AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದ 63 ವರ್ಷಗಳಿಂದ ನಿದ್ರೆ ಮಾಡದ ವ್ಯಕ್ತಿ, ಕೊನೆಯದಾಗಿ ಮಲಗಿದ್ದು 17ನೇ ವಯಸ್ಸಿನಲ್ಲಂತೆ!

ವ್ಯಕ್ತಿಯೊಬ್ಬರು ಕಳೆದ 63 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ಲವೆಂಬುದು ಅಚ್ಚರಿಯ ಘಟನೆ.ಈ ವ್ಯಕ್ತಿ ಕಳೆದ 63 ವರ್ಷಗಳಿಂದ ನಿದ್ದೆಯೇ ಮಾಡಿಲ್ಲವಂತೆ, ಕೊನೆಯದಾಗಿ 17ನೇ ವಯಸ್ಸಿನಲ್ಲಿ ನಿದ್ರೆ ಮಾಡಿದ ನೆನಪಿದೆಯಂತೆ. ಇವರು ವಿಯೆಟ್ನಾಂನ ವ್ಯಕ್ತಿ. ಎಂಬತ್ತೊಂದು ವರ್ಷದ ಆ ವ್ಯಕ್ತಿಯ ಹೆಸರು ಥಾಯ್ ನೋಕ್. ವೃತ್ತಿಯಲ್ಲಿ ರೈತ ಅವರು ಕೊನೆಯದಾಗಿ ಮಲಗಿದ್ದು ಸ್ಪಷ್ಟವಾಗಿ ನೆನಪಿಲ್ಲದೇ ಇದ್ದರೂ ತಮ್ಮ 17ನೇ ವಯಸ್ಸಿನಲ್ಲಿ ಎಂಬುದು ನೆನಪಿದೆ. ನಂತರ ಅವರಿಗೆ ನಿದ್ರೆ ಬರಲೇ ಇಲ್ಲ.

ಕಳೆದ 63 ವರ್ಷಗಳಿಂದ ನಿದ್ರೆ ಮಾಡದ ವ್ಯಕ್ತಿ, ಕೊನೆಯದಾಗಿ ಮಲಗಿದ್ದು 17ನೇ ವಯಸ್ಸಿನಲ್ಲಂತೆ!
ಥಾಯ್
ನಯನಾ ರಾಜೀವ್
|

Updated on:Feb 04, 2025 | 2:27 PM

Share

ನೀವು ಎಷ್ಟು ಹೊತ್ತು ನಿದ್ರೆ ಮಾಡದೇ ಇರಲು ಸಾಧ್ಯ, ತುಂಬಾ ಅನಿವಾರ್ಯತೆ ಇದ್ದರೆ ಒಂದೆರಡು ದಿನಗಳ ಕಾಲ ಕಷ್ಟಪಟ್ಟು ಎಚ್ಚರವಿರಬಹುದು. ಆದರೆ ಈ ವ್ಯಕ್ತಿ ಕಳೆದ 63 ವರ್ಷಗಳಿಂದ ನಿದ್ದೆಯೇ ಮಾಡಿಲ್ಲವಂತೆ, ಕೊನೆಯದಾಗಿ 17ನೇ ವಯಸ್ಸಿನಲ್ಲಿ ನಿದ್ರೆ ಮಾಡಿದ ನೆನಪಿದೆಯಂತೆ.

ಇವರು ವಿಯೆಟ್ನಾಂನ ವ್ಯಕ್ತಿ. ಎಂಬತ್ತೊಂದು ವರ್ಷದ ಆ ವ್ಯಕ್ತಿಯ ಹೆಸರು ಥಾಯ್ ನೋಕ್. ವೃತ್ತಿಯಲ್ಲಿ ರೈತ ಅವರು ಕೊನೆಯದಾಗಿ ಮಲಗಿದ್ದು ಸ್ಪಷ್ಟವಾಗಿ ನೆನಪಿಲ್ಲದೇ ಇದ್ದರೂ ತಮ್ಮ 17ನೇ ವಯಸ್ಸಿನಲ್ಲಿ ಎಂಬುದು ನೆನಪಿದೆ. ನಂತರ ಅವರಿಗೆ ನಿದ್ರೆ ಬರಲೇ ಇಲ್ಲ.

ಆದರೆ ಅದಕ್ಕೆ ಕಾರಣವೇನೆಂದರೆ ಅದು ನಿದ್ರಾಹೀನತೆ ಕಾಯಿಲೆ, ಅನೇಕ ವೈದ್ಯರ ಬಳಿ ಕರೆದೊಯ್ದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಔಷಧಿಗಳನ್ನು ತೆಗೆದುಕೊಂಡಿದ್ದರು. ಆದರೂ ನಿದ್ರೆ ಬರಲಿಲ್ಲ ಎಂದು ಹೇಳುತ್ತಾರೆ ಥಾಯ್. 1962ರಲ್ಲಿ ಅವರಿಗೆ ಮಲೇರಿಯಾ ಬಂದಿತ್ತು, ಇದಾದ ಬಳಿಕ ನಿದ್ರಾಹೀನತೆ ಕಾಯಿಲೆ ಆವರಿಸಿಕೊಂಡಿತು ಎಂದು ಅವರು ಹೇಳುತ್ತಾರೆ.

ಬೇರೆಯವರು ಮಲಗಿರುವುದನ್ನು ನೋಡಿದಾಗ ಹೊಟ್ಟೆಕಿಚ್ಚಾಗುತ್ತದೆ, ನಾನು ಮಾತ್ರ ಹೊಲಕ್ಕೆ ಹೋಗಿ ಸದ್ದಿಲ್ಲದೆ ಕೂರುತ್ತೇನೆ. ಅಲ್ಲಿ ಏನನ್ನೂ ಮಾಡದೆ ಕುಳಿತುಕೊಳ್ಳುವುದು ನೋವಿನ ಸಂಗತಿ ಎಂದಿದ್ದಾರೆ. ಥಾಯ್ ಈಗಲೂ ಕೂಡ 50 ಕೆಜಿ ಚೀಲ ಹೊತ್ತುಕೊಂಡು 4 ಕಿ.ಮೀ ನಡೆಯಬಲ್ಲರು. ಅವರಿಗೆ 80 ವರ್ಷ ದಾಟಿದೆ. ಅವರು 63 ವರ್ಷಗಳಿಂದ ನಿದ್ರೆ ಮಾಡದಿದ್ದರೂ ಕೂಡ ಆರೋಗ್ಯವಾಗಿದ್ದಾರೆ. ಆದರೂ ನಿದ್ರಾಹೀನತೆ ಬಗ್ಗೆ ಅವರ ಕುಟುಂಬ ಚಿಂತಿತವಾಗಿದೆ.

ಮತ್ತಷ್ಟು ಓದಿ: 22 ವರ್ಷದಿಂದ ಮಲಗಿ ನಿದ್ದೆ ಮಾಡದ ವ್ಯಕ್ತಿ

1962ರಲ್ಲಿ ವಿಯೆಟ್ನಾಂ ಯುದ್ಧದ ನಂತರ ಆಘಾತಕಾರಿ ಒತ್ತಡದ ಅಸ್ವಸ್ಥತೆಯ ಪರಿಣಾಮವೇ ನಿದ್ರಾಹೀನತೆ ಎಂದು ಹಲವರು ಹೇಳುತ್ತಾರೆ. ಆದರೆ ಯಾರೂ ಈ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಆದರೆ ಥಾಯ್ ನೋಕ್ 63 ವರ್ಷಗಳಿಂದ ನಿದ್ದೆ ಮಾಡದೆ ಹೇಗೆ ಆರೋಗ್ಯವಾಗಿದ್ದಾರೆಂದು ವೈದ್ಯರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:21 pm, Tue, 4 February 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ