Viral Video: ಕೊಳದಲ್ಲಿ ಸರಳ ರೇಖೆ ಎಳೆದ ಬಾತುಕೋಳಿ, ನೆಟ್ಟಿಗರ ಮನಸ್ಸನ್ನು ಪ್ರಶಾಂತಗೊಳಿಸುವಂತಿದೆ ಈ ವಿಡಿಯೋ

ಚೆರ್ರಿ ಹೂವುಗಳು ಹರಡಿಕೊಂಡಿರುವ ಕೊಳದಲ್ಲಿ ಸರಳ ರೇಖೆ ಎಳೆಯುತ್ತಾ ಹೋದ ಬಾತುಕೋಳಿಯ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಕೆಲಸದ ಒತ್ತಡದಲ್ಲಿರುವ ನೆಟ್ಟಿಗರ ಮನಸ್ಸನ್ನು ಪ್ರಶಾಂತಗೊಳಿಸುವಂತಿದೆ.

Viral Video: ಕೊಳದಲ್ಲಿ ಸರಳ ರೇಖೆ ಎಳೆದ ಬಾತುಕೋಳಿ, ನೆಟ್ಟಿಗರ ಮನಸ್ಸನ್ನು ಪ್ರಶಾಂತಗೊಳಿಸುವಂತಿದೆ ಈ ವಿಡಿಯೋ
ಕೊಳದಲ್ಲಿ ಈಜಾಡುತ್ತಿರುವ ಬಾತುಕೋಳಿ
Follow us
| Updated By: Rakesh Nayak Manchi

Updated on:Jul 01, 2022 | 6:37 PM

ವೈರಲ್ ವೀಡಿಯೊ: ಬಾತುಕೋಳಿಗಳು ನೀರಿನಲ್ಲಿ ಈಜಾಡುವುದೇ ಚಂದ, ಅದಾಗ್ಯೂ ಆಕಾಶದಲ್ಲಿ ವಿಮಾನ ಅಥವಾ ರಾಕೇಟ್ ಹೋದಾಗ ಯಾವ ರೀತಿ ಗೆರೆಯೊಂದು ಕಾಣುತ್ತದೆಯೇ ಅದೇ ರೀತಿಯಲ್ಲಿ ಬಾತುಕೋಳಿ(Duck)ಯೊಂದು ಕೊಳದಲ್ಲಿ ಈಜಾಡಿಕೊಂಡು ಹೋಗಿದೆ. ನೋಡುವಾಗ ಬಾತುಕೋಳಿ ಕೊಳದಲ್ಲಿ ಸರಳ ರೇಖೆ ಎಳೆದಂತೆ ಕಾಣುತ್ತಿದೆ. ಪ್ರಾಣಿಗಳ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುವ ‘Yoda4ever’ ಟ್ವಿಟರ್ ಖಾತೆಯಲ್ಲಿ ಶಾಂತವಾಗಿ ಈಜಾಡುವ ಬಾತುಕೋಳಿಯ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (Viral Video) ಆಗುತ್ತಿದೆ. ಈ ವಿಡಿಯೋ ಕೆಲಸದ ಒತ್ತಡದಲ್ಲಿರುವ ನೆಟ್ಟಿಗರ ಮನಸ್ಸನ್ನು ಶಾಂತಗೊಳಿಸುವಂತಿದೆ.

ಇದನ್ನೂ ಓದಿ: Viral Video: ಅಯ್ಯೋ ಆನೆ ಮಾಡಿದ ಕೆಲಸ ಏನು ಗೊತ್ತಾ? ವಿಡಿಯೋ ನೋಡಿ ನೀವು ನಗುವುದು ಖಂಡಿತ

ಬಾತುಕೋಳಿಯ ವಿಡಿಯೋವನ್ನು Yoda4ever ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ನಂತರ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 47ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಕಾಣುವಂತೆ, ಜಪಾನೀಸ್ ಚೆರ್ರಿ ಅಥವಾ ಸಕುರಾ ಎಂದೂ ಕರೆಯಲ್ಪಡುವ ಚೆರ್ರಿ ಹೂವುಗಳ ಸುಂದರವಾದ ದಳಗಳಿಂದ ಆವೃತವಾಗಿರುವ ಕೊಳದಲ್ಲಿ ಬಾತುಕೋಳಿ ಶಾಂತವಾಗಿ ಈಜುತ್ತಿರುವುದನ್ನು ನೋಡಬಹುದು. ಬಾತುಕೋಳಿಯು ಈಜಾಡುತ್ತಾ ಹೋದಾಗ ಹಿಂಬದಿಯಲ್ಲಿ ಹೂವುಗಳೆಲ್ಲವೂ ಪಕ್ಕಕ್ಕೆ ಸರಿದು ದಾರಿ ಮಾಡಿದಂತೆ ಕಾಣುತ್ತಿದ್ದು, ಈ ನೋಟವು ನಿಜವಾಗಿಯೂ ರಮಣೀಯವಾಗಿದೆ.

ಈ ವೀಡಿಯೊವನ್ನು ವೀಕ್ಷಣೆ ಮಾಡಿದ ನೆಟ್ಟಿಗರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ತಾವು ಕೂಡ ಬಾತುಕೋಳಿಯಂತೆ ಆರಾಮವಾಗಿರಲು ಬಯಸುವುದಾಗಿ ಹೇಳಿಕೊಂಡಿದ್ದಾರೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರೊಬ್ಬರು, “ಅದು ತುಂಬಾ ಮುದ್ದಾಗಿದೆ ಮತ್ತು ಮ್ಯಾಜಿಕ್​ ಆಗಿ ಕಾಣುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ. “ಉಸಿರು” ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದು, ಮತ್ತೊಬ್ಬರು, “ಎಂಥ ಒಂದು ಸರಳ ರೇಖೆ !!” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Photo: ಮುಂಬದಿಯಲ್ಲೇ ಎರಡು ತಲೆಯುಳ್ಳ ಅಪರೂಪದ ಹಾವು ಪತ್ತೆ! ಇಲ್ಲಿದೆ ನೋಡಿ ಫೋಟೋಗಳು

Published On - 6:37 pm, Fri, 1 July 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ