AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋ ಅಂಕಲ್​ ರೂ. 5ರ ಬದಲಿಗೆ 1 ಯೂರೋ ಕೊಟ್ಟರೆ? ಇದು ವಿಶ್ವಗುರು ಮೂಮೆಂಟ್​ ಎಂದ ನೆಟ್ಟಿಗರು

Euro : ಅರೆ ವ್ಹಾ! ರೂ. 20 ಆಟೋ ರೈಡ್​ಗೆ ರೂ. 88 ವಾಪಸ್ ಎಂದು ಒಬ್ಬರು. ಇದೇ ಆಟೋವಾಲಾ ಪಾನವಾಡಿ ಘಾಟ್​ನಲ್ಲಿ ಒಂದು ಕಟ್ ಬೀಡಿಗೆ 100 ಡಾಲರ್​ ಕೊಡುತ್ತಿದ್ದುದನ್ನು ನೋಡಿದೆ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ.

ಆಟೋ ಅಂಕಲ್​ ರೂ. 5ರ ಬದಲಿಗೆ 1 ಯೂರೋ ಕೊಟ್ಟರೆ? ಇದು ವಿಶ್ವಗುರು ಮೂಮೆಂಟ್​ ಎಂದ ನೆಟ್ಟಿಗರು
1 ಯೂರೋ ನಾಣ್ಯ
TV9 Web
| Edited By: ಶ್ರೀದೇವಿ ಕಳಸದ|

Updated on: Feb 17, 2023 | 10:23 AM

Share

Viral News :  ಯುವತಿಯೊಬ್ಬರು ರಿಕ್ಷಾ ಇಳಿದು ಆಟೋ ಡ್ರೈವರ್​ನಿಂದ ಚಿಲ್ಲರೆ ಇಸಿದುಕೊಳ್ಳುವಾಗ ಆತ ಐದು ರೂಪಾಯಿ ನಾಣ್ಯದ ಬದಲಿಗೆ 1 ಯೂರೋ ನಾಣ್ಯವನ್ನು ಕೊಟ್ಟಿದ್ದಾನೆ. ಐದು ರೂಪಾಯಿ ಮತ್ತು 1 ಯೂರೋ ನಾಣ್ಯ ನೋಡಲು ಒಂದೇ ತೆರನಾಗಿ ಇರುವುದರಿಂದ ಹೀಗೆ ಆಗಿರುವ ಸಾಧ್ಯತೆ ನಿಚ್ಚಳವಾಗಿದೆ. ಆ ಯುವತಿ ಇದೀಗ ಫೋಟೋ ಟ್ವೀಟ್ ಮಾಡಿದ್ದು ವೈರಲ್ ಆಗುತ್ತಿದೆ. ನಿನ್ನೆ ಮಾಡಿದ ಈ ಟ್ವೀಟ್​ ಅನ್ನು ಈತನಕ 2.5 ಲಕ್ಷ ಜನರು ನೋಡಿದ್ದಾರೆ. 6,000ಕ್ಕೂ ಹೆಚ್ಚು ಜನರು ಈ ಪೋಸ್ಟ್ ಇಷ್ಟಪಟ್ಟಿದ್ದಾರೆ. 150ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಸಾಕಷ್ಟು ಜನರು ಪ್ರತಿಕ್ರಿಯಿಸುತ್ತಲೇ ಇದ್ದಾರೆ.

ಇದು ವಿಶ್ವಗುರು ಮೂ​ಮೆಂಟ್​! ಎಂದಿದ್ದಾರೆ ಒಬ್ಬರು. ನೀವು ಈ ನಾಣ್ಯವನ್ನು ನಿಮ್ಮ ಆಪ್ತಮಿತ್ರನಿಗೆ ಗಿಫ್ಟ್​ ಕೊಡಬಹುದು ಎಂದಿದ್ದಾರೆ ಮತ್ತೊಬ್ಬರು. ಈ ಆಟೋವಾಲಾ, ಪಾನವಾಡಿ ಘಾಟ್​ನಲ್ಲಿ ಒಂದು ಬೀಡಿಕಟ್ಟಿಗೆ 100 ಡಾಲರ್ ನೋಟನ್ನು ಕೊಡುತ್ತಿದ್ದುದನ್ನು ನೋಡಿದೆ! ಎಂದು ತಮಾಷೆ ಮಾಡಿದ್ದಾರೆ ಮಗದೊಬ್ಬರು. ಅಯ್ಯೋ ನಾನು ಇಂಡಿಯಾ ಪ್ರವಾಸದಲ್ಲಿದ್ಧಾಗ ಒಂದು ಯೂರೋ ನಾಣ್ಯ ಕಳೆದುಕೊಂಡಿದ್ದೆ. ಅದೇ ಇರಬೇಕು ಇದು ಎಂದು ಇನ್ನೂ ಒಬ್ಬರು ತಮಾಷೆ ಮಾಡಿದ್ದಾರೆ. ನಿಮಗೆ ಆ ನಾಣ್ಯ ಬೇಡವಾದರೆ ನನಗೆ ಕಳುಹಿಸಿ ಎಂದು ಕೇಳಿಕೊಂಡಿದ್ದಾರೆ ಒಬ್ಬರು.

ಇದನ್ನೂ ಓದಿ : ಎಸ್ಕಲೇಟರ್ ಹುಚ್ಚು ಹಿಡಿಸಿಕೊಂಡ ನಾಯಿಯ ವಿಡಿಯೋ ವೈರಲ್

ರೂ.20 ಆಟೋ ರೈಡ್​ಗೆ ರೂ. 88 ಮರಳಿ ಪಡೆಯುವುದೆಂದರೆ ಚಾನ್ಸ್​! ಎಂದಿದ್ದಾರೆ ಮತ್ತೊಬ್ಬರು. ನೀವು ಆ ಹಣವನ್ನು ಯಾಕೆ ತೆಗೆದುಕೊಂಡಿರಿ? ವಾಪಸ್ ಕೊಡಬೇಕಿತ್ತು, ಟ್ವಿಟರ್​ನಲ್ಲಿ ತೋರಿಸುವುದಕ್ಕಾ ತೆಗೆದುಕೊಂಡಿದ್ದು?​ ಎಂದು ಕೇಳಿದ್ದಾರೆ ಮಗದೊಬ್ಬರು. ಎರಡು ದಿನಗಳ ಹಿಂದೆ ನಾನು ಬಸ್​ ಕಂಡಕ್ಟರ್​ನೊಬ್ಬ ರೂ. 10 ಬದಲಿಗೆ ರೂ. 10 ಥಾಯ್​ ಬಾತ್ ಪಡೆದಿದ್ದೇನೆ ಎಂದಿದ್ದಾರೆ ಒಬ್ಬರು.

ನಿಮಗೂ ಇಂಥ ಅನುಭವಗಳು ಆಗಿವೆಯೇ?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು