AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋ ಅಂಕಲ್​ ರೂ. 5ರ ಬದಲಿಗೆ 1 ಯೂರೋ ಕೊಟ್ಟರೆ? ಇದು ವಿಶ್ವಗುರು ಮೂಮೆಂಟ್​ ಎಂದ ನೆಟ್ಟಿಗರು

Euro : ಅರೆ ವ್ಹಾ! ರೂ. 20 ಆಟೋ ರೈಡ್​ಗೆ ರೂ. 88 ವಾಪಸ್ ಎಂದು ಒಬ್ಬರು. ಇದೇ ಆಟೋವಾಲಾ ಪಾನವಾಡಿ ಘಾಟ್​ನಲ್ಲಿ ಒಂದು ಕಟ್ ಬೀಡಿಗೆ 100 ಡಾಲರ್​ ಕೊಡುತ್ತಿದ್ದುದನ್ನು ನೋಡಿದೆ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ.

ಆಟೋ ಅಂಕಲ್​ ರೂ. 5ರ ಬದಲಿಗೆ 1 ಯೂರೋ ಕೊಟ್ಟರೆ? ಇದು ವಿಶ್ವಗುರು ಮೂಮೆಂಟ್​ ಎಂದ ನೆಟ್ಟಿಗರು
1 ಯೂರೋ ನಾಣ್ಯ
TV9 Web
| Edited By: ಶ್ರೀದೇವಿ ಕಳಸದ|

Updated on: Feb 17, 2023 | 10:23 AM

Share

Viral News :  ಯುವತಿಯೊಬ್ಬರು ರಿಕ್ಷಾ ಇಳಿದು ಆಟೋ ಡ್ರೈವರ್​ನಿಂದ ಚಿಲ್ಲರೆ ಇಸಿದುಕೊಳ್ಳುವಾಗ ಆತ ಐದು ರೂಪಾಯಿ ನಾಣ್ಯದ ಬದಲಿಗೆ 1 ಯೂರೋ ನಾಣ್ಯವನ್ನು ಕೊಟ್ಟಿದ್ದಾನೆ. ಐದು ರೂಪಾಯಿ ಮತ್ತು 1 ಯೂರೋ ನಾಣ್ಯ ನೋಡಲು ಒಂದೇ ತೆರನಾಗಿ ಇರುವುದರಿಂದ ಹೀಗೆ ಆಗಿರುವ ಸಾಧ್ಯತೆ ನಿಚ್ಚಳವಾಗಿದೆ. ಆ ಯುವತಿ ಇದೀಗ ಫೋಟೋ ಟ್ವೀಟ್ ಮಾಡಿದ್ದು ವೈರಲ್ ಆಗುತ್ತಿದೆ. ನಿನ್ನೆ ಮಾಡಿದ ಈ ಟ್ವೀಟ್​ ಅನ್ನು ಈತನಕ 2.5 ಲಕ್ಷ ಜನರು ನೋಡಿದ್ದಾರೆ. 6,000ಕ್ಕೂ ಹೆಚ್ಚು ಜನರು ಈ ಪೋಸ್ಟ್ ಇಷ್ಟಪಟ್ಟಿದ್ದಾರೆ. 150ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಸಾಕಷ್ಟು ಜನರು ಪ್ರತಿಕ್ರಿಯಿಸುತ್ತಲೇ ಇದ್ದಾರೆ.

ಇದು ವಿಶ್ವಗುರು ಮೂ​ಮೆಂಟ್​! ಎಂದಿದ್ದಾರೆ ಒಬ್ಬರು. ನೀವು ಈ ನಾಣ್ಯವನ್ನು ನಿಮ್ಮ ಆಪ್ತಮಿತ್ರನಿಗೆ ಗಿಫ್ಟ್​ ಕೊಡಬಹುದು ಎಂದಿದ್ದಾರೆ ಮತ್ತೊಬ್ಬರು. ಈ ಆಟೋವಾಲಾ, ಪಾನವಾಡಿ ಘಾಟ್​ನಲ್ಲಿ ಒಂದು ಬೀಡಿಕಟ್ಟಿಗೆ 100 ಡಾಲರ್ ನೋಟನ್ನು ಕೊಡುತ್ತಿದ್ದುದನ್ನು ನೋಡಿದೆ! ಎಂದು ತಮಾಷೆ ಮಾಡಿದ್ದಾರೆ ಮಗದೊಬ್ಬರು. ಅಯ್ಯೋ ನಾನು ಇಂಡಿಯಾ ಪ್ರವಾಸದಲ್ಲಿದ್ಧಾಗ ಒಂದು ಯೂರೋ ನಾಣ್ಯ ಕಳೆದುಕೊಂಡಿದ್ದೆ. ಅದೇ ಇರಬೇಕು ಇದು ಎಂದು ಇನ್ನೂ ಒಬ್ಬರು ತಮಾಷೆ ಮಾಡಿದ್ದಾರೆ. ನಿಮಗೆ ಆ ನಾಣ್ಯ ಬೇಡವಾದರೆ ನನಗೆ ಕಳುಹಿಸಿ ಎಂದು ಕೇಳಿಕೊಂಡಿದ್ದಾರೆ ಒಬ್ಬರು.

ಇದನ್ನೂ ಓದಿ : ಎಸ್ಕಲೇಟರ್ ಹುಚ್ಚು ಹಿಡಿಸಿಕೊಂಡ ನಾಯಿಯ ವಿಡಿಯೋ ವೈರಲ್

ರೂ.20 ಆಟೋ ರೈಡ್​ಗೆ ರೂ. 88 ಮರಳಿ ಪಡೆಯುವುದೆಂದರೆ ಚಾನ್ಸ್​! ಎಂದಿದ್ದಾರೆ ಮತ್ತೊಬ್ಬರು. ನೀವು ಆ ಹಣವನ್ನು ಯಾಕೆ ತೆಗೆದುಕೊಂಡಿರಿ? ವಾಪಸ್ ಕೊಡಬೇಕಿತ್ತು, ಟ್ವಿಟರ್​ನಲ್ಲಿ ತೋರಿಸುವುದಕ್ಕಾ ತೆಗೆದುಕೊಂಡಿದ್ದು?​ ಎಂದು ಕೇಳಿದ್ದಾರೆ ಮಗದೊಬ್ಬರು. ಎರಡು ದಿನಗಳ ಹಿಂದೆ ನಾನು ಬಸ್​ ಕಂಡಕ್ಟರ್​ನೊಬ್ಬ ರೂ. 10 ಬದಲಿಗೆ ರೂ. 10 ಥಾಯ್​ ಬಾತ್ ಪಡೆದಿದ್ದೇನೆ ಎಂದಿದ್ದಾರೆ ಒಬ್ಬರು.

ನಿಮಗೂ ಇಂಥ ಅನುಭವಗಳು ಆಗಿವೆಯೇ?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ