AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೂರು ಸಿಂಹಗಳ ಮೇಲೆ ಏಕಾಂಗಿಯಾಗಿ ದಾಳಿ ನಡೆಸಿದ ನೀರಾನೆಯ ವಿಡಿಯೋ ವೈರಲ್

ನದಿ ದಾಟುತ್ತಿದ್ದ ಮೂರು ಸಿಂಹಗಳ ಮೇಲೆ ನೀರಾನೆಯೊಂದು ದಾಳಿ ನಡೆಸಿ ಅಟ್ಟಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೀರಾನೆ ದಾಳಿಯ ವಿಡಿಯೋ ಇಲ್ಲಿದೆ ನೋಡಿ.

Viral Video: ಮೂರು ಸಿಂಹಗಳ ಮೇಲೆ ಏಕಾಂಗಿಯಾಗಿ ದಾಳಿ ನಡೆಸಿದ ನೀರಾನೆಯ ವಿಡಿಯೋ ವೈರಲ್
ಸಿಂಹಗಳ ಮೇಲೆ ನೀರಾನೆ ದಾಳಿ
TV9 Web
| Updated By: Rakesh Nayak Manchi|

Updated on: Jul 14, 2022 | 5:09 PM

Share

ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹದ ಮೇಲೆ ದಾಳಿ ನಡೆಯುವುದು ಅಪರೂಪವಾಗಿದೆ. ಇದೀಗ ಮೂರು ಸಿಂಹಗಳ ಮೇಲೆ ನೀರಾನೆಯೊಂದು ಏಕಾಂಗಿಯಾಗಿ ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಿಂಹಗಳು ನದಿ ದಾಟುವ ವೇಳೆ ನೀರಾನೆ ದಾಳಿ ನಡೆಸಿದ್ದು,  ಗ್ರೇಟ್ ಪ್ಲೇನ್ಸ್ ಕನ್ಸರ್ವೇಶನ್ ಎಂಬ ಯೂಟ್ಯೂಬ್ ಚಾನೆಲ್ ಈ ವಿಡಿಯೋವನ್ನು ಹಂಚಿಕೊಂಡು ಮರೆಯಲಾಗದ ಕ್ಷಣ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: Viral Video: ರಾಡ್​ನಿಂದ ಕುಟ್ಟಿದಾಗ ಶೂ ಒಳಗಡೆಯಿಂದ ಬುಸುಗುಡುತ್ತಾ ಹೊರಬಂದ ನಾಗರಹಾವು

ಮೂರು ಸಿಂಹಗಳು ನದಿಯನ್ನು ದಾಟುತ್ತಿರುವುದನ್ನು ವಿಡಿಯೋ ತೋರಿಸುತ್ತದೆ ಮತ್ತು ನದಿ ದಾಟಲು ಸುರಕ್ಷಿತವಾಗಿದೆಯೇ ಎಂದು ಯೋಚಿಸುತ್ತಿರುವಂತೆ ನಾಲ್ಕನೇ ಸಿಂಹವು ದಡದಲ್ಲಿ ನಿಂತಿರುವುದನ್ನುಕಾಣಬಹುದು. ಮೂರು ಸಿಂಹಗಳು ಈಜಾಡುತ್ತಾ ನದಿ ದಾಟುತ್ತಿದ್ದಾಗ ನೋಡಿದ ದೈತ್ಯ ನೀರಾನೆ, ವೇಗವಾಗಿ ಈಜಿಕೊಂಡು ಬಂದು ಅವುಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಎರಡು ಸಿಂಹಗಳು ದಿಕ್ಕಾಪಾಲಾಗಿ ಹೋದರೆ ಮತ್ತೊಂದು ಸಿಂಹ ನೀರಾನೆಯ ಬಾಯಿಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದೆ. ಕೊನೆಯಲ್ಲಿ ಅದೇ ನೀರಿನಲ್ಲಿ ಮತ್ತೊಂದು ನೀರಾನೆ ಕಾಣಿಸಿಕೊಳ್ಳುತ್ತದೆ.

“ಅತ್ಯುತ್ತಮ ಸಫಾರಿಗಳು ಮರೆಯಲಾಗದ ಕ್ಷಣಗಳಿಂದ ಮಾಡಲ್ಪಟ್ಟಿದೆ… ಮತ್ತು ಇದು ನಿಸ್ಸಂದೇಹವಾಗಿ ಅವುಗಳಲ್ಲಿ ಒಂದಾಗಿದೆ. ಬೋಟ್ಸ್ವಾನಾದ ಸೆಲಿಂಡಾ ಎಕ್ಸ್‌ಪ್ಲೋರರ್ಸ್ ಕ್ಯಾಂಪ್‌ನಲ್ಲಿ ಇತ್ತೀಚೆಗೆ ನಾಲ್ಕು ಸಿಂಹಗಳು ಸೆಲಿಂಡಾ ಸ್ಪಿಲ್‌ವೇ ದಾಟಲು ಪ್ರಯತ್ನಿಸುತ್ತಿರುವಾಗ ನೀರಾನೆ ತಡೆಯುತ್ತದೆ. ಅದೃಷ್ಟವಶಾತ್, ಸಿಂಹಗಳು ಪಾರಾಗಿವೆ. ಮತ್ತೊಂದು ಗಮನಾರ್ಹವಾದ ಘಟನೆಗೆ ಸಾಕ್ಷಿಯಾಗಲು ನಾವು ಸೌಭಾಗ್ಯವನ್ನು ಅನುಭವಿಸುತ್ತೇವೆ. ಈ ಅದ್ಭುತ ದೃಶ್ಯಾವಳಿಗಾಗಿ ಜಾನ್ ಲೆಮನ್ ಅವರಿಗೆ ಧನ್ಯವಾದಗಳು” ಎಂದು ಗ್ರೇಟ್ ಪ್ಲೇನ್ಸ್ ಕನ್ಸರ್ವೇಶನ್ ಶೀರ್ಷಿಕೆ ನೀಡಿದೆ.

ಇದನ್ನೂ ಓದಿ: Viral Video: ಹರಿಯುತ್ತಿರುವ ನದಿಯನ್ನು ಎಚ್ಚರಿಕೆಯಿಂದ ದಾಟಿದ ಆಡಿನ ಹಿಂಡು; ಜೀವನದ ಪಾಠ ಕಲಿಸುವ ವಿಡಿಯೋ ವೈರಲ್

ವಿಡಿಯೋ ವೀಕ್ಷಣೆ ಮಾಡಿದ ಜಾಲತಾಣ ಬಳಕೆದಾರರೊಬ್ಬರು, ಭಯಾನಕವಾಗಿದೆ ಎಂದಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ “ಏಕೆ ಎಂದು ನನಗೆ ತಿಳಿದಿಲ್ಲ, ಆದರೆ ನೀರಾನೆ ದಾಳಿ ಅಗುತ್ತಿದ್ದಂತೆ ಸಿಂಹವು ಮತ್ತೆ ದಡಕ್ಕೆ ಓಡುತ್ತಿರುವ ದೃಶ್ಯವು ನಿಜವಾಗಿಯೂ ನನ್ನನ್ನು ಛಿದ್ರಗೊಳಿಸುತ್ತದೆ” ಎಂದಿದ್ದಾರೆ.

ಬಿಬಿಸಿ ಪ್ರಕಾರ, ನೀರಾನೆ ಪ್ರಪಂಚದ ಅತ್ಯಂತ ದೊಡ್ಡ ಭೂ ಸಸ್ತನಿಯಾಗಿದೆ. ಇದು ಆಫ್ರಿಕಾದಲ್ಲಿ ವರ್ಷಕ್ಕೆ ಅಂದಾಜು 500 ಜನರನ್ನು ಕೊಲ್ಲುತ್ತದೆ. ನೀರಾನೆ ಆಕ್ರಮಣಕಾರಿ ಜೀವಿಗಳಾಗಿದ್ದು, ಅವು ತುಂಬಾ ಚೂಪಾದ ಹಲ್ಲುಗಳನ್ನು ಹೊಂದಿವೆ. ಅವು ಸಿಂಹಗಳಿಗಿಂತ ಎರಡು ಪಟ್ಟು ಮಾರಕವಾಗಿವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Viral Video: ಮಳೆಯ ನೀರು ತಾಗಬಾರದೆಂದು ತಂಗಿಯನ್ನು ಬೆನ್ನ ಮೇಲೆ ಕೂರಿಸಿ ರಸ್ತೆ ದಾಟಿಸಿದ ಅಣ್ಣ; ವಿಡಿಯೋ ವೈರಲ್​

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ