AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೀಪಿ ಶಿಕ್ಷೆ; ದಾರಿಹೋಕನ ಕಿವಿಯಲ್ಲಿ ಪೀಪಿ ಊದಿದ ಯುವಕರಿಗೆ ಪೊಲೀಸರಿಂದ ಪರತ್ ಪಾವತಿ

Punishment : ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂಥ ಪರಿಸ್ಥಿತಿ ಈ ಕಿಡಿಗೇಡಿ ಯುವಕರದ್ದಾಗಿದೆ. ಆಟಿಕೆ ಪೀಪಿಗಳನ್ನು ಇವರಿಂದ ವಶಪಡಿಸಿಕೊಂಡು ಮನೆಗೆ ಕಳಿಸಿದ್ದಾರೆ ಪೊಲೀಸರು. ನೋಡಿ ವೈರಲ್ ವಿಡಿಯೋ.

ಪೀಪಿ ಶಿಕ್ಷೆ; ದಾರಿಹೋಕನ ಕಿವಿಯಲ್ಲಿ ಪೀಪಿ ಊದಿದ ಯುವಕರಿಗೆ ಪೊಲೀಸರಿಂದ ಪರತ್ ಪಾವತಿ
ಆರೋಪಿಯ ಕಿವಿಯಲ್ಲಿ ಪೀಪಿ ಊದಿಸುತ್ತಿರುವ ಪೊಲೀಸ್
TV9 Web
| Updated By: ಶ್ರೀದೇವಿ ಕಳಸದ|

Updated on:Oct 07, 2022 | 12:19 PM

Share

Viral Video : ಕಿಡಿಗೇಡಿತನ ಮಾಡಬೇಡಿ ಎಂದು ಚಿಕ್ಕಮಕ್ಕಳಿಗೆ ತಿಳಿಸಿ ಹೇಳಬಹುದು. ಬಯ್ದು ಹೇಳಬಹುದು ಕೊನೆಗೆ ಒಂದು ಏಟು ಕೊಟ್ಟೂ ಹೇಳಬಹುದು. ಏಕೆಂದರೆ ಮಕ್ಕಳೆಂದರೆ ಮಕ್ಕಳೇ. ಅರಿವಿಲ್ಲದೆಯೇ ಕಿಡಿಗೇಡಿತನಕ್ಕೆ ಇಳಿಯುವಂಥವು. ಆದರೆ, ಎಲ್ಲ ಅರಿವಿದ್ದೇ ಇನ್ನೊಬ್ಬರಿಗೆ ಅದರಲ್ಲೂ ಅಪರಿಚಿತರಿಗೆ ಕಿರುಕುಳ ಕೊಡುವ ‘ದೊಡ್ಡಮಕ್ಕಳಿಗೆ’ ಅರ್ಥ ಮಾಡಿಸುವುದು ಹೇಗೆ? ಪ್ರತಿಯಾಗಿ ಶಿಕ್ಷೆಯನ್ನೇ ನೀಡಬೇಕಾಗುತ್ತದೆ. ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದ ಈ ಘಟನೆಯ ವಿಡಿಯೋ ನೋಡಿ. ಈ ಯುವಕರ ಕಿಡಿಗೇಡಿತನವನ್ನೂ ಮತ್ತು ಅದಕ್ಕೆ ತಕ್ಕಂತೆ ಜನ್ಮದಲ್ಲಿ ಇಂಥದನ್ನು ಎಂದೂ ಮಾಡಬಾರದೆಂದು ಮನವರಿಕೆಯಾಗುವಂತೆ ಪೊಲೀಸರು ನೀಡಿದ ಪೀಪಿ ಶಿಕ್ಷೆಯನ್ನೂ!

ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಯಾರೋ ಒಬ್ಬ ನಡೆದುಕೊಂಡು ಹೋಗುತ್ತಿರುವಾಗ ಈ ಯುವಕರು ಆಟಿಕೆಯ ಪೀಪಿಯನ್ನು ಅವನ ಕಿವಿಯಲ್ಲಿ ಊದಿದ್ದಾರೆ. ಇದ್ದಕ್ಕಿದ್ದಂತೆ ಹೀಗೆ ಮಾಡಿದರೆ ಯಾರಿಗೆ ತಾನೆ ಭಯವಾಗುವುದಿಲ್ಲ? ಅಲ್ಲಿಯೇ ಇದ್ದ ಪೊಲೀಸ್​ ಇವರ ಕೃತ್ಯವನ್ನು ಗಮನಿಸಿ ರಸ್ತೆಯಲ್ಲೇ ತಡೆದಿದ್ದಾರೆ. ನಂತರ ಪೀಪಿ ಊದಿಸಿಕೊಂಡವನಿಂದಲೇ ಈ ಇಬ್ಬರೂ ಯುವಕರ ಕಿವಿಗಳು ಕಿತ್ತುಹೋಗುವಂತೆ ಎರಡೂ ಕಿವಿಯಲ್ಲಿ ಬಾರಿಬಾರಿ ಪೀಪಿ ಊದಿಸಿ ಕಂಗಾಲಾಗಿಸಿದ್ದಾರೆ. ಮತ್ತೆ ಇಂಥ ಕೃತ್ಯಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿ ಅವರಿಂದ ಆಟಿಕೆ ಪೀಪಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಘಟನೆಯನ್ನು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಮಾಷೆ ತೊಂದರೆ ಕೊಡುವುದು ಬೇರೆ. ಅದೂ ಅಪರಿಚಿತರಿಗೇ ಆಗಲಿ ಪರಿಚಿತರಿಗೇ ಆಗಲಿ. ವಿವೇಚನೆ ಬಹಳ ಮುಖ್ಯ. ಲಂಗುಲಗಾಮಿಲ್ಲದೆ ಓಡಾಡುವ ಹರೆಯದ ಮನಸ್ಸನ್ನು ಕಟ್ಟಿಹಾಕಿಕೊಳ್ಳದಿದ್ದರೆ ಹೀಗೆಲ್ಲ ಅಸಹ್ಯಗಳು ಘಟಿಸುತ್ತವೆ. ಊರೆಲ್ಲ ಇದನ್ನು ನೋಡುತ್ತದೆ.

ಮಾಡಿದ್ದುಣ್ಣೋ ಮಾರಾಯಾ ಅಂತ ಸುಮ್ಮನೇ ಹೇಳಿಲ್ಲವಲ್ಲ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:16 pm, Fri, 7 October 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ