AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯ ಕಲಕುವ ವಿಡಿಯೋ! ತಾಯಿಯ ಸಮಾಧಿಗೆ ಕಿಂಡಿ ಮಾಡಿ, ಅಮ್ಮ ಅಲ್ಲಿದ್ದಾಳಾ ಎಂದು ಇಣುಕಿ ನೋಡಿದ ಕಂದಮ್ಮ ಏನು ಮಾಡಿದ ನೋಡಿ

ಅಮ್ಮಾ..ಅಮ್ಮಾ: ತಾಯಿಯ ಸಮಾಧಿಯಲ್ಲಿ ಈ ಮಗು ಮಾಡಿದ್ದನ್ನು ನೋಡಿದರೆ ಕಣ್ಣೀರು ನಿಲ್ಲುವುದಿಲ್ಲ.. ಹೃದಯ ಕಲಕುವ ವಿಡಿಯೋ ನೀವೂ ನೋಡಿ 'ತಾಯಿ' ಸೃಷ್ಟಿಯ ಸಾಕಾರ ರೂಪ. ಅಮ್ಮ ಜೀವಂತ ದೇವರು. ದೇವರಾದರೂ ಅಮ್ಮನಿಗೆ ತಲೆಬಾಗಬೇಕು..

ಹೃದಯ ಕಲಕುವ ವಿಡಿಯೋ! ತಾಯಿಯ ಸಮಾಧಿಗೆ ಕಿಂಡಿ ಮಾಡಿ, ಅಮ್ಮ ಅಲ್ಲಿದ್ದಾಳಾ ಎಂದು ಇಣುಕಿ ನೋಡಿದ ಕಂದಮ್ಮ ಏನು ಮಾಡಿದ ನೋಡಿ
ತಾಯಿಯ ಸಮಾಧಿಗೆ ಕಿಂಡಿ ಮಾಡಿ, ಅಮ್ಮ ಅಲ್ಲಿದ್ದಾಳಾ ಎಂದು ಇಣುಕಿ ನೋಡಿದ ಕಂದಮ್ಮ, ಹೃದಯ ಕಲಕುವ ವಿಡಿಯೋ!
TV9 Web
| Edited By: |

Updated on:Aug 29, 2022 | 10:02 PM

Share

ಅಮ್ಮನಿಗಾಗಿ ಪರಿತಪಿಸುತ್ತಿರುವ ಮಗು ಮಾಡಿದ್ದೇನು? ತಾಯಿಯ ಸಮಾಧಿಯಲ್ಲಿ ಈ ಮಗು ಮಾಡಿದ್ದನ್ನು ನೋಡಿದರೆ ಕಣ್ಣೀರು ನಿಲ್ಲುವುದಿಲ್ಲ.. ಹೃದಯ ಕಲಕುವ ವಿಡಿಯೋ ನೀವೂ ನೋಡಿ ‘ತಾಯಿ’ ಸೃಷ್ಟಿಯ ಸಾಕಾರ ರೂಪ. ಅಮ್ಮ ಜೀವಂತ ದೇವರು. ದೇವರಾದರೂ ಅಮ್ಮನಿಗೆ ತಲೆಬಾಗಬೇಕು.. ತಾಯಿ ಮಕ್ಕಳನ್ನು ಮಾತ್ರ ರಕ್ಷಿಸುವುದಿಲ್ಲ. ಮಕ್ಕಳ ಸುಖವೇ ತನ್ನ ಸುಖ ಎಂದುಕೊಳ್ಳುತ್ತಾಳೆ.. ಅವರೇ ತನ್ನ ಪ್ರಪಂಚ ಎಂದುಕೊಳ್ಳುತ್ತಾಳೆ. ಅಮ್ಮನ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ‘ಅಮ್ಮ’ನ ಬಗ್ಗೆ ಏನೇ ಹೇಳಲಿ. ಅಂತಹ ತಾಯಿ ನಮ್ಮೊಂದಿಗಿಲ್ಲದಿದ್ದರೆ ಆಗುವ ನೋವು ಅವರ್ಣನೀಯ. ನಾವೀಗ ತೋರಿಸಲು ಹೊರಟಿರುವ ವೀಡಿಯೋ ಸಹ ಹಾಗಿದೆ. ಅದನ್ನು ನೋಡಿದಾಗ ಕಣ್ಣೀರು ನಿಲ್ಲುವುದಿಲ್ಲ.

ವೈರಲ್ ಆಗಿರುವ ವಿಡಿಯೋ ಪ್ರಕಾರ ಮಗುವೊಂದು ತನ್ನ ತಾಯಿಯ ಸಮಾಧಿ ಬಳಿ ‘ಅಮ್ಮಾ..ಅಮ್ಮಾ’ ಎಂದು ಅಳುತ್ತಿರುವುದನ್ನು ನೀವು ನೋಡಬಹುದು. ಇದು ಹಳೆಯ ವಿಡಿಯೋ… ಆದರೆ ಮತ್ತೊಮ್ಮೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಮಗುವಿನ ತಾಯಿ ಮೃತಪಟ್ಟಿದ್ದರು. ಎರಡು ವರ್ಷದ ಮಗು ತನ್ನ ಅಜ್ಜಿಯನ್ನು ತನ್ನ ತಾಯಿ ಎಲ್ಲಿ ಎಂದು ಕೇಳಿದಾಗ, ಅವಳು ಭೂಮಿಯತ್ತ ತೋರಿಸಿ, ಆ ಸಮಾಧಿಯಲ್ಲಿ ಮಲಗಿದ್ದಾಳೆ ಎಂದು ತೋರಿಸಿದಳು.

ಹೀಗಾಗಿ ಮಗು ತನ್ನ ತಾಯಿಯ ಸಮಾಧಿ ಬಳಿ ರಂಧ್ರ ಮಾಡಿ ‘ಅಮ್ಮಾ… ಅಮ್ಮಾ’ ಎಂದು ಕರೆದಿದೆ. ಎಷ್ಟು ಕರೆದರೂ ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಬಾಲಕ ಅಳುತ್ತಾ ತನ್ನ ನೋವು ತೋಡಿಕೊಂಡಿದ್ದಾನೆ. ಇದೀಗ ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟಿಜನ್‌ಗಳು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮಗುವಿನ ನೋವು ನೋಡಿ.. ನೆಟ್ಟಿಗರು ಕಣ್ಣೀರು ಹಾಕುತ್ತಾ ಕಾಮೆಂಟ್ ಮಾಡುತ್ತಿದ್ದಾರೆ.

Published On - 10:01 pm, Mon, 29 August 22

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ