಕಾಲಿಟ್ಟ ವರನಿಗೆ ನೀಲಿ ಬಣ್ಣದ ಡ್ರಮ್ ಉಡುಗೊರೆಯಾಗಿ ನೀಡಿದ ಗೆಳೆಯರ ಬಳಗ, ವಿಡಿಯೋ ವೈರಲ್

ಇದನ್ನೂ ಓದಿ
Image
ವರನಿಗೆ ನೀಲಿ ಬಣ್ಣದ ಡ್ರಮ್ ಉಡುಗೊರೆಯಾಗಿ ನೀಡಿದ ಗೆಳೆಯರ ಬಳಗ
Image
ಮೆಹಂದಿ ಹಾಕಿಸಿಕೊಂಡು ಬರುತ್ತೇನೆಂದವಳು ಎಸ್ಕೇಪ್, ನಿಂತೇ ಹೋಯ್ತು ಮದುವೆ
Image
ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಜ್ಞೆ ತಪ್ಪಿ ಬಿದ್ದ ಬಾಲಕ, ಮುಂದೇನಾಯಿತು?
Image
ಶಾಲಾ ಕಾರ್ಯಕ್ರಮದಲ್ಲಿ ಪುಟಾಣಿ ಬಾಲಕನ ಎನರ್ಜಿಟಿಕ್ ಡಾನ್ಸ್, ವಿಡಿಯೋ ವೈರಲ್

ಬಲೆಗೆ ಬಿದ್ದ ಕಾಟ್ಲಾ ಮೀನು ಬರೋಬ್ಬರಿ 32.5 ಕೆಜಿ ತೂಕವನ್ನು ಹೊಂದಿದ್ದು, ಸ್ಥಳೀಯರು ಈ ಬೃಹದಾಕಾರದ ಮೀನನ್ನು ಕಣ್ತುಂಬಿಕೊಳ್ಳಲು ನಾ ಮುಂದು, ತಾ ಮುಂದು ಅಂತ ಧಾವಿಸಿದ್ದಾರೆ. ಈ ಮೀನನ್ನು ಕಂಡು ಸಮುದ್ರ ಪ್ರದೇಶದಲ್ಲಿ ಮಾತ್ರ ಇಂತಹ ದೈತ್ಯ ಮೀನುಗಳು ಕಾಣಿಸುತ್ತವೆ. ಆದರೆ ಮಿಡ್‌ ಮನೇರು ಡ್ಯಾಮ್‌ ಬಳಿ ಇಷ್ಟೊಂದು ದೊಡ್ಡ ಮೀನು ಇಲ್ಲಿ ತನಕ ಕಂಡು ಬಂದೇ ಇಲ್ಲ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಜನ ಈ ಮೀನಿನ ಫೋಟೋವನ್ನು ಕ್ಲಿಕ್ಕಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Mon, 21 April 25

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!