AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮನೆ ಮಕ್ಕಳನ್ನು ರಕ್ಷಿಸಲು ಕಾಳಿಂಗ ಸರ್ಪವನ್ನೇ ಕಚ್ಚಿ ಕೊಂದ ಪಿಟ್‌ ಬುಲ್‌

ಸಾಕು ಪ್ರಾಣಿಗಳು ಮನೆ ಮಂದಿಯನ್ನು ರಕ್ಷಿಸುವ ಸಲುವಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಅದೆಷ್ಟೋ ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮನೆ ಬಳಿ ಬಂದ ಕಾಳಿಂಗ ಸರ್ಪದಿಂದ ಮನೆ ಮಕ್ಕಳನ್ನು ರಕ್ಷಿಸಲು ಪಿಟ್‌ ಬುಲ್‌ ತಳಿಯ ಶ್ವಾನ ವಿಷ ಪೂರಿತ ಹಾವಿನ ಜೊತೆಗೆ ಕಾದಾಡಿ, ಕೊನೆಗೆ ಆ ಹಾವನ್ನೇ ಸಾಯಿಸಿದೆ. ಸದ್ಯ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಮನೆ ಮಕ್ಕಳನ್ನು ರಕ್ಷಿಸಲು ಕಾಳಿಂಗ ಸರ್ಪವನ್ನೇ ಕಚ್ಚಿ ಕೊಂದ ಪಿಟ್‌ ಬುಲ್‌
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Sep 25, 2024 | 3:38 PM

Share

ನಿಷ್ಠೆ ಎಂಬ ಪದದ ಬಗ್ಗೆ ಮಾತನಾಡುವಾಗ ಮೊದಲು ನೆನಪಿಗೆ ಬರುವುದೇ ಶ್ವಾನ. ಹೌದು ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ತಮಗೆ ತುತ್ತು ಅನ್ನ ನೀಡಿ ಸಲಹುವ ಮಾಲೀಕರಿಗಾಗಿ ಈ ಶ್ವಾನಗಳು ಎಂತಹ ಕಷ್ಟಗಳನ್ನು ಸಹ ಎದುರಿಸುತ್ತವೆ. ಸಾಕು ಪ್ರಾಣಿಗಳು ಮನೆ ಮಂದಿಯನ್ನು ರಕ್ಷಿಸುವ ಸಲುವಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಅದೆಷ್ಟೋ ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮನೆ ಬಳಿ ಬಂದ ಕಾಳಿಂಗ ಸರ್ಪದಿಂದ ಮನೆ ಮಕ್ಕಳನ್ನು ರಕ್ಷಿಸಲು ಪಿಟ್‌ ಬುಲ್‌ ಶ್ವಾನ ವಿಷ ಪೂರಿತ ಹಾವಿನ ಜೊತೆಗೆ ಕಾದಾಡಿ, ಕೊನೆಗೆ ಆ ಹಾವನ್ನೇ ಸಾಯಿಸಿದೆ. ಸದ್ಯ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದ್ದು, ಇಲ್ಲಿನ ಶಿವಗಣೇಶ್‌ ಕಾಲೋನಿಯ ಪಂಜಾಬ್‌ ಸಿಂಗ್‌ ಎಂಬವರ ಮನೆಯ ನಾಯಿ ಜೆನ್ನಿ ಗಾರ್ಡನ್‌ನಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ರಕ್ಷಿಸಲು ದೈತ್ಯ ಕಾಳಿಂಗ ಸರ್ಪವನ್ನೇ ಹೊಡೆದು ಸಾಯಿಸಿದೆ. ಮನೆ ಮಕ್ಕಳು ಗಾರ್ಡನ್‌ನಲ್ಲಿ ಆಟವಾಡುತ್ತಿದ್ದ ವೇಳೆ ಅಲ್ಲಿ ದೈತ್ಯ ಕಾಳಿಂಗ ಸರ್ಪವೊಂದು ಎಂಟ್ರಿ ಕೊಟ್ಟಿದ್ದು, ಇದನ್ನು ಕಂಡ ಜೆನ್ನಿ ಈ ಹಾವು ಮಕ್ಕಳಿಗೆ ಅಪಾಯ ಮಾಡುವ ಮುನ್ನ ಅದರ ಕಥೆಯನ್ನೇ ಮುಗಿಸಬೇಕು ಎಂದು ಓಡಿ ಹೋಗಿ ಕಾಳಿಂಗ ಸರ್ಪದೊಂಗಿದೆ ಕಾದಾಡಿ ಕೊನೆಗೆ ಅದನ್ನು ಹೊಡೆದು ಸಾಯಿಸಿದೆ. ಈ ಹಿಂದೆಯೂ ಜೆನ್ನಿ ಮನೆ ಬಳಿ ಬಂದ ಸುಮಾರು ಎಂಟರಿಂದ ಹತ್ತು ಶ್ವಾನಗಳನ್ನು ಹೊಡೆದು ಸಾಯಿಸಿದೆ ಎಂದು ಮಾಲೀಕ ಹೇಳಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ

ವಿಶಾಲ್‌ ಸಿಂಗ್‌ (vishal_rajput01) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮನೆಯ ಗಾರ್ಡನ್‌ ಬಳಿ ಬಂದ ವಿಷಪೂರಿತ ಕಾಳಿಂಗ ಸರ್ಪದೊಂದಿಗೆ ಪಿಟ್‌ ಬುಲ್‌ ಶ್ವಾನ ಕಾದಾಡುವ ದೃಶ್ಯವನ್ನು ಕಾಣಬಹುದು. ಹೀಗೆ ಗಾರ್ಡನ್‌ನಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ರಕ್ಷಿಸಲು ಶ್ವಾನ ಹಾವನ್ನು ಹೊಡೆದು ಸಾಯಿಸಿದೆ.

ಇದನ್ನೂ ಓದಿ: ಇಟಲಿ ಪ್ರಧಾನಿ ಮೆಲೋನಿಯೊಂದಿಗೆ ಎಲಾನ್ ಮಸ್ಕ್ ಡೇಟಿಂಗ್‌? ವೈರಲ್‌ ಆಯ್ತು ಫೋಟೋ

ಈ ವಿಡಿಯೋ ಫುಟೇಜ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ನಿಜಕ್ಕೂ ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ ಅಂತ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ