AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಮಾರ್ಕೆಟ್​ನಲ್ಲಿ ಸಂಶೋಧನಾ ಪ್ರಬಂಧಗಳು ಮಾರಾಟಕ್ಕಿವೆ!; ರಹಸ್ಯ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ

ಕ್ಯಾಮಾರಾ ಹಿಡಿದು ಎಂಟ್ರಿಕೊಟ್ಟ ವರದಿಗಾರ್ತಿ ಸಂಶೋಧನಾ ವಿಷಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಘಟನೆಯನ್ನು ಬಯಲು ಮಾಡಿದ್ದಾರೆ. ಕ್ಯಾಮರಾ ಹಿಡಿದು ರಹಸ್ಯವಾಗಿ ಅಂಗಡಿಗೆ ಹೋಗಿ ಮಾಲೀಕನೊಂದಿಗೆ ಮಾತನಾಡಿದ್ದಾರೆ.

ಈ ಮಾರ್ಕೆಟ್​ನಲ್ಲಿ ಸಂಶೋಧನಾ ಪ್ರಬಂಧಗಳು ಮಾರಾಟಕ್ಕಿವೆ!; ರಹಸ್ಯ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ
ದೆಹಲಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿವೆ ಸಂಶೋಧನಾ ಪ್ರಬಂಧ
TV9 Web
| Updated By: shruti hegde|

Updated on: Aug 27, 2021 | 1:30 PM

Share

ಪಿಹೆಚ್​ಡಿ ಪ್ರಥಮ ಹಾಗೂ ದ್ವಿತೀಯ ದರ್ಜೆಯ ಸಾಮಾನ್ಯ ಎಲ್ಲಾ ವಿಷಯಗಳ ಸಂಶೋಧನಾ ಪ್ರಬಂಧವು ದೆಹಲಿಯಲ್ಲಿ ಮಾರಾಟವಾಗುತ್ತಿರುವ ವಿಷಯ ಬಯಲಾಗಿದೆ. ಈ ಕುರಿತಂತೆ ಸ್ಥಳೀಯ ಪ್ರತ್ರಕರ್ತೆ ರಹಸ್ಯ ಕಾರ್ಯಾಚರಣೆ ನಡೆಸಿ ವರದಿ ಮಾಡಿದ್ದಾರೆ. ಎದುರಿಗೆ ಫೋಟೋ ಶಾಪ್​ಗಳು, ಬುಕ್ ಶಾಪ್​ಗಳಿದ್ದರೂ ಹಿಂಬದಿಯಿಂದ ಸಂಶೋಧನಾ ಪ್ರಬಂಧವನ್ನು ವಿದ್ಯಾರ್ಥಿಗಳು ಹಣ ಕೊಟ್ಟು ಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ಪತ್ರಕರ್ತೆ ಬಯಲು ಮಾಡಿದ್ದಾರೆ. ಅಂದಹಾಗೆ, ಈ ಸಂಶೋಧನಾ ಪ್ರಬಂಧಗಳು ಪಕ್ಕಾ ಒರಿಜಿನಲ್ ಆಗಿದ್ದು, ಇವುಗಳನ್ನು ಪ್ರಸಿದ್ಧ ವಿಶ್ವವಿದ್ಯಾಲಯಗಳ ಪಿಹೆಚ್​ಡಿ ವಿದ್ಯಾರ್ಥಿಗಳು, ಪ್ರೊಫೆಸರ್​ಗಳೇ ಇವುಗಳನ್ನು ಬರೆದು ಕೊಡುತ್ತಾರೆ!

ಕ್ಯಾಮಾರಾ ಹಿಡಿದು ಎಂಟ್ರಿಕೊಟ್ಟ ವರದಿಗಾರ್ತಿ ಸಂಶೋಧನಾ ವಿಷಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಘಟನೆಯನ್ನು ಬಯಲು ಮಾಡಿದ್ದಾರೆ. ಕ್ಯಾಮರಾ ಹಿಡಿದು ರಹಸ್ಯವಾಗಿ ಅಂಗಡಿಗೆ ಹೋಗಿ ಮಾಲೀಕನೊಂದಿಗೆ ಮಾತನಾಡಿದ್ದಾರೆ. ವಿದ್ಯಾರ್ಥಿಯಂತೆ ನಟಿಸಿ ಸಂಶೋಧನಾ ಪ್ರಬಂಧವನ್ನು ಕೊಳ್ಳುವಂತೆ ನಟಿಸಿದ್ದಾರೆ. ಮಾಲೀಕ ಯಾವ ವಿಷಯಕ್ಕೆ ಸಂಬಂಧಿಸಿದ ಪ್ರಬಂಧ ಬೇಕು ಎಂದು ಮಾತನಾಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ದೆಹಲಿಯ ಪಟೇಲ್ ಮಾರ್ಕೆಟ್​ನಲ್ಲಿರುವ ಈ ಪುಸ್ತಕ ಮಳಿಗೆಯ ಸಿಬ್ಬಂದಿ ಬಳಿ ಸಂಶೋಧನಾ ಪ್ರಬಂಧಗಳನ್ನು ಬರೆದುಕೊಡಲೆಂದೇ ಪ್ರೊಫೆಸರ್​, ವಿದ್ಯಾರ್ಥಿಗಳ ತಂಡವೇ ಇದೆಯಂತೆ. ಮಾಧ್ಯಮ, ಕಾನೂನು, ವಿಜ್ಞಾನ, ಸಮಾಜ ವಿಜ್ಞಾನ ಹೀಗೆ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಯಾವ ರೀತಿಯಲ್ಲಿ ಬೇಕೋ ಆ ರೀತಿಯಲ್ಲಿ ಸಂಶೋಧನಾ ಪ್ರಬಂಧಗಳು ಇಲ್ಲಿ ದೊರೆಯುತ್ತವೆ. ಒಂದು ಕಾಲೇಜಿನಲ್ಲಿ ಈಗಾಗಲೇ ಪಬ್ಲಿಷ್ ಆಗಿರುವ ಸಂಶೋಧನಾ ಪ್ರಬಂಧಗಳು ಕೂಡ ಇಲ್ಲಿ ಸಿಗುತ್ತವೆ. ಅದನ್ನೇ ಸ್ವಲ್ಪ ಬದಲಾಯಿಸಿಕೊಂಡು ಮತ್ತೊಂದು ಕಾಲೇಜಿನಲ್ಲಿ ಸಬ್ಮಿಟ್ ಮಾಡಬಹುದು. ರೆಡಿಮೇಡ್ ಅಲ್ಲದೆ ಹೊಸದಾಗಿ ಸಂಶೋಧನಾ ಪ್ರಬಂಧ ಬೇಕೆಂದರೆ ಅದನ್ನು ಬರೆದುಕೊಡಲು ದುಬಾರಿ ಹಣ ತೆರಬೇಕಾಗುತ್ತದೆ. ಈ ವಿಷಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದಂತೆಯೇ ಹಣ ಕೂಡಾ ನಿಗದಿಯಾಗಿದೆ. 5,000 ದಿಂದ ಹಿಡಿದು 50,000 ರೂಪಾಯಿವರೆಗೆ ಸಂಶೋಧನಾ ಪ್ರಬಂಧ ಮಾರಾಟವಾಗುತ್ತಿರುವುದನ್ನು ಮಾಲೀಕ ಹೇಳಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಬಂಧವನ್ನು ಸಂಕಲಿಸುವುದು ಲಾಭದಾಯಕ ವ್ಯವಹಾರವಾಗಿ ಬಿಟ್ಟಿದೆ. ಪಿಹೆಚ್​ಡಿ ಪ್ರಬಂಧವನ್ನು ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆ ಮಾಡದೇ ಬರೆದರೆ ಏನು ಪ್ರಯೋಜನ?

ಇದನ್ನೂ ಓದಿ:

ಡೆತ್ ನೋಟ್ ಬರೆದಿಟ್ಟು ಕಂದಾಯ ನಿರೀಕ್ಷಕ ಆತ್ಮಹತ್ಯೆ, ಬಗರ್ ಹುಕುಂ ಅಕ್ರಮಕ್ಕೆ ಪ್ರಾಮಾಣಿಕ ಅಧಿಕಾರಿ ಬಲಿ?

ಬಂದೂಕು ಪರವಾನಗಿ ಅಕ್ರಮ ಮಾರಾಟ ಪ್ರಕರಣ; ದೆಹಲಿ, ಜಮ್ಮು-ಕಾಶ್ಮೀರದ 40 ಪ್ರದೇಶಗಳಲ್ಲಿ ಸಿಬಿಐ ದಾಳಿ

(Research paper for sale in Delhi market)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ