AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2020ರ ಟ್ವೀಟ್​ ಪರ್ಸನ್ ಟ್ರಂಪ್, ಟಾಪ್​ 10ರಲ್ಲಿ ಬಿಡೆನ್-ಮೋದಿಗೂ ಸ್ಥಾನ

ಟಾಪ್-10ರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು 7ನೇ ಸ್ಥಾನದಲ್ಲಿದೆ ಎಂದು ಟ್ವಿಟರ್​ನ ವಾರ್ಷಿಕ ಪರಾಮರ್ಶೆ ವರದಿ ತಿಳಿಸಿದೆ.

2020ರ ಟ್ವೀಟ್​ ಪರ್ಸನ್ ಟ್ರಂಪ್, ಟಾಪ್​ 10ರಲ್ಲಿ ಬಿಡೆನ್-ಮೋದಿಗೂ ಸ್ಥಾನ
ಜೋ ಬಿಡೆನ್ ಮತ್ತು ಡೊನಾಲ್ಡ್ ಟ್ರಂಪ್
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 10, 2020 | 4:29 PM

Share

ವಾಷಿಂಗ್​ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಅವರ ಹೆಸರುಗಳು 2020ರ ಟಾಪ್​-10 ಟ್ವೀಟ್​ಗಳಲ್ಲಿ ಕ್ರಮವಾಗಿ ಮೊದಲ ಮತ್ತು 2ನೇ ಸ್ಥಾನ ಪಡೆದಿವೆ. ಟಾಪ್-10ರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು 7ನೇ ಸ್ಥಾನದಲ್ಲಿದೆ ಎಂದು ಟ್ವಿಟರ್​ನ ವಾರ್ಷಿಕ ಪರಾಮರ್ಶೆ ವರದಿ ತಿಳಿಸಿದೆ.

ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ನಿಯೋಜಿತರಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಈ ಪಟ್ಟಿಯಲ್ಲಿರುವ ಏಕೈಕ ಮಹಿಳೆ. ಅವರ ಹೆಸರು 10ನೇ ಸ್ಥಾನದಲ್ಲಿದೆ.

ಫೇಸ್​ಬುಕ್ ಮೂಲಕ ಜನರು ವಿಶ್ವ ನಾಯಕರಿಂದ ಬದಲಾವಣೆ ಮತ್ತು ಉತ್ತರದಾಯಿತ್ವಕ್ಕೆ ಒತ್ತಾಯಿಸುತ್ತಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ 2020ರಲ್ಲಿ ಸುಮಾರು 70 ಕೋಟಿ ಟ್ವೀಟ್​ಗಳು ಬಂದಿವೆ. ಡೊನಾಲ್ಡ್​ ಟ್ರಂಪ್, ಜೋಬಿಡೆನ್, ಬರಾಕ್ ಒಬಾಮ, ನರೇಂದ್ರ ಮೋದಿ ಮತ್ತು ಕಮಲಾ ಹ್ಯಾರಿಸ್​ ಹೆಸರುಗಳು ಜಾಗತಿಕವಾಗಿ ಹೆಚ್ಚು ಬಳಕೆಯಾಗಿವೆ ಎಂದು ಟ್ವಿಟರ್​ನ ಗ್ರಾಹಕ ಸಂವಹನ ವಿಭಾಗದ ಮುಖ್ಯಸ್ಥರಾದ ಟ್ರೇಸಿ ಮೆಕ್​ಗ್ರಾ ಹೇಳಿದ್ದಾರೆ.

2020ರ ಜನಪ್ರಿಯ ಹ್ಯಾಷ್​ಟ್ಯಾಗ್ #COVID19 ಆಗಿತ್ತು. ಇದರ ಜೊತೆಗೆ #StayHome ಹ್ಯಾಷ್​ಟ್ಯಾಗ್ ಹೊತ್ತ ಟ್ವೀಟ್​ಗಳು ಸಹ ಗಮನಾರ್ಹ ಪ್ರಮಾಣದಲ್ಲಿ ಟ್ವೀಟ್ ಆಗಿವೆ. ಕೊರೊನಾ ಸೋಂಕಿಗೆ ಸಂಬಂಧಿಸಿದ ಸುಮಾರು 40 ಕೋಟಿ ಟ್ವೀಟ್​ಗಳು ಪೋಸ್ಟ್ ಆಗಿವೆ. #StayHome ಅತಿಹೆಚ್ಚು ಬಾರಿ ಟ್ವೀಟ್ ಆದ ಹ್ಯಾಷ್​​ಟ್ಯಾಗ್​ಗಳಲ್ಲಿ 3ನೇ ಸ್ಥಾನದಲ್ಲಿದೆ.

2ನೇ ಸ್ಥಾನದಲ್ಲಿರುವ ಹ್ಯಾಷ್​ಟ್ಯಾಗ್ #BlackLivesMatter. ಪೊಲೀಸ್ ದೌರ್ಜನ್ಯದಿಂದ ಜಾರ್ಜ್​ ಫ್ಲಾಯ್ಡ್​ ನಿಧನರಾದ ನಂತರ #BlackLivesMatter ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಪ್ರತಿಭಟನೆಯ ಅಸ್ತ್ರವಾಯಿತು. ಅತಿಹೆಚ್ಚು ಬಾರಿ ಟ್ವೀಟ್ ಆದ ಹೆಸರುಗಳ ಪಟ್ಟಿಯಲ್ಲಿ ಫ್ಲಾಯ್ಡ್​ Floyd 3ನೇ ಸ್ಥಾನದಲ್ಲಿದೆ.

Google Search | ಗೂಗಲ್​ನಲ್ಲಿ ಈ ವರ್ಷ ಹೆಚ್ಚು ಜನರು ಹುಡುಕಿದ್ದೇನು?

Follow Us
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ