AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಉಚಿತ ಭಾಗ್ಯವಲ್ಲ, ಉದ್ಯೋಗ ಮುಖ್ಯ… ವೈರಲ್‌ ಆಗ್ತಿದೆ ಆಟೋ ಹಿಂದೆ ಬರೆದ ಅರ್ಥಪೂರ್ಣ ಸಾಲು

ಕೆಲವೊಬ್ರು ಆಟೋ ಡ್ರೈವರ್ಸ್‌ ತಮ್ಮ ಆಟೋದಲ್ಲಿ ವಿಶಿಷ್ಟವಾದ ಕೋಟ್ಸ್‌ ಅಥವಾ ಸಾಲುಗಳನ್ನು ಬರೆದಿರುತ್ತಾರೆ. ಆಟೋಗಳ ಹಿಂದೆ ಬರೆದಿರುವ ಸಾಲುಗಳಂತೂ ಒಂದಕ್ಕಿಂತ ಒಂದು ಅದ್ಭುತವಾಗಿರುತ್ತವೆ. ಕೆಲವೊಂದು ತುಂಬಾ ಫನ್ನಿಯಾಗಿದ್ರೆ, ಇನ್ನೂ ಕೆಲವು ಮನ ಮುಟ್ಟುವಂತಿರುತ್ತದೆ. ಇದೀಗ ಅಂತಹದ್ದೇ ಫೋಟೋವೊಂದು ವೈರಲ್‌ ಆಗಿದ್ದು, ತೆಲಂಗಾಣ ಮೂಲದ ಆಟೋ ಡ್ರೈವರ್‌ ಒಬ್ರು ಉಚಿತವಲ್ಲ, ಉದ್ಯೋಗ ಮುಖ್ಯ ಎಂಬ ಸಾಲನ್ನು ಆಟೋದ ಹಿಂದೆ ಬರೆಯುವ ಮೂಲಕ ಸರ್ಕಾರದ ಬಿಟ್ಟಿ ಭಾಗ್ಯದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

Viral: ಉಚಿತ ಭಾಗ್ಯವಲ್ಲ, ಉದ್ಯೋಗ ಮುಖ್ಯ… ವೈರಲ್‌ ಆಗ್ತಿದೆ ಆಟೋ ಹಿಂದೆ ಬರೆದ ಅರ್ಥಪೂರ್ಣ ಸಾಲು
ವೈರಲ್ ಪೋಸ್ಟ್​
ಮಾಲಾಶ್ರೀ ಅಂಚನ್​
| Edited By: |

Updated on: Jan 22, 2025 | 7:35 AM

Share

ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ರಾಜಕೀಯ ಪಕ್ಷಗಳು ಹಲವಾರು ತಂತ್ರಗಳನ್ನು ರೂಪಿಸುತ್ತವೆ. ಅಂತಹ ಸ್ಟ್ರಾಟರ್ಜಿಗಳಲ್ಲಿ ಉಚಿತ ಭಾಗ್ಯಗಳು ಕೂಡಾ ಒಂದು. ಇದೇ ತಂತ್ರವನ್ನು ಉಪಯೋಗಿಸಿ ಚುನಾವಣೆಯಲ್ಲಿ ಗೆದ್ದು, ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದಂತೆ, ನಂತರದಲ್ಲಿ ತೆಲಂಗಾಣದಲ್ಲಿ ಅಲ್ಲಿನ ಕಾಂಗ್ರೆಸ್‌ ಸರ್ಕಾರ 6 ಗ್ಯಾರಂಟಿಗಳನ್ನು ಘೋಷಿಸಿತ್ತು. ಆದರೆ ಹೆಚ್ಚಿನವರು ಬಿಟ್ಟಿ ಭಾಗ್ಯಗಳು ಬೇಡ, ಇದರಿಂದ ಸಂಕಷ್ಟ ಎದುರಾಗುವುದು ಪಕ್ಕಾ, ಅದರ ಬದಲಾಗಿ ಜನರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ರೂಪಿಸಿ ಎಂದು ಹೇಳಿದ್ದುಂಟು. ಅದರಂತೆ ಇಲ್ಲೊಬ್ರು ಆಟೋ ಡ್ರೈವರ್‌ ಕೂಡಾ “ಉಚಿತವಲ್ಲ, ಉದ್ಯೋಗ ಮುಖ್ಯ” ಎಂದು ಆಟೋದ ಹಿಂದೆ ಕೋಟ್ಸ್‌ ಬರೆಸಿ, ಬಿಟ್ಟಿ ಭಾಗ್ಯಗಳ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆಟೋ ಹಿಂದೆ ಬರೆದ ಈ ಸಾಲಿನ ಫೋಟೋ ಇದೀಗ ವೈರಲ್‌ ಆಗುತ್ತಿದೆ.

ತೆಲಂಗಾಣದ ಸಿರ್ಸಿಲ್ಲಾ ಜಿಲ್ಲೆಯ ಆಟೋ ಚಾಲಕರಾದ ರಾಂಬಾಬು ಎಂಬವರು ತಮ್ಮ ಆಟೋದ ಹಿಂದೆ “ಉಚಿತವಲ್ಲ, ಉದ್ಯೋಗ ಮುಖ್ಯ” ಎಂಬ ಕೋಟ್ಸ್‌ ಬರೆಸಿ ಸರ್ಕಾರದ ಬಿಟ್ಟಿ ಭಾಗ್ಯದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನೇಕಾರರಾಗಿ ಕೆಲಸ ಮಾಡುತ್ತಿದ್ದ ರಾಂಬಾಬು ಆರೋಗ್ಯ ಸಮಸ್ಯೆಯಿಂದ ಕೆಲಸವನ್ನು ತೊರೆದು ಜೀವನೋಪಾಯಕ್ಕಾಗಿ ಆಟೋ ಓಡಿಸಲು ಶುರು ಮಾಡಿದರು. ಇದೀಗ ಇವರು ತಮ್ಮ ಆಟೋದ ಹಿಂದೆ ಬರೆದ ಸಾಲುಗಳ ಮೂಲಕವೇ ಸಖತ್‌ ಸುದ್ದಿಯಲ್ಲಿದ್ದಾರೆ.

ತಾವು ಆಟೋದ ಹಿಂದೆ ಬರೆದ ಸಾಲುಗಳ ಬಗ್ಗೆ ಮಾತನಾಡಿದ ರಾಂಬಾಬು, “ಬಿಟ್ಟಿ ಭಾಗ್ಯಗಳಿಂದ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು. ಸರ್ಕಾರಗಳು ಉಚಿತ ಸವಲತ್ತುಗಳನ್ನು ನೀಡುವ ಬದಲು ಯುವಕರನ್ನು ಸಬಲೀಕರಣಗೊಳಿಸುವ ಉದ್ಯೋಗ ಸೃಷ್ಟಿ ಯೋಜನೆಗಳನ್ನು ಜಾರಿಗೊಳಿಸುವತ್ತ ಗಮನ ಹರಿಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಬ್ಲಿಕ್‌ನಲ್ಲಿಯೇ ಮುದ್ದಿನ ಹೆಂಡ್ತಿಗಾಗಿ ಗಂಡನ ರೊಮ್ಯಾಂಟಿಕ್‌ ಡ್ಯಾನ್ಸ್;‌ ವೈರಲ್‌ ಆಯ್ತು ವಿಡಿಯೋ

ಕಳೆದ ಹತ್ತು ವರ್ಷಗಳಿಂದ ತಮ್ಮ ಆಟೋದ ಹಿಂದೆ ಒಂದಲ್ಲಾ ಒಂದು ಉತ್ತಮ ಸಾಲು ಅಥವಾ ಕೊಟೇಶನ್ ಬರೆಯುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಸಾರುವ ಕೆಲಸವನ್ನು ಮಾಡುತ್ತಿದ್ದಾರೆ. ಇದೀಗ ಇವರು ಬಿಟ್ಟಿ ಭಾಗ್ಯಗಳ ಕುರಿತು ತಮ್ಮ ಆಟೋದ ಹಿಂದೆ ಬರೆದ ಸಾಲುಗಳು ಭಾರೀ ವೈರಲ್‌ ಆಗಿದ್ದು, ಈ ಮೂಲಕ ರಾಂಬಾಬು ನೆಟ್ಟಿಗರಿಂದ ಪ್ರಶಂಸೆಯನ್ನು ಪಡೆದಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ