ಹುಲಿ ಬಂದೀತಮ್ಮಾ; ಚಳಿಗೆ ಚಹಾ ಬೇಕಾಯ್ತೇನೋ ತಮ್ಮಾ

Tiger : ಐಪಿಎಸ್​ ಅಧಿಕಾರಿ ಸುಸಾಂತ ನಂದಾ ಈ ಬಾರಿ ಚಹಾ ತೋಟದಲ್ಲಿ ಓಡಾಡುತ್ತಿರುವ ಹುಲಿಯ ವಿಡಿಯೋ ಹಂಚಿಕೊಂಡಿದ್ದಾರೆ. ಮೊದಲು ಚಿರತೆಗಳು ಚಹಾ ಕುಡಿಯಲು ಬಂದವು, ಈಗ ಹುಲಿ? ಎನ್ನುತ್ತಿದ್ದಾರೆ ನೆಟ್ಟಿಗರು.

ಹುಲಿ ಬಂದೀತಮ್ಮಾ; ಚಳಿಗೆ ಚಹಾ ಬೇಕಾಯ್ತೇನೋ ತಮ್ಮಾ
ಚಹಾ ತೋಟದಲ್ಲಿ ಓಡಾಡುತ್ತಿರುವ ಹುಲಿ
Follow us
| Updated By: ಶ್ರೀದೇವಿ ಕಳಸದ

Updated on:Feb 03, 2023 | 11:35 AM

Viral Video : ಈ ಚಳಿಯಲ್ಲಿ ಚಹಾ ಬೇಕೆನ್ನಿಸಿತೇ ಹುಲಿರಾಯ? ಹೀಗೆಲ್ಲ ಚಹಾ ತೋಟಕ್ಕೆ ಬಂದು ಓಡಾಡಿದರೆ ಚಹಾ ಹೋಗಲಿ ಚಹಾದ ಸ್ವಾದ ಹೇಗಿರುತ್ತದೆ ಎನ್ನುವುದೂ ನಿನಗೆ ಗೊತ್ತಾಗದು. ಚಹಾದ ಎಲೆಗಳನ್ನು ಒಣಗಿಸುವ ತನಕ, ಪುಡಿ ಮಾಡುವ ತನಕ, ಒಲೆಹೂಡಿ ನೀರಿನೊಳಗೆ ಅದನ್ನು ಕುದಿಸಿ ಹಾಲು ಸಕ್ಕರೆ ಹಾಕುವ ತನಕ ಮತ್ತು ಸೋಸಿ ಕಪ್ಪಿಗೆ ಬೀಳುವತನಕ ಕಾಯುವ ತಾಳ್ಮೆ ಶಕ್ತಿ ಇದೆಯೇ ಒಂದು ಕಪ್​​​ಗಾಗಿ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೀಗೆ ಕೇಳಬೇಕೆನ್ನಿಸುತ್ತಿದೆ ಈ ಹುಲಿ ಹೀಗೆ ಚಹಾತೋಟದಲ್ಲಿ ಓಡಾಡುತ್ತಿರುವುದನ್ನು ನೋಡಿದರೆ. ಆಗಾಗ ವನ್ಯಜೀವಿಗಳ ಕುರಿತಾದ ವಿಡಿಯೋ ಟ್ವೀಟ್ ಮಾಡುವ ಐಪಿಎಸ್​ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಅನ್ನು ಮನೋ ಎನ್ನುವವರು ಚಿತ್ರೀಕರಿಸಿದ್ದಾರೆ.

ಇದನ್ನೂ ಓದಿ : ನನಗೂ ಹಾಲು ಕೊಡು; ಮರಿಜಾಗ್ವಾರ್​ಗೆ ಹಾಲು ಕುಡಿಸಲು ಬಿಡದ ಮರಿಹುಲಿ

ಈತನಕ 1.6 ಲಕ್ಷ ಜನರು ನೋಡಿದ್ದಾರೆ. ಸುಮಾರು 3,000 ಜನರು ಇಷ್ಟಪಟ್ಟಿದ್ದಾರೆ. 2006ರ ಹುಲಿಗಣತಿಯ ಪ್ರಕಾರ ಭಾರತದಲ್ಲಿ ಸುಮಾರು 1,411 ಹುಲಿಗಳು ಇದ್ದವು. 2018ರ ಹೊತ್ತಿಗೆ 2,967. ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು ಇಡೀ ಭಾರತದಲ್ಲಿಯೇ ಹೆಚ್ಚು ಹುಲಿಗಳು ವಾಸಿಸುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 422 ಹುಲಿಗಳನ್ನು ಹೊಂದಿರುವ ಕರ್ನಾಟಕ ಎರಡನೇ ಸ್ಥಾನ, ಮೂರನೇ ಸ್ಥಾನದಲ್ಲಿ ಉತ್ತರಾಖಂಡ.

ಇದನ್ನೂ ಓದಿ : ‘ನಿನ್ನಂತೆಯೇ ಜಿಗಿಯುತ್ತಿದ್ದೇನೆ ಈಗಲಾದರೂ ಬಾ’ ಮೊಲವನ್ನು ಆಟಕ್ಕೆ ಕರೆಯುತ್ತಿರುವ ನಾಯಿಮರಿ

ಮಧ್ಯಪ್ರದೇಶದ ಕಾನ್ಹಾ, ಬಾಂಧವಗಢ, ಪೆಂಚ್​, ಸತ್ಪುರ್, ಪನ್ನಾ, ಸಂಜಯ ದುಬ್ರಿ ಪ್ರದೇಶಗಳಲ್ಲಿ ಪ್ರತೀ ವರ್ಷ  250 ಮರಿಗಳು ಹುಟ್ಟುತ್ತವೆ. ಮೊದಲು ಚಿರತೆಗಳು ಚಹಾ ಕುಡಿಯಲು ಬಂದವು, ಈಗ ಹುಲಿಗಳು? ಎಂದು ಕೇಳುತ್ತಿದ್ದಾರೆ ನೆಟ್​ಮಂದಿ. ಇದು ಯಾವ ಚಹಾ ತೋಟಕ್ಕೆ ಬಂದಿದೆ ಎಂದು ಅನೇಕರು ಕೇಳಿದ್ದಾರೆ.

ಈಗ ಚಹಾ ತೋಟಕ್ಕೆ ಬಂದ ಈ ಹುಲಿರಾಯ ಚಹಾ ಆಗುವ ತನಕ ಕಾಯುವನೋ ಅಥವಾ ಇಲ್ಲವೋ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:30 am, Fri, 3 February 23

ತಾಜಾ ಸುದ್ದಿ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನಿಗೆ ದರ್ಶನ್ ರನ್ನು ನೋಡಲೇಬೇಕೆಂಬ ಹಠ
ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನಿಗೆ ದರ್ಶನ್ ರನ್ನು ನೋಡಲೇಬೇಕೆಂಬ ಹಠ
ರಾಹುಲ್ ಮಾತಾಡುವಾಗ ಮೈಕ್ ಆಫ್ ಮಾಡಲಾಯಿತೆಂಬ ಆರೋಪ ಸುಳ್ಳು: ಶೋಭಾ ಕರಂದ್ಲಾಜೆ
ರಾಹುಲ್ ಮಾತಾಡುವಾಗ ಮೈಕ್ ಆಫ್ ಮಾಡಲಾಯಿತೆಂಬ ಆರೋಪ ಸುಳ್ಳು: ಶೋಭಾ ಕರಂದ್ಲಾಜೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್