AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನಮ್ಮನೇ ಬೇಕು ನಂಗೆ; ಅವರು ಎತ್ತಿಕೊಳ್ಳಲು ಹೋದರಿದಕೆ ಅಳುವು ಬರುವುದು

Mother and Baby : ಬೇರೆಯವರು ಎತ್ತಿಕೊಂಡರೆ ಎಳೇಮಗು ಹೇಗೆ ರಚ್ಚೆ ಹಿಡಿಯುವುದೋ ಥೇಟ್​ ಹಾಗೇ ಈ ಮರಿಕೋತಿಯೂ. ನೋಡಿ ವೈರಲ್ ಆಗಿರುವ ಈ ವಿಡಿಯೋ.

ನನ್ನಮ್ಮನೇ ಬೇಕು ನಂಗೆ; ಅವರು ಎತ್ತಿಕೊಳ್ಳಲು ಹೋದರಿದಕೆ ಅಳುವು ಬರುವುದು
ನಮ್ಮಮ್ಮಾ ಬೇಕು ನಂಗೆ
TV9 Web
| Edited By: ಶ್ರೀದೇವಿ ಕಳಸದ|

Updated on:Jan 05, 2023 | 1:01 PM

Share

Viral Video : ಲೋಕಕಾಣದ ಮಗುವಿಗೆ ಅಮ್ಮನೇ ಲೋಕ. ಅವಳ ಬೆಚ್ಚಗಿನ ಸ್ಪರ್ಶ, ಸಾಮೀಪ್ಯ ಅದಕ್ಕೆ ಭದ್ರಭಾವವನ್ನು ಕೊಡುತ್ತದೆ. ಹಾಗಾಗಿ ಅರೆಗಳಿಗೆಯೂ ಅದು ಅಮ್ಮನನ್ನು ಬಿಟ್ಟಿರಲಾರದು. ಅಮ್ಮ ತನ್ನ ಕೆಲಸಗಳನ್ನು ಮಾಡಿಕೊಳ್ಳಲೂ ಬಿಡದಷ್ಟು ಅಂಟಿಕೊಂಡಿರುತ್ತದೆ. ಆದರೆ ಇಲ್ಲಿರುವ ಈ ಅಮ್ಮ ಮಗುವಿನ ವಿಡಿಯೋ ನೋಡಿ. ಮರಿಕೋತಿಯೊಂದು ತನ್ನ ಸಾಕುತಾಯಿಯನ್ನು ಅರೆಕ್ಷಣವೂ ಬಿಟ್ಟಿರಲಾರೆನೆಂದು ಹಟ ಮಾಡುತ್ತಿದೆ.

ಈ ವಿಡಿಯೋ ಅನ್ನು ಈತನಕ ಸುಮಾರು 8,400 ಜನರು ನೋಡಿದ್ದಾರೆ. ಇದು ಮರಿಕೋತಿ ಎನ್ನಲು ಸಾಧ್ಯವೇ ಇಲ್ಲ. ಥೇಟ್ ಮಗುವಿನಂತೆಯೇ ವರ್ತಿಸುತ್ತಿದೆ. ಆಕೆಯೇ ತನ್ನ ನಿಜವಾದ ಅಮ್ಮನೆಂಬಂತೆ ಮಾಡುತ್ತಿದೆ ಎನ್ನುತ್ತಿದ್ದಾರೆ ಅನೇಕರು. ಹೌದು, ಪ್ರೀತಿಯಿಂದ ಅಮ್ಮನಂತೆ ನೋಡಿಕೊಂಡ ಯಾರ ಬಗ್ಗೆಯೂ ಹೀಗೆಯೇ ಭಾವ ಹೊಮ್ಮುವುದಲ್ಲವೆ? ಪ್ರಾಣಿಗಳಿಗೂ ಅಷ್ಟೇ, ಮನುಷ್ಯರಿಗೂ ಅಷ್ಟೇ.

ಇದನ್ನೂ ಓದಿ : ಬೇಕೇ ಮ್ಯಾಜಿಕ್ ಪ್ಯಾಂಟ್? ಕಳ್ಳತನದಲ್ಲಿ ಭವಿಷ್ಯ ಕಟ್ಟಿಕೊಳ್ಳಬೇಕೆನ್ನುವವರಿಗೆ ಮಾತ್ರ!

ಈ ವಿಡಿಯೋದಲ್ಲಿ ಒಬ್ಬರು, ಈ ಮರಿಯನ್ನು ಎತ್ತಿಕೊಳ್ಳಲು ನೋಡುತ್ತಾರೆ. ಆದರೆ ಅಮ್ಮನನ್ನು ಬಿಡಲಾರೆ ಎಂಬಂತೆ ಆಕೆಯತ್ತಲೇ ಬಾಗುತ್ತದೆ ಮರಿಕೋತಿ. ಒತ್ತಾಯಿಸಿದಾಗ ಅಳಲು ಶುರು ಮಾಡುತ್ತದೆ. ಅಮ್ಮನೆದೆಗೆ ಮರಳುತ್ತಿದ್ದಂತೆ ಶಾಂತಭಾವವನ್ನು ಅನುಭವಿಸುತ್ತದೆ. ಅಮ್ಮನೆಂದರೆ ಆಯಸ್ಕಾಂತದಂತೆ. ಈ ಬಂಧ ಯಾವಾಗಲೂ ಅನನ್ಯ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:34 pm, Thu, 5 January 23

Follow Us
Web contact
Web contact

TV9 Kannada

Read More
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ