AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Railway Station: ಇನ್ನು ಮುಂದೆ ರೈಲು ನಿಲ್ದಾಣದಲ್ಲಿ ಹಲ್ಲುಜ್ಜಿದರೆ ಭಾರೀ ದಂಡ ಕಟ್ಟಬೇಕು

ರೈಲ್ವೇ ಕಾಯಿದೆ 1989 ರ ಪ್ರಕಾರ, ರೈಲ್ವೆ ಆವರಣದಲ್ಲಿ ಗೊತ್ತುಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಬೇರೆ ಕಡೆ ಹಲ್ಲುಜ್ಜುವುದು, ಉಗುಳುವುದು, ಶೌಚಾಲಯ, ಪಾತ್ರೆಗಳನ್ನು ತೊಳೆಯುವುದು, ಬಟ್ಟೆ ಒಗೆಯುವುದು ಅಪರಾಧವಾಗಿದೆ. ಈ ನಿಷೇಧಿತ ಕೃತ್ಯಗಳನ್ನು ಎಸಗುವವರ ಮೇಲೇ ಭಾರೀ ದಂಡ ವಿಧಿಸಲಾಗುವುದು.

Railway Station: ಇನ್ನು ಮುಂದೆ ರೈಲು ನಿಲ್ದಾಣದಲ್ಲಿ ಹಲ್ಲುಜ್ಜಿದರೆ ಭಾರೀ ದಂಡ ಕಟ್ಟಬೇಕು
ರೈಲು ನಿಲ್ದಾಣದಲ್ಲಿ ಹಲ್ಲುಜ್ಜಿದರೆ ಭಾರೀ ದಂಡ ಕಟ್ಟಬೇಕುImage Credit source: Pinterest
ಅಕ್ಷತಾ ವರ್ಕಾಡಿ
|

Updated on:Feb 13, 2024 | 5:49 PM

Share

ರೈಲಿನಲ್ಲಿ ಪ್ರಯಾಣಿಸುವುದು ಸುರಕ್ಷಿತ ಮತ್ತು ವೆಚ್ಚದಾಯಕ ಪ್ರಯಾಣದ ಮಾರ್ಗವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ, ರೈಲ್ವೆ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದರೂ ಕೂಡ ಹೆಚ್ಚಿನ ಪ್ರಯಾಣಿಕರಿಗೆ ಈ ಕುರಿತು ತಿಳಿದಿಲ್ಲ. ರೈಲ್ವೆ ನಿಲ್ದಾಣದಲ್ಲಿ ಹಲ್ಲುಜ್ಜುವುದು ಅಪರಾಧ ಎಂದು ನಿಮಗೆ ತಿಳಿದಿದೆಯೇ? ನೀವು ಹೀಗೆ ಮಾಡಿದರೆ, ಸಂಬಂಧಿತ ನಿಯಮಗಳ ಪ್ರಕಾರ ನಿಮಗೆ ಶಿಕ್ಷೆಯಾಗುತ್ತದೆ. ರೈಲ್ವೇ ನಿಲ್ದಾಣದಲ್ಲಿ ಹಲ್ಲುಜ್ಜುವ ವೇಳೆ ಸಿಕ್ಕಿಬಿದ್ದರೆ ಏನು ಕ್ರಮ? ನಿಯಮಗಳೇನು? ಎಷ್ಟು ದಂಡ ಕಟ್ಟಬೇಕು? ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿ ತಿಳಿದುಕೊಳ್ಳಿ.

ಬೆಳಗ್ಗೆ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿರುವ ನಲ್ಲಿಗಳಲ್ಲಿ ಹಲ್ಲುಜ್ಜುವುದು ಮತ್ತು ಊಟದ ಪಾತ್ರೆಗಳನ್ನು ತೊಳೆಯುವುದನ್ನು ನೀವು ನೋಡಿರುತ್ತೀರಿ. ಆದರೆ ರೈಲ್ವೇ ನಿಲ್ದಾಣದ ಪ್ರದೇಶದ ನಲ್ಲಿ ನೀರಿನ ಪ್ರದೇಶವನ್ನು ಹೊರತುಪಡಿಸಿ ಬೇರೆ ಎಲ್ಲಿಯಾದರೂ ಹಲ್ಲು ಹಲ್ಲುಜ್ಜುವುದು ಅಪರಾಧ. ಇಂತಹ ಕೆಲಸಗಳನ್ನು ಮಾಡುವವರಿಗೆ ರೈಲ್ವೇ ಇಲಾಖೆ ದಂಡ ವಿಧಿಸಬಹುದು. ಪ್ರಮುಖ ರೈಲ್ವೆ ನಿಯಮಗಳು ಇಲ್ಲಿವೆ.

ರೈಲ್ವೇ ಕಾಯಿದೆ 1989 ರ ಪ್ರಕಾರ, ರೈಲ್ವೆ ಆವರಣದಲ್ಲಿ ಗೊತ್ತುಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಬೇರೆಡೆ ಬ್ರಷ್ ಮಾಡುವುದು, ಉಗುಳುವುದು, ಶೌಚಾಲಯ, ಪಾತ್ರೆಗಳನ್ನು ತೊಳೆಯುವುದು, ಬಟ್ಟೆ ಒಗೆಯುವುದು ಅಪರಾಧವಾಗಿದೆ. ಈ ಕಾರ್ಯಗಳನ್ನು ಶೌಚಾಲಯಗಳು ಮತ್ತು ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಮಾಡಬೇಕು. ಈ ನಿಷೇಧಿತ ಕೃತ್ಯಗಳನ್ನು ಎಸಗುವವರನ್ನು ರೈಲ್ವೇ ಸಿಬ್ಬಂದಿ ಹಿಡಿದರೆ, ಪ್ರಯಾಣಿಕರಿಗೆ ರೂ. 500 ದಂಡ ವಿಧಿಸಬಹುದು.

ಈ ನಿಯಮವನ್ನೂ ತಿಳಿದುಕೊಳ್ಳಿ..

ನೀವು ರೈಲ್ವೇ ಅಥವಾ ರೈಲ್ವೆ ಆವರಣದಲ್ಲಿ ಎಲ್ಲಿಯಾದರೂ ಏನನ್ನಾದರೂ ಬರೆದರೆ ಅಥವಾ ಯಾವುದೇ ಪೋಸ್ಟರ್ ಅನ್ನು ಹಾಕಿದರೆ, ಅದು ಕೂಡ ರೈಲ್ವೆ ಕಾಯಿದೆಯಡಿ ಅಪರಾಧವಾಗಿದೆ. ಇದಕ್ಕೆ ದಂಡ ವಿಧಿಸಬಹುದು.

ಚಿಪ್ಸ್ ಅಥವಾ ಇತರ ವಸ್ತುಗಳನ್ನು ತಿಂದ ನಂತರ, ಅನೇಕ ಪ್ರಯಾಣಿಕರು ಹೊದಿಕೆಗಳನ್ನು ನಿಲ್ದಾಣದ ಆವರಣದಲ್ಲಿರುವ ಖಾಲಿ ಜಾಗದಲ್ಲಿ ಎಸೆಯುತ್ತಾರೆ. ಇದೂ ಕೂಡ ಅಪರಾಧವೇ. ಗೊತ್ತುಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಕಸವನ್ನು ಎಲ್ಲಿಯೂ ಸುರಿಯಬಾರದು. ಗೊತ್ತುಪಡಿಸಿದ ಕಂಟೈನರ್‌ನಲ್ಲಿ ಮಾತ್ರ ಕಸವನ್ನು ಎಸೆಯಿರಿ ಮತ್ತು ಖಾಲಿ ಇರುವ ರೈಲ್ವೆ ಆವರಣದಲ್ಲಿ ಅಲ್ಲ.

Published On - 5:46 pm, Tue, 13 February 24

ಜುಲೈ 23 ಟೀ, 24ರಂದು ಸಿಗರೇಟು ಗುಟ್ಕಾ ಮಾರಾಟ ಬಂದ್, 25 ರಂದು ಪ್ರತಿಭಟನೆ
ಜುಲೈ 23 ಟೀ, 24ರಂದು ಸಿಗರೇಟು ಗುಟ್ಕಾ ಮಾರಾಟ ಬಂದ್, 25 ರಂದು ಪ್ರತಿಭಟನೆ
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ