AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರೂ 6 ಕೋಟಿಯನ್ನು ಬ್ಯಾಂಕ್​ ಸಿಬ್ಬಂದಿಗೆ ಕೈಯ್ಯಾರೆ ಎಣಿಸಲು ಹೇಳಿದ ಚೀನೀ ಮಿಲೆನಿಯರ್

Bank: 2021ರಲ್ಲಿ ಚೀನಾದ ಬ್ಯಾಂಕ್​ ಒಂದರಲ್ಲಿ ನಡೆದ ಘಟನೆಯ ಕುರಿತ ಪೋಸ್ಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬ್ಯಾಂಕ್​ನ ಗ್ರಾಹಕ ಸೇವೆ ಅತೀ ಕೆಟ್ಟದ್ದಾಗಿತ್ತು ಎಂದು ಮಿಲೆನಿಯರ್ ಗ್ರಾಹಕನೊಬ್ಬ ದೂರಿದ್ದಾನೆ. ಕೊವಿಡ್ ನಿಯಮಗಳನ್ನು ಅನುಸರಿಸದೇ ಬ್ಯಾಂಕ್​ಗೆ ಈ ವ್ಯಕ್ತಿ ಪ್ರವೇಶಿಸಿದ್ದ ಎಂದು ಬ್ಯಾಂಕ್​ ತಿಳಿಸಿದೆ. ಈ ತಿಕ್ಕಾಟದಮಧ್ಯೆ ಈ ವ್ಯಕ್ತಿ ಬ್ಯಾಂಕ್​ ಸಿಬ್ಬಂದಿಗೆ ಕೊಟ್ಟ ಹೆಚ್ಚುವರಿ ಕೆಲಸ ಇದು...

Viral Video: ರೂ 6 ಕೋಟಿಯನ್ನು ಬ್ಯಾಂಕ್​ ಸಿಬ್ಬಂದಿಗೆ ಕೈಯ್ಯಾರೆ ಎಣಿಸಲು ಹೇಳಿದ ಚೀನೀ ಮಿಲೆನಿಯರ್
ರೂ. 6 ಕೋಟಿಯನ್ನು ಕೈಯ್ಯಿಂದ ಎಣಿಸುತ್ತಿರುವ ಬ್ಯಾಂಕ್​ ಸಿಬ್ಬಂದಿ
ಶ್ರೀದೇವಿ ಕಳಸದ
|

Updated on:Oct 28, 2023 | 11:14 AM

Share

China: ಚೀನಾದ ಮಿಲೆನಿಯರ್​ (Millionaire) ಒಬ್ಬಾತ ಬ್ಯಾಂಕ್​ನಿಂದ ರೂ. 6 ಕೋಟಿ ಹಿಂಪಡೆದು ಅದನ್ನು ಬ್ಯಾಂಕ್​ ಸಿಬ್ಬಂದಿಗೆ ನೀಡಿ ಕೈಯಿಂದ ಎಣಿಸುವಂತೆ ಕೇಳಿದ ಘಟನೆ ಇದೀಗ ವೈರಲ್ ಆಗುತ್ತಿದೆ. ಈ ಪ್ರಸಂಗದ ಹಿನ್ನೆಲೆಯನ್ನು ಬ್ಯಾಂಕ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದೆ.​ ಮಿಲೆನಿಯರ್ ವ್ಯಕ್ತಿ 2021ರಲ್ಲಿ ಕೊವಿಡ್-19 ನಿಯಮಗಳನ್ನು ಅನುಸರಿಸದ ಕಾರಣ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ಏರ್ಪಟ್ಟಿತ್ತು. ನಂತರ ಆತ ಬ್ಯಾಂಕ್​ ಸಿಬ್ಬಂದಿಗೆ ರೂ. 6.5 ಕೋಟಿ ಹಣವನ್ನು ಕೈಯ್ಯಾರೆ ಎಣಿಸಬೇಕು ಎಂದು ಹೇಳಿದ್ದನು.  ಬ್ಯಾಂಕ್​ ಸಿಬ್ಬಂದಿ ಹಣವನ್ನು ಎಣಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಚೀನಾದ ಮಾಧ್ಯಮಗಳಲ್ಲಿ ಈ ಪೋಸ್ಟ್​ ಪ್ರಕಟವಾಗಿದ್ದು ವೈಬೋ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಇದು ಟ್ರೆಂಡಿಂಗ್​ನಲ್ಲಿದೆ.

ಇದನ್ನೂ ಓದಿ : Viral Video: ಚಿಕಿತ್ಸೆಯಿಲ್ಲದ ಅಪರೂಪದ ಕಾಯಿಲೆಗಳಿಗೆ ಜಗ್ಗದೇ ಬದುಕುತ್ತಿರುವ ನಿಶಾ

ಸನ್​ವೇರ್​ ಎಂಬ ಹೆಸರಿನಲ್ಲಿ ಖಾತೆ ನಿರ್ವಹಿಸುತ್ತಿರುವ ಈ ಮಿಲೆನಿಯರ್​ ವ್ಯಕ್ತಿ 2021ರಲ್ಲಿ ಬ್ಯಾಂಕ್​ ಆಫ್​ ಶಾಂಘೈನ ಶಾಖೆಯಿಂದ ರೂ. 6.5 ಕೋಟಿ ಹಿಂಪಡೆದಿದ್ದ. ಕೊವಿಡ್ ಸಮಯದಲ್ಲಿ ಈ ವ್ಯಕ್ತಿ ಮಾಸ್ಕ್ ಧರಿಸದ ಕಾರಣ ಬ್ಯಾಂಕಿನ ಭದ್ರತಾ ಸಿಬ್ಬಂದಿ ಇವನೊಂದಿಗೆ ವಾಗ್ವಾದಕ್ಕಿಳಿಯಿತು. ಆ ನಂತರ ಮಿಲೆನಿಯರ್ ಬ್ಯಾಂಕಿನಿಂದ ಹಿಂಪಡೆದ ಹಣವನ್ನು ಕೈಯ್ಯಾರೆ ಎಣಿಸುವಂತೆ ಬ್ಯಾಂಕ್​ ಸಿಬ್ಬಂದಿಗೆ ಹೇಳಿದ. ಭದ್ರತಾ ಸಿಬ್ಬಂದಿಯ ವರ್ತನೆ ಭಯಾನಕವಾಗಿತ್ತು ಮತ್ತು ಅದು ಕೆಟ್ಟ ಗ್ರಾಹಕ ಸೇವೆಯಾಗಿತ್ತು ಎಂದು ವೈಬೋ ಸಾಮಾಜಿಕ ಜಾಲತಾಣದಲ್ಲಿ ಮಿಲೆನಿಯರ್​ ಪೋಸ್ಟ್ ಮಾಡಿದ್ದಾನೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಆಸ್ಟ್ರೇಲಿಯಾ; ಸೂಪರ್​ ಮಾರ್ಕೆಟ್​ನಿಂದ ತಂದ ಪಾಲಕ್​ ಸೊಪ್ಪಿನಲ್ಲಿ ಕಪ್ಪೆ

‘ರೂ. 6.5 ಕೋಟಿಯನ್ನು ಕೈಯಿಂದ ಎಣಿಸಲು ಬ್ಯಾಂಕ್​ ಸಿಬ್ಬಂದಿ ಸುಮಾರು 2 ಗಂಟೆ ಸಮಯವನ್ನು ತೆಗೆದುಕೊಂಡಿದೆ. ಒಟ್ಟಾರೆ ಇದು ಕೆಟ್ಟ ಗ್ರಾಹಕ ಸೇವೆ ಎಂದು ಪರಿಗಣಿಸಿ ಖಾತೆಯಲ್ಲಿ ಉಳಿದ ಮಿಲಿಯನ್​ಗಟ್ಟಲೆ ಹಣವನ್ನು ಇತರೇ ಬ್ಯಾಂಕ್​​ಗಳಲ್ಲಿ ಠೇವಣಿ ಮಾಡಲು​ ತಯಾರಿ ನಡೆಸಿದ್ದೇನೆ ಎಂದು ಮಿಲೆನಿಯರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಬ್ಯಾಂಕ್​ ಸಿಬ್ಬಂದಿ ನೋಟಿನ ದೊಡ್ಡದೊಡ್ಡ ಕಂತೆಗಳನ್ನು ಎಣಿಸುತ್ತಿರುವುದು ಮತ್ತು ವ್ಯಕ್ತಿಯೊಬ್ಬ ಕರೆನ್ಸಿವುಳ್ಳ ಸೂಟ್​ಕೇಸ್​ನೊಂದಿಗೆ ಹೊರನಡೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ : Viral Video: ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಡೊನಾಲ್ಡ್ ಟ್ರಂಪ್?!

ಈ ಮಧ್ಯೆ,  ಕೊವಿಡ್ 19 ನಿಯಮವನ್ನು ಮಿಲೆನಿಯರ್ ವ್ಯಕ್ತಿ ಉಲ್ಲಂಘಿಸಿದ್ದರಿಂದ ವಾಗ್ವಾದ ಉಂಟಾಗಿದೆ. ಆತ ಮಾಸ್ಕ್​ ಧರಿಸದೇ ಬ್ಯಾಂಕ್​ ಪ್ರವೇಶಿಸಿದ್ದ ಎಂದು ಬ್ಯಾಂಕ್​ ತಿಳಿಸಿದೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:11 am, Sat, 28 October 23

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?