Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ನಿಮಗಿದು ಗೊತ್ತಾ?; ಈ ಕಾಳಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್ ನೀಡಲಾಗುತ್ತೆ!

Chinese Kali Temple | ಭಾರತ ಮತ್ತು ಚೀನೀಯರ ಸಂಸ್ಕೃತಿಯ ಮಿಶ್ರಣ ಇರುವುದರಿಂದ ಈ ಕಾಳಿ ದೇವಸ್ಥಾನದಲ್ಲಿ ಪ್ರಸಾದವಾಗಿ ಫ್ರೈಡ್ ರೈಸ್ ಹಾಗೂ ನೂಡಲ್ಸ್​ ಕೂಡ ನೀಡಲಾಗುತ್ತದೆ.

Viral News: ನಿಮಗಿದು ಗೊತ್ತಾ?; ಈ ಕಾಳಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್ ನೀಡಲಾಗುತ್ತೆ!
ಕೊಲ್ಕತ್ತಾದಲ್ಲಿರುವ ಕಾಳಿ ದೇವಸ್ಥಾನ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 27, 2021 | 9:48 PM

ಕೊಲ್ಕತ್ತಾ: ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರಸಾದವಾಗಿ ಪೊಂಗಲ್, ಪುಳಿಯೋಗರೆ, ಉಸಲಿ, ಪಂಚಕಜ್ಜಾಯ ಕೊಡುವುದು ರೂಢಿ. ಕೆಲವು ದೇವಸ್ಥಾನಗಳ ಪ್ರಸಾದವನ್ನು ಸವಿಯಲೆಂದೇ ಹಲವರು ದೇಗುಲಗಳಿಗೆ ಹೋಗುವುದೂ ಉಂಟು. ಆದರೆ, ಈ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್ ನೀಡಲಾಗುತ್ತದೆ! ಇಲ್ಲಿ ಭಾರತ ಮತ್ತು ಚೀನೀಯರ ಸಂಸ್ಕೃತಿಯ ಮಿಶ್ರಣ ಇರುವುದರಿಂದ ಪ್ರಸಾದವಾಗಿ ಅನ್ನದ ಜೊತೆಗೆ ನೂಡಲ್ಸ್​ ಕೂಡ ನೀಡಲಾಗುತ್ತದೆ.

ಕೊಲ್ಕತ್ತಾದ ಕಾಳಿ ದೇವಸ್ಥಾನದಲ್ಲಿ ನೂಡಲ್ಸ್, ಫ್ರೈಡ್​ ರೈಸ್ ಮತ್ತು ಚಾಪ್ಸ್ ಸೂಯಿಯನ್ನು ಪ್ರಸಾದ ರೂಪದಲ್ಲಿ ನೀಡುತ್ತಾರಂತೆ. ಪಶ್ಚಿಮ ಬಂಗಾಳದಲ್ಲಿರುವ ಅನೇಕ ದೇವಸ್ಥಾನಗಳಲ್ಲಿ ಈ ರೀತಿಯ ವಿಭಿನ್ನ ರೀತಿಯ ಪ್ರಸಾದವನ್ನು ನೀಡಲಾಗುತ್ತದೆ. ಕೊಲ್ಕತ್ತಾದ ಚೈನೀಸ್ ಕಾಳಿ ದೇವಸ್ಥಾನದಲ್ಲಿ ದಿನಕ್ಕೆ ಎರಡು ಬಾರಿ ನೂಡಲ್ಸ್​ ಅನ್ನು ಪ್ರಸಾದವಾಗಿ ನೀಡಲಾಗುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಸಲಾಗುವ ವಿಶೇಷ ಪೂಜೆಯಲ್ಲಿ ನೂಡಲ್ಸ್​ ಅನ್ನು ಪ್ರಸಾದವಾಗಿ ನೀಡಲಾಗುತ್ತದೆ. ಈ ಬಗ್ಗೆ www.tourmyindia.com ವೆಬ್​ಸೈಟ್​ನಲ್ಲಿ ಮಾಹಿತಿ ಇದೆ. ಈ ಕಾಳಿ ದೇವಸ್ಥಾನಕ್ಕೆ 60 ವರ್ಷಗಳ ಇತಿಹಾಸವಿದೆ. ಈ ದೇವಸ್ಥಾನ ಹಿಂದೂ ಮತ್ತು ಚೈನೀಸ್ ಸಮುದಾಯದ ಐಕ್ಯತೆಗೆ ಉತ್ತಮ ಉದಾಹರಣೆಯಾಗಿದೆ.

ಕೊಲ್ಕತ್ತಾದ ಟಂಗ್ರಾ ಎಂಬ ಪ್ರದೇಶದಲ್ಲಿ ಈ ಕಾಳಿ ಮಂದಿರವಿದೆ. ಈ ಪ್ರದೇಶದಲ್ಲಿ ಟಿಬೇಟಿಯನ್ ಮತ್ತು ಏಷ್ಯಾದ ಸಂಸ್ಕೃತಿಯ ಮಿಶ್ರಣವಿದೆ. ಹೀಗಾಗಿ, ಇಲ್ಲಿನ ಕಾಳಿ ದೇವಸ್ಥಾನದಲ್ಲೂ ಭಾರತ ಮತ್ತು ಚೀನಾದ ಸಂಸ್ಕೃತಿಯ ಮಿಶ್ರಣವಿದೆ. ಟಂಗ್ರಾ ಪ್ರದೇಶದಲ್ಲಿರುವ ಈ ಚೈನೀಸ್ ಕಾಳಿ ದೇವಸ್ಥಾನವನ್ನು ಬಂಗಾಳಿಗಳು ಮತ್ತು ಚೈನೀಸ್ ಸಮುದಾಯವರ ಸಹಕಾರದಿಂದ ಕಟ್ಟಲಾಗಿದೆ.

ಈ ಕಾಳಿ ಮಂದಿರ ಬೆಳಗ್ಗೆ ಮತ್ತು ಸಂಜೆ ಮಾತ್ರ ತೆರೆದಿರುತ್ತದೆ. ಸೋಮವಾರದಿಂದ ಭಾನುವಾರದವರೆಗೂ ಇಲ್ಲಿ ಭಕ್ತರು ಕಾಳಿ ಮಾತೆಯ ದರ್ಶನ ಪಡೆಯಬಹುದು. ಕೊರೊನಾದಿಂದಾಗಿ ಈಗ ಹೊರ ರಾಜ್ಯದ ಪ್ರಯಾಣಿಕರು ಇಲ್ಲಿ ಬರಲು ಕೊವಿಡ್ ನೆಗೆಟಿವ್ ವರದು ನೀಡಬೇಕಾದುದು ಕಡ್ಡಾಯ.

ಇದನ್ನೂ ಓದಿ: Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!

Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

(This Chinese Kali Temple In Kolkata Serves Noodles As Prasad)

ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?