Viral News: ಬೇಗ ಅಪಘಾತ ಮಾಡಿ; ಸಿಕ್ಕಾಪಟ್ಟೆ ಟ್ರೋಲ್ ಆಯ್ತು ಮಂಗಳೂರು- ಮಡಿಕೇರಿ ಹೆದ್ದಾರಿಯ ಬೋರ್ಡ್ 

ಕೆಲವೊಮ್ಮೆ ಅನುವಾದ ಭಾರೀ ಅವಘಡಕ್ಕೆ ಕಾರಣವಾಗುತ್ತದೆ. ಗೂಗಲ್ ಟ್ರಾನ್ಸ್​ಲೇಟ್ ಮಾಡುವುದರಿಂದ ಆ ವಾಕ್ಯ ಅಭಾಸವಾಗಿರುವ ಅದೆಷ್ಟೋ ಉದಾಹರಣೆಗಳು ಇವೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದ ಮಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ಸೈನ್​ಬೋರ್ಡ್​ ಒಂದು ಭಾರೀ ವೈರಲ್ ಆಗಿದೆ. ಇದನ್ನು ಎಕ್ಸ್​ನಲ್ಲಿ ಟ್ರೋಲ್ ಮಾಡಲಾಗುತ್ತಿದೆ.

Viral News: ಬೇಗ ಅಪಘಾತ ಮಾಡಿ; ಸಿಕ್ಕಾಪಟ್ಟೆ ಟ್ರೋಲ್ ಆಯ್ತು ಮಂಗಳೂರು- ಮಡಿಕೇರಿ ಹೆದ್ದಾರಿಯ ಬೋರ್ಡ್ 
ಮಂಗಳೂರಿನ ರಸ್ತೆಯ ಬೋರ್ಡ್
Follow us
|

Updated on:Jul 03, 2024 | 9:00 PM

ಮಂಗಳೂರು: ಕರ್ನಾಟಕ ರಾಜ್ಯದ ಮಂಗಳೂರು ಹೆದ್ದಾರಿಯಲ್ಲಿ ಅವಸರವೇ ಅಪಘಾತಕ್ಕೆ ಕಾರಣ ಎಂಬ ಎಚ್ಚರಿಕೆಯ ಬೋರ್ಡ್​ ಹಾಕಲಾಗಿದೆ. ಅದರ ಕೆಳಗೆ ಇಂಗ್ಲಿಷ್​ನಲ್ಲಿ ಅನುವಾದ ಮಾಡಿರುವ ಸಾಲುಗಳನ್ನು ಕೂಡ ಹಾಕಲಾಗಿದ್ದು, ಗೂಗಲ್ ಟ್ರಾನ್ಸಲೇಟ್ ಮಾಡಿರುವ ಭೂಪರು ಈ ಕನ್ನಡದ ವಾಕ್ಯವನ್ನು Urgent make an Accident (ತುರ್ತಾಗಿ ಅಪಘಾತ ಮಾಡಿ) ಎಂದು ಅನುವಾದಿಸಿದ್ದಾರೆ. ಈ ಬೋರ್ಡ್​ನ ಫೋಟೋ ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಭಾರೀ ಟ್ರೋಲ್ ಆಗುತ್ತಿದೆ.

ಮಂಗಳೂರು ಹೆದ್ದಾರಿಯಲ್ಲಿನ ಈ ಬೋರ್ಡ್​ನ ಫೋಟೋವನ್ನು ಎಕ್ಸ್​ನಲ್ಲಿ ಕೊಡಗು ಕನೆಕ್ಟ್​ ಪೇಜ್ ಪೋಸ್ಟ್ ಮಾಡಿದೆ. ಈ ಪೋಸ್ಟನ್ನು ನೂರಾರು ಜನರು ರೀಟ್ವೀಟ್ ಮಾಡಿದ್ದು, ವೈರಲ್ ಆಗಿದೆ.

‘ಕೊಡಗು ಕನೆಕ್ಟ್’ ಹೆಸರಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಸೈನ್‌ಬೋರ್ಡ್‌ನ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೈನ್‌ಬೋರ್ಡ್‌ನ ಕನ್ನಡ ಬರಹದ ಇಂಗ್ಲಿಷ್ ಅನುವಾದವನ್ನು “ತುರ್ತಾಗಿ ಅಪಘಾತ ಮಾಡಿ” ಎಂದು ಬರೆಯಲಾಗಿದೆ. ಇದನ್ನು ಇಂಗ್ಲಿಷ್​ನಲ್ಲಿ Overspeeding is the reason for Accidents ಎಂದು ಬರೆಯುವ ಬದಲು Urgent make an Accident ಎಂದು ಅನುವಾದಿಸಲಾಗಿದೆ.

ಇದನ್ನೂ ಓದಿ: Viral Video: ಕೇದಾರನಾಥ ದೇಗುಲದ ಬಳಿ ಭಾರೀ ಹಿಮಪಾತ; ಭಯಾನಕ ವಿಡಿಯೋ ವೈರಲ್

ಕರ್ನಾಟಕ ಹೆದ್ದಾರಿಯಲ್ಲಿನ ಎಚ್ಚರಿಕೆ ಫಲಕ ಅಂತರ್ಜಾಲದಲ್ಲಿ ಟ್ರೋಲ್ ಆಗಿದ್ದು, ‘ತಪ್ಪಾಗಿ ಅನುವಾದಿಸಲಾದ ಈ ಬೋರ್ಡನ್ನು ಇನ್ನೂ ಸರಿ ಮಾಡಿಲ್ಲವೇ?’ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.

ಕರ್ನಾಟಕದ ಮಂಗಳೂರು-ಕೊಡಗು ಸಮೀಪದ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಈ ತುರ್ತು ಸೂಚನಾ ಫಲಕ ಅಂತರ್ಜಾಲದ ಗಮನ ಸೆಳೆದಿದೆ.

ಇಂಗ್ಲಿಷ್‌ನಲ್ಲಿ ಸೈನ್ ಬೋರ್ಡ್‌ಗಳನ್ನು ಭಾಷಾಂತರಿಸುವ ಸರ್ಕಾರದ ಪ್ರಯತ್ನವನ್ನು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ಈ ಬೋರ್ಡನ್ನು ವಿಮಾ ಏಜೆಂಟ್‌ಗಳಿಗೆ ಟ್ಯಾಗ್ ಮಾಡಿ. ಅವರು ಈ ಬೋರ್ಡನ್ನು ಬೇಗನೆ ಸರಿಪಡಿಸುತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Shocking Video: ಪಿಕ್ನಿಕ್ ಹೋದ ಒಂದೇ ಕುಟುಂಬದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್

ಈ ಬೋರ್ಡ್​ ನೋಡಿದ ಚಾಲಕರು ಕನ್ನಡದ ವಾಕ್ಯವನ್ನು ಫಾಲೋ ಮಾಡಬೇಕೋ ಅಥವಾ ಇಂಗ್ಲಿಷ್ ವಾಕ್ಯವನ್ನು ಫಾಲೋ ಮಾಡಬೇಕೋ ಎಂದು ಗೊಂದಲಕ್ಕೆ ಒಳಗಾಗುವುದು ಗ್ಯಾರಂಟಿ ಎಂದು ಇನ್ನು ಕೆಲವರು ಪೋಸ್ಟ್ ಮಾಡಿದ್ದಾರೆ.

ಈ ಬೋರ್ಡ್​ ಮಂಗಳೂರು- ಕೊಡಗು ಹೆದ್ದಾರಿಯಲ್ಲಿ ಕಂಡುಬಂದಿದೆ. ಸುಳ್ಯದ ಬಳಿಯ ಸಂಪಾಜೆ ಹತ್ತಿರ ಮಡಿಕೇರಿ ಘಾಟ್ ಆರಂಭವಾಗುವುದಕ್ಕೂ ಮುನ್ನ ಈ ಬೋರ್ಡ್ ಹಾಕಲಾಗಿದೆ. ಮಡಿಕೇರಿಯಿಂದ ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈ ಬೋರ್ಡ್ ಇದೆ. ಕೊಡಗು ಕನೆಕ್ಟ್​ ಪೋಸ್ಟ್ ಮಾಡಿರುವ ಈ ಫೋಟೋಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕೃತ ಪೇಜನ್ನು ಸಹ ಟ್ಯಾಗ್ ಮಾಡಲಾಗಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:00 pm, Wed, 3 July 24

ತಾಜಾ ಸುದ್ದಿ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?