AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ವಿಚ್ಛೇದನದ ಬಳಿಕ ಪಾರ್ಟಿ ಆಯೋಜಿಸಿ ಸಂಭ್ರಮಿಸಿದ 45ರ ಮಹಿಳೆ! 17 ವರ್ಷದ ದಾಂಪತ್ಯ ಜೀವನದ ಕೊನೆಯ ದಿನವದು

ಪಾರ್ಟಿಯನ್ನು ಕಲರ್ಫುಲ್ ಎಂಬ ಥೀಮ್​ನೊಂದಿಗೆ ಆಯೋಜಿಸಲಾಗಿತ್ತು. ಬಣ್ಣ ಬಣ್ಣದ ಉಡುಪಿನೊಂದಿಗೆ ಬರುವಂತೆ ತನ್ನ ಸ್ನೇಹಿತರಲ್ಲಿ ಸೋನಿಯಾ ಕೇಳಿಕೊಂಡಿದ್ದರು. ಅಂದಹಾಗೆ ಕಾಮನಬಿಲ್ಲಿನಂತೆಯೇ ಪಾರ್ಟಿ ನಡೆಯುವ ಸ್ಥಳವನ್ನು ಅಲಂಕಾರಗೊಳಿಸಿದ್ದರು.

Viral News: ವಿಚ್ಛೇದನದ ಬಳಿಕ ಪಾರ್ಟಿ ಆಯೋಜಿಸಿ ಸಂಭ್ರಮಿಸಿದ 45ರ ಮಹಿಳೆ! 17 ವರ್ಷದ ದಾಂಪತ್ಯ ಜೀವನದ ಕೊನೆಯ ದಿನವದು
(Image Courtesy: Mercury Press & Media)
Follow us
TV9 Web
| Updated By: shruti hegde

Updated on:Sep 23, 2021 | 1:06 PM

45 ವರ್ಷದ ಮಹಿಳೆ ವಿಚ್ಛೇದನ ಕೂಟವನ್ನು ಆಯೋಜಿಸಿದ್ದು, ತನ್ನ 17 ವರ್ಷದ ದಾಂಪತ್ಯವನ್ನು ಕೊನೆಗೊಳಿಸಲು ಭರ್ಜರಿ ಪಾರ್ಟಿಯನ್ನು ಏರ್ಪಡಿಸಿದ್ದರು. ಮಿರರ್ ವರದಿಯ ಪ್ರಕಾರ, ಸೋನಿಯಾ ಗುಪ್ತಾ ಬ್ರಿಟನ್ ನಿವಾಸಿ ಕಲರ್​ಫುಲ್​ ಪಾರ್ಟಿಯನ್ನು ಆಯೋಜಿಸಿದ್ದರು. ತಾನು ವಿಚ್ಛೇದನ ಪಡೆದ ಸಂತೋಷವನ್ನು ಸಂಭ್ರಮಿಸಲು ಪಾರ್ಟಿಯನ್ನು ಆಯೋಜಿಸಿ, ತನ್ನ ಆಪ್ತ ಸ್ನೇಹಿತರು ಮತ್ತು ಕುಟುಂಬದವರಿಗೆ ಆಹ್ವಾನ ನೀಡಿದ್ದರು.

ಪಾರ್ಟಿಯನ್ನು ಕಲರ್ಫುಲ್ ಎಂಬ ಥೀಮ್​ನೊಂದಿಗೆ ಆಯೋಜಿಸಲಾಗಿತ್ತು. ಬಣ್ಣ ಬಣ್ಣದ ಉಡುಪಿನೊಂದಿಗೆ ಬರುವಂತೆ ತನ್ನ ಸ್ನೇಹಿತರಲ್ಲಿ ಸೋನಿಯಾ ಕೇಳಿಕೊಂಡಿದ್ದರು. ಅಂದಹಾಗೆ ಕಾಮನಬಿಲ್ಲಿನಂತೆಯೇ ಪಾರ್ಟಿ ನಡೆಯುವ ಸ್ಥಳವನ್ನು ಅಲಂಕಾರಗೊಳಿಸಿದ್ದರು.

ನಾನು ಒಳ್ಳೆಯ ಥೀಮ್​ನೊಂದಿಗೆ ಪಾರ್ಟಿ ನಡೆಸಬೇಕೆಂದು ಬಯಸಿದೆ. ಹಾಗಾಗಿಯೇ ಬಣ್ಣದಿಂದ ಸ್ಥಳವನ್ನು ಅಲಂಕಾರಗೊಳಿಸಲಾಗಿತ್ತು. ಜತೆಗೆ ನೇರಳೆ, ಬಿಳಿ, ಕೆಂಪು, ಹಳದಿ ಹೀಗೆ ವಿವಿಧ ಬಣ್ಣಗಳ ಉಡುಪು ತೊಟ್ಟು ಬರುವಂತೆ ನನ್ನ ಸ್ನೇಹಿತರ ಬಳಿ ಕೇಳಿಕೊಂಡಿದ್ದೆ ಎಂದು ಸೋನಿಯಾ ಗುಪ್ತಾ ಹೇಳಿದ್ದಾರೆ. ಕೇಕ್ ಕತ್ತರಿಸುವ ಮೂಲಕ ತನ್ನ ವಿಚ್ಚೇದನ ಕೂಟವನ್ನು ಮಹಿಳೆ ಸಂಭ್ರಮಿಸಿದ್ದಾರೆ.

ಸೋನಿಯಾ 2003ರಲ್ಲಿ ವಿವಾಹವಾದರು ಬಳಿಕ ಬ್ರಿಟನ್​ಗೆ ತೆರಳಿದರು. ಆದರೆ ಅವರ ದಾಂಪತ್ಯದ ಜೀವನದಲ್ಲಿ ಅವರು ಸಂತೋಷವಾಗಿರಲಿಲ್ಲ. ದಂಪತಿ ಮಧ್ಯೆ ಹೊಂದಾಣಿಕೆಯೇ ಆಗುತ್ತಿರಲಿಲ್ಲ. ನಾನು ಮತ್ತೊಮ್ಮೆ ನಾನಾಗಬೇಕು ಎಂದು ಬಯಸಿದ್ದೆ. ನನ್ನ ಮದುವೆಗೂ ಮುಂಚೆ ನಾನು ತುಂಬಾ ಸಂತೋಷವಾಗಿದ್ದೆ. ಮದುವೆಯಾದ ಬಳಿಕ ನರಕದಲ್ಲಿ ವಾಸಿಸುತ್ತಿದ್ದೇನೆ ಎಂಬ ಭಾವನೆ ಹುಟ್ಟಿಕೊಂಡಿತು ಎಂದು ಸೋನಿಯಾ ಹೇಳಿದ್ದಾರೆ. ಮಾನಸಿಕವಾಗಿ ಕುಗ್ಗಿದ್ದೆ. ಇದರಿಂದ ಹೊರಬರಲು ಒದ್ದಾಡುತ್ತಿದೆ. ನನ್ನ ಮಾನಸಿಕ ಸ್ಥಿತಿಯನ್ನೂ ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಆದರೆ ನನ್ನ ಸ್ನೇಹಿತರು ನನಗೆ ಬೆಂಬಲವಾಗಿ ನಿಂತರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

Viral News: 1 ರೂ. ನಾಣ್ಯವಿದ್ದರೆ ನೀವು ಲಕ್ಷಾಧಿಪತಿಯಾಗಬಹುದು!; ಹೇಗೆ ಅಂತೀರಾ?

Viral News: ‘ಉಡುಗೊರೆ ಮೌಲ್ಯಕ್ಕೆ ತಕ್ಕಂತೆ ಮದುವೆ ಊಟ’ ಮೆನು ಕಾರ್ಡ್​ ಫೋಟೋ ವೈರಲ್

(Viral news 45 years woman celebrating colorful day after divorce ending 17 years marriage)

Published On - 1:03 pm, Thu, 23 September 21

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ