AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್​ ಮೇಲೆ ಬೆಕ್ಕಿನ ಸವಾರಿ ಆಯಿತು ಈಗ ಕಾರ್ ಮೇಲೆ ನಾಯಿಯ ಸರದಿ; ಆಕ್ರೋಶಗೊಂಡ ನೆಟ್​​ಮಂದಿ

Bengaluru : ಈ ಕಾರಿನ ನಂಬರ್ ಕಾಣುವಂತಿದೆ. ಬೆಂಗಳೂರು ಪೊಲೀಸರು ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು; ವಿಡಿಯೋ ನೋಡಿದ ನೆಟ್ಟಿಗರು ಬೆಂಗಳೂರು ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡುತ್ತಿದ್ಧಾರೆ.

ಬೈಕ್​ ಮೇಲೆ ಬೆಕ್ಕಿನ ಸವಾರಿ ಆಯಿತು ಈಗ ಕಾರ್ ಮೇಲೆ ನಾಯಿಯ ಸರದಿ; ಆಕ್ರೋಶಗೊಂಡ ನೆಟ್​​ಮಂದಿ
ಬೆಂಗಳೂರಿನಲ್ಲಿ ಕಂಡುಬಂದ ದೃಶ್ಯ
Follow us
ಶ್ರೀದೇವಿ ಕಳಸದ
|

Updated on:Feb 03, 2023 | 1:30 PM

Viral Video : ಕಳೆದ ತಿಂಗಳು ಒಬ್ಬಾತ ಬೆಂಗಳೂರು ಹೊರವಲಯದ ಹೆದ್ದಾರಿಯಲ್ಲಿ ಬೈಕ್​ ಮೇಲೆ ತನ್ನೆರಡೂ ಬೆಕ್ಕುಗಳನ್ನು ರಾತ್ರಿಹೊತ್ತು ಕರೆದೊಯ್ದ ವಿಡಿಯೋ ನೋಡಿದ್ದು ನಿಮಗೆಲ್ಲ ನೆನಪಿರಬಹುದು. ನೆಟ್ಟಿಗರೆಲ್ಲಾ ಸರಿಯಾಗಿ ಬಯ್ದಿದ್ದರು. ಬೆಕ್ಕುಗಳ ಪ್ರಾಣಕ್ಕೆ ಅಪಾಯ ಒಡ್ಡುವ ಇಂಥ ಸಾಹಸ ಬೇಡ ಎಂದು ಬುದ್ಧಿ ಹೇಳಿದ್ದರು. ಇದೀಗ ಬೆಂಗಳೂರಿನಲ್ಲಿಯೇ ಇಂಥದೇ ಮತ್ತೊಂದು ಪ್ರಕರಣ ಮರುಕಳಿಸಿದೆ. ಆದರೆ ಬೈಕ್ ಬದಲಾಗಿ ಇಲ್ಲಿ ಕಾರ್​ ಇದೆ. ಬೆಕ್ಕಿನ ಬದಲಾಗಿ ಇಲ್ಲಿ ನಾಯಿಯಿದೆ.

1.26 ಲಕ್ಷ ಜನ ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ಆಕ್ರೋಶಗೊಂಡಿದ್ದಾರೆ. ವೇಗವಾಗಿ ಓಡುತ್ತಿರುವ ಕಾರಿನ ಮೇಲೆ ನಾಯಿ ಹೇಗೆ ಕುಳಿತುಕೊಳ್ಳಬೇಕು? ಅದಕ್ಕೆ ಭಯವಾಗುವುದಿಲ್ಲವಾ? ಜೀವಕ್ಕೆ ಅಪಾಯ ಅಲ್ಲವಾ? ಇನ್ನೊಬ್ಬರಿಗೆ ಹುಚ್ಚು ಸಾಹಸಿಂದ ತೊಂದರೆ ಆಗುವುದಿಲ್ಲವಾ ಎಂದೆಲ್ಲ ಕೇಳುತ್ತಿದ್ದಾರೆ.

ಇದನ್ನೂ ಓದಿ : ಹುಲಿ ಬಂದೀತಮ್ಮಾ; ಚಳಿಗೆ ಚಹಾ ಬೇಕಾಯ್ತೇನೋ ತಮ್ಮಾ

ಎಲ್ಲವೂ ತಮಾಷೆ ಮಾಡಲಾಗದು ಎಲ್ಲವನ್ನೂ ಸಾಹಸದಂತೆ ನೋಡಬಾರದು. ಇಂಥದ್ದನ್ನು ಲೈಕ್, ರೀಟ್ವೀಟ್ ಮಾಡಿ ಬೆಂಬಲಿಸಬೇಡಿ ಎಂದಿದ್ಧಾರೆ ಹಲವರು. ಕಾರಿನ ಸಂಖ್ಯೆ ಕಾಣುವಂತಿದೆ. ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಬೇಕು. ಈತ ನಾಯಿಯ ಜೀವಕ್ಕೆ ಅಪಾಯ ತಂದಿಡುತ್ತಿದ್ದಾನೆ. ಇದು ಕ್ರೌರ್ಯ ಎಂದು ಬೆಂಗಳೂರು ಸಿಟಿ ಪೊಲೀಸರನ್ನು ಅನೇಕರು ಟ್ಯಾಗ್ ಮಾಡಿದ್ದಾರೆ.

ಇದನ್ನೂ ನೋಡಿ : ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ; ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ

ಕೆಲವರು ನೋಡಲು ಮೋಜೆನ್ನಿಸುತ್ತಿದೆ ಎಂದಿದ್ದಾರೆ. ಇದು ಹೇಗೆ ಮೋಜು ಎಂದು ಕುಪಿತಗೊಂಡಿದ್ದಾರೆ ಹಲವರು. ಬೆಂಗಳೂರಿನ ವಿಜಯನಗರಕ್ಕೆ ಬನ್ನಿ, ಕಾರಿನ ಮೇಲೆ ನಾಯಿಗಳು ಮಲಗಿರುತ್ತವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಾಯಿಗಳಿಗೆ ಮಾತನಾಡಲು ಬರುವುದಿಲ್ಲವೆಂದು ಮನಬಂದಂತೆ ಅವುಗಳನ್ನು ನಡೆಸಿಕೊಳ್ಳಬೇಡಿ, ಇದು ಕ್ರೌರ್ಯ ಎಂದಿದ್ದಾರೆ ಅನೇಕರು. ಜನ ಯಾಕೆ ಹೀಗೆ ತಿಳಿವಳಿಕೆ ಇಲ್ಲದೆ ವರ್ತಿಸುತ್ತಾರೋ ಏನೊ. ನಿಜಕ್ಕೂ ಇದು ಬಹಳ ಬೇಸರ ತರಿಸುವಂಥ ವಿಡಿಯೋ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:30 pm, Fri, 3 February 23

ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ