ಈ ಮಾರ್ಕೆಟ್​ನಲ್ಲಿ ಸಂಶೋಧನಾ ಪ್ರಬಂಧಗಳು ಮಾರಾಟಕ್ಕಿವೆ!; ರಹಸ್ಯ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ

ಕ್ಯಾಮಾರಾ ಹಿಡಿದು ಎಂಟ್ರಿಕೊಟ್ಟ ವರದಿಗಾರ್ತಿ ಸಂಶೋಧನಾ ವಿಷಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಘಟನೆಯನ್ನು ಬಯಲು ಮಾಡಿದ್ದಾರೆ. ಕ್ಯಾಮರಾ ಹಿಡಿದು ರಹಸ್ಯವಾಗಿ ಅಂಗಡಿಗೆ ಹೋಗಿ ಮಾಲೀಕನೊಂದಿಗೆ ಮಾತನಾಡಿದ್ದಾರೆ.

ಈ ಮಾರ್ಕೆಟ್​ನಲ್ಲಿ ಸಂಶೋಧನಾ ಪ್ರಬಂಧಗಳು ಮಾರಾಟಕ್ಕಿವೆ!; ರಹಸ್ಯ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ
ದೆಹಲಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿವೆ ಸಂಶೋಧನಾ ಪ್ರಬಂಧ
Follow us
| Updated By: shruti hegde

Updated on: Aug 27, 2021 | 1:30 PM

ಪಿಹೆಚ್​ಡಿ ಪ್ರಥಮ ಹಾಗೂ ದ್ವಿತೀಯ ದರ್ಜೆಯ ಸಾಮಾನ್ಯ ಎಲ್ಲಾ ವಿಷಯಗಳ ಸಂಶೋಧನಾ ಪ್ರಬಂಧವು ದೆಹಲಿಯಲ್ಲಿ ಮಾರಾಟವಾಗುತ್ತಿರುವ ವಿಷಯ ಬಯಲಾಗಿದೆ. ಈ ಕುರಿತಂತೆ ಸ್ಥಳೀಯ ಪ್ರತ್ರಕರ್ತೆ ರಹಸ್ಯ ಕಾರ್ಯಾಚರಣೆ ನಡೆಸಿ ವರದಿ ಮಾಡಿದ್ದಾರೆ. ಎದುರಿಗೆ ಫೋಟೋ ಶಾಪ್​ಗಳು, ಬುಕ್ ಶಾಪ್​ಗಳಿದ್ದರೂ ಹಿಂಬದಿಯಿಂದ ಸಂಶೋಧನಾ ಪ್ರಬಂಧವನ್ನು ವಿದ್ಯಾರ್ಥಿಗಳು ಹಣ ಕೊಟ್ಟು ಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ಪತ್ರಕರ್ತೆ ಬಯಲು ಮಾಡಿದ್ದಾರೆ. ಅಂದಹಾಗೆ, ಈ ಸಂಶೋಧನಾ ಪ್ರಬಂಧಗಳು ಪಕ್ಕಾ ಒರಿಜಿನಲ್ ಆಗಿದ್ದು, ಇವುಗಳನ್ನು ಪ್ರಸಿದ್ಧ ವಿಶ್ವವಿದ್ಯಾಲಯಗಳ ಪಿಹೆಚ್​ಡಿ ವಿದ್ಯಾರ್ಥಿಗಳು, ಪ್ರೊಫೆಸರ್​ಗಳೇ ಇವುಗಳನ್ನು ಬರೆದು ಕೊಡುತ್ತಾರೆ!

ಕ್ಯಾಮಾರಾ ಹಿಡಿದು ಎಂಟ್ರಿಕೊಟ್ಟ ವರದಿಗಾರ್ತಿ ಸಂಶೋಧನಾ ವಿಷಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಘಟನೆಯನ್ನು ಬಯಲು ಮಾಡಿದ್ದಾರೆ. ಕ್ಯಾಮರಾ ಹಿಡಿದು ರಹಸ್ಯವಾಗಿ ಅಂಗಡಿಗೆ ಹೋಗಿ ಮಾಲೀಕನೊಂದಿಗೆ ಮಾತನಾಡಿದ್ದಾರೆ. ವಿದ್ಯಾರ್ಥಿಯಂತೆ ನಟಿಸಿ ಸಂಶೋಧನಾ ಪ್ರಬಂಧವನ್ನು ಕೊಳ್ಳುವಂತೆ ನಟಿಸಿದ್ದಾರೆ. ಮಾಲೀಕ ಯಾವ ವಿಷಯಕ್ಕೆ ಸಂಬಂಧಿಸಿದ ಪ್ರಬಂಧ ಬೇಕು ಎಂದು ಮಾತನಾಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ದೆಹಲಿಯ ಪಟೇಲ್ ಮಾರ್ಕೆಟ್​ನಲ್ಲಿರುವ ಈ ಪುಸ್ತಕ ಮಳಿಗೆಯ ಸಿಬ್ಬಂದಿ ಬಳಿ ಸಂಶೋಧನಾ ಪ್ರಬಂಧಗಳನ್ನು ಬರೆದುಕೊಡಲೆಂದೇ ಪ್ರೊಫೆಸರ್​, ವಿದ್ಯಾರ್ಥಿಗಳ ತಂಡವೇ ಇದೆಯಂತೆ. ಮಾಧ್ಯಮ, ಕಾನೂನು, ವಿಜ್ಞಾನ, ಸಮಾಜ ವಿಜ್ಞಾನ ಹೀಗೆ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಯಾವ ರೀತಿಯಲ್ಲಿ ಬೇಕೋ ಆ ರೀತಿಯಲ್ಲಿ ಸಂಶೋಧನಾ ಪ್ರಬಂಧಗಳು ಇಲ್ಲಿ ದೊರೆಯುತ್ತವೆ. ಒಂದು ಕಾಲೇಜಿನಲ್ಲಿ ಈಗಾಗಲೇ ಪಬ್ಲಿಷ್ ಆಗಿರುವ ಸಂಶೋಧನಾ ಪ್ರಬಂಧಗಳು ಕೂಡ ಇಲ್ಲಿ ಸಿಗುತ್ತವೆ. ಅದನ್ನೇ ಸ್ವಲ್ಪ ಬದಲಾಯಿಸಿಕೊಂಡು ಮತ್ತೊಂದು ಕಾಲೇಜಿನಲ್ಲಿ ಸಬ್ಮಿಟ್ ಮಾಡಬಹುದು. ರೆಡಿಮೇಡ್ ಅಲ್ಲದೆ ಹೊಸದಾಗಿ ಸಂಶೋಧನಾ ಪ್ರಬಂಧ ಬೇಕೆಂದರೆ ಅದನ್ನು ಬರೆದುಕೊಡಲು ದುಬಾರಿ ಹಣ ತೆರಬೇಕಾಗುತ್ತದೆ. ಈ ವಿಷಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದಂತೆಯೇ ಹಣ ಕೂಡಾ ನಿಗದಿಯಾಗಿದೆ. 5,000 ದಿಂದ ಹಿಡಿದು 50,000 ರೂಪಾಯಿವರೆಗೆ ಸಂಶೋಧನಾ ಪ್ರಬಂಧ ಮಾರಾಟವಾಗುತ್ತಿರುವುದನ್ನು ಮಾಲೀಕ ಹೇಳಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಬಂಧವನ್ನು ಸಂಕಲಿಸುವುದು ಲಾಭದಾಯಕ ವ್ಯವಹಾರವಾಗಿ ಬಿಟ್ಟಿದೆ. ಪಿಹೆಚ್​ಡಿ ಪ್ರಬಂಧವನ್ನು ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆ ಮಾಡದೇ ಬರೆದರೆ ಏನು ಪ್ರಯೋಜನ?

ಇದನ್ನೂ ಓದಿ:

ಡೆತ್ ನೋಟ್ ಬರೆದಿಟ್ಟು ಕಂದಾಯ ನಿರೀಕ್ಷಕ ಆತ್ಮಹತ್ಯೆ, ಬಗರ್ ಹುಕುಂ ಅಕ್ರಮಕ್ಕೆ ಪ್ರಾಮಾಣಿಕ ಅಧಿಕಾರಿ ಬಲಿ?

ಬಂದೂಕು ಪರವಾನಗಿ ಅಕ್ರಮ ಮಾರಾಟ ಪ್ರಕರಣ; ದೆಹಲಿ, ಜಮ್ಮು-ಕಾಶ್ಮೀರದ 40 ಪ್ರದೇಶಗಳಲ್ಲಿ ಸಿಬಿಐ ದಾಳಿ

(Research paper for sale in Delhi market)

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು