Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣಾಮುಚ್ಚಾಲೆಯಾಟ ತಂದ ಕುತ್ತು; ಬಾಂಗ್ಲಾದ ಹುಡುಗನೊಬ್ಬ ಮಲೇಷಿಯಾದಲ್ಲಿ ಪತ್ತೆ

Hide and Seek : 15 ವರ್ಷದ ಬಾಂಗ್ಲಾದೇಶದ ಈ ಹುಡುಗ ಆರು ದಿನಗಳ ಕಾಲ ಕಂಟೇನರ್​ನಲ್ಲಿದ್ದ. 2,300 ಮೈಲಿಗಳಷ್ಟು ದೂರವನ್ನು ಹಡಗಿನ ಮೂಲಕ ಕ್ರಮಿಸಿ ಮಲೇಷಿಯಾ ತಲುಪಿದ. ಮುಂದೆ?

ಕಣ್ಣಾಮುಚ್ಚಾಲೆಯಾಟ ತಂದ ಕುತ್ತು; ಬಾಂಗ್ಲಾದ ಹುಡುಗನೊಬ್ಬ ಮಲೇಷಿಯಾದಲ್ಲಿ ಪತ್ತೆ
ಕಂಟೇನರ್​ನೊಳಗಿದ್ದ ಹುಡುಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 30, 2023 | 10:54 AM

Viral Video : ಮಕ್ಕಳಿಗೆ ಬಹಳ ಇಷ್ಟವಾದ ಆಟ ಕಣ್ಣಾಮುಚ್ಚಾಲೆ. ದೇಹಕ್ಕಿಂತ ಬುದ್ಧಿಗೆ, ತಮಾಷೆಗೆ ಇಲ್ಲಿ ಹೆಚ್ಚು ಅವಕಾಶವಿದೆ. ಆಡುತ್ತಾ ಆಡುತ್ತಾ ಜಗತ್ತನ್ನೇ ಮರೆಯುವಂಥ ಸೆಳೆತ ಇದಕ್ಕಿದೆ. ಆದರೆ ಮಕ್ಕಳು ಈ ಆಟವನ್ನು ಜಾಗರೂಕರಾಗಿ ಆಡಬೇಕು, ಪೋಷಕರೂ ಈ ಬಗ್ಗೆ ಸದಾ ಗಮನವಿಟ್ಟಿರಬೇಕು ಎನ್ನುವ ಎಚ್ಚರಿಕೆ ಗಂಟೆಯನ್ನು ಇದೀಗ ವೈರಲ್ ಆಗಿರುವ ಈ ವಿಡಿಯೋ ಸೂಚಿಸುತ್ತಿದೆ.

ಬಾಂಗ್ಲಾದೇಶದ 15 ವರ್ಷದ ಫಹೀಮ್​ ಎಂಬಾತ ಜನವರಿ 11ರಂದು ಚಿತ್ತಗಾಂಗ್​ನಲ್ಲಿ ತನ್ನ ಗೆಳೆಯರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತ ಬಚ್ಚಿಟ್ಟುಕೊಳ್ಳಲು ಜಾಗ ಹುಡುಕುತ್ತಿದ್ದ. ಅಲ್ಲಿ ಕಂಡ ಶಿಫ್ಟಿಂಗ್​ ಕಂಟೇನರ್​ನೊಳಗೆ ಹೋಗಿ ಒಳಗಡೆಯಿಂದ ಬೀಗ ಹಾಕಿಕೊಂಡು ಅವಿತಿಟ್ಟುಕೊಂಡ. ನಂತರ ಅವನಿಗೆ ನಿದ್ದೆ ಬಂದು ಮಲಗಿಬಿಟ್ಟ. ಆ ಕಂಟೇನರ್​ ಹಡಗಿನ ಮೂಲಕ ಮಲೇಷಿಯಾಗೆ ತೆರಳಿಬಿಟ್ಟಿತು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಇಂಗ್ಲಿಷ್​ ಅಕ್ಷರಗಳಲ್ಲಿ ತಾಜ್​ಮಹಲ್​ ರಚಿಸಿದ ಯುವಕನ ವಿಡಿಯೋ ವೈರಲ್

ಅನ್ನ ನೀರಿಲ್ಲದೆ ಕಂಗೆಟ್ಟುಹೋದ ಆತ 6 ದಿನಗಳ ಒಟ್ಟು 2,300 ಮೈಲಿ ಚಲಿಸಿದ. ಮಲೇಷಿಯಾ ತಲುಪಿದಾಗ ಸದ್ಯ ಅವ ಜೀವಂತವಾಗಿದ್ದ. ಆದರೆ ಸುಸ್ತು ಜ್ವರದಿಂದ ಬಳಲುತ್ತಿದ್ದ ಅವನನ್ನು ರಕ್ಷಣಾ ಸಿಬ್ಬಂದಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿತು.

ಇದನ್ನೂ ಓದಿ : ಹಗ್ಗದಾಟದಲ್ಲಿ ಗಿನ್ನೀಸ್​ ವಿಶ್ವದಾಖಲೆ ಮಾಡಿದ ಬಲು ಎಂಬ ನಾಯಿ

‘ಆಟವಾಡುತ್ತ ಬಂದ ಈ ಹುಡುಗ ಕಂಟೇನರ್​ನಲ್ಲಿ ಬಂದಿಯಾಗಿದ್ದ. ವಾರಗಟ್ಟಲೆ ಉಪವಾಸವಿದ್ದಿದ್ದರಿಂದ ಜ್ವರದಿಂದ ಬಳಲುತ್ತಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ’ ಎಂದು ಮಲೇಷಿಯಾದ ಗೃಹ ಸಚಿವ ಸಚಿವ ಡಟುಕ್ ಸೆರಿ ಸೈಫುದ್ದೀನ್ ನಾಸೂಶನ್ ಇಸ್ಮಾಯಿಲ್ ಮಲೇಷಿಯಾದ ಮಾಧ್ಯಮ ಬೆರ್ನಾಮಾಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಕಂಡೀರಾ ಬಿಳಿನವಿಲ ಸೊಬಗ; ವೈರಲ್ ಆಗಿರುವ ಈ ವಿಡಿಯೋ ನೋಡಿ

ಏತನ್ಮಧ್ಯೆ, ಪೊಲೀಸರು ಈ ಪ್ರಕರಣವನ್ನು ಮಾನವ ಕಳ್ಳಸಾಗಾಣಿಕೆ ಎಂದು ಅನುಮಾನಿಸಿದ್ದರು. ಆದರೆ ವಿಚಾರಣೆ ನಡೆಸಿದ ಮೇಲೆ ವಾಸ್ತವ ಬೇರೆಯಾಗಿತ್ತು. ಈ ಸಿನಿಮೀಯ ಪ್ರಕರಣ ಎಲ್ಲರಿಗೂ ಒಂದು ಪಾಠ.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:44 am, Mon, 30 January 23

ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ