AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆ್ಯಪಲ್ ಸ್ಟೋರ್​ನಿಂದ ಮೊಬೈಲ್​ ಕದ್ದು, ಎರಡನೇ ಮಹಡಿಯಿಂದ ಬಿದ್ದ, ಏಳಲಾಗದೇ ಸಿಕ್ಕಿಬಿದ್ದ

ಮೊಬೈಲ್​ಗಳ ಕಳ್ಳತನ ಮಾಡುವುವರಿದ್ದಾರೆ, ಸರಗಳ್ಳತನ ಮಾಡುವವರಿದ್ದಾರೆ, ಮನೆ ದರೋಡೆ ಮಾಡುವವರಿದ್ದಾರೆ ನಿಮ್ಮ ಲಕ್ ಚೆನ್ನಾಗಿದ್ದರೆ ಅಥವಾ ಅವರ ಲಕ್ ಕೈ ಕೊಟ್ಟರೆ ಜಯ ನಿಮ್ಮದೇ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

Viral Video: ಆ್ಯಪಲ್ ಸ್ಟೋರ್​ನಿಂದ ಮೊಬೈಲ್​ ಕದ್ದು, ಎರಡನೇ ಮಹಡಿಯಿಂದ ಬಿದ್ದ, ಏಳಲಾಗದೇ ಸಿಕ್ಕಿಬಿದ್ದ
ಕಳ್ಳ
ನಯನಾ ರಾಜೀವ್
|

Updated on: May 24, 2023 | 2:31 PM

Share

ಮೊಬೈಲ್​ಗಳ ಕಳ್ಳತನ ಮಾಡುವುವರಿದ್ದಾರೆ, ಸರಗಳ್ಳತನ ಮಾಡುವವರಿದ್ದಾರೆ, ಮನೆ ದರೋಡೆ ಮಾಡುವವರಿದ್ದಾರೆ ನಿಮ್ಮ ಲಕ್ ಚೆನ್ನಾಗಿದ್ದರೆ ಅಥವಾ ಅವರ ಲಕ್ ಕೈ ಕೊಟ್ಟರೆ ಜಯ ನಿಮ್ಮದೇ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ನಿತ್ಯ ನೂರಾರು ಕಳ್ಳತನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ, ಹಾಗೆಯೇ ಆ್ಯಪಲ್​ ಸ್ಟೋರ್​ನಿಂದ ಮೊಬೈಲ್​ಗಳನ್ನು ಕುದ್ದು ಎಸ್ಕೇಪ್​ ಆಗಲು ನೋಡಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ ಅದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ. ಸಾಮಾನ್ಯವಾಗಿ ಜನರು ತರಾತುರಿಯಲ್ಲಿ ಇಂತಹ ತಪ್ಪುಗಳನ್ನು ಮಾಡುತ್ತಾರೆ, ಇದು ಅವರ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ.

ಈ ವೀಡಿಯೊದಲ್ಲಿ, ಆ್ಯಪಲ್ ಸ್ಟೋರ್​ನಿಂದ ದರೋಡೆ ಮಾಡಿದ ನಂತರ ವ್ಯಕ್ತಿಯು ಸಿಕ್ಕಿಬಿದ್ದಿದ್ದಷ್ಟೇ ಅಲ್ಲದೇ ತೊಂದರೆಯನ್ನು ಅನುಭವಿಸಬೇಕಾಯಿತು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಆ್ಯಪಲ್ ಸ್ಟೋರ್‌ನಿಂದ ಕಳ್ಳತನ ಮಾಡಿ ಓಡಿಹೋಗಲು ಯತ್ನಿಸುತ್ತಿರುವುದು ಕಂಡು ಬರುತ್ತದೆ.

ಅಷ್ಟರಲ್ಲಿ ಎರಡನೇ ಮಹಡಿಯಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿ ವಿಫಲನಾಗುತ್ತಾನೆ. ಮೇಲಿಂದ ಕೆಳಗೆ ಬೀಳುತ್ತಾನೆ, ಗಂಭೀರ ಗಾಯವಾಗುತ್ತದೆ. ಇದರ ಹೊರತಾಗಿಯೂ, ಆತ ಮತ್ತೆ ಓಡಿಹೋಗಲು ಪ್ರಯತ್ನಿಸುತ್ತಾನೆ ಆದರೆ ಗಾಯವು ತುಂಬಾ ತೀವ್ರವಾಗಿರುತ್ತದೆ, ನಡೆಯಲು ಸಾಧ್ಯವಾಗದೆ ಅಲ್ಲಿಯೇ ಮಲಗುತ್ತಾನೆ. ವಿಡಿಯೋ ನೋಡಿದ ಜನರು ಕೂಡ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಮತ್ತಷ್ಟು ಓದಿ: Viral Video: ಈತನಲ್ಲೂ ಇದೆ ಅದ್ಭುತ ಪ್ರತಿಭೆ ಆದ್ರೆ ಕಳ್ಳನಾಗಬಾರದಿತ್ತು, ಸ್ಪೈಡರ್​ಮ್ಯಾನ್​ ರೀತಿ 4 ಅಂತಸ್ತಿನ ಕಟ್ಟಡವನ್ನು 50 ಸೆಕೆಂಡುಗಳಲ್ಲಿ ಏರಿದ ಕಳ್ಳ

ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಇಂತಹ ವಿಡಿಯೋಗಳು ವೈರಲ್ ಆಗಿವೆ. ಈ ವಿಡಿಯೋಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಬಳಕೆದಾರ, ಬಹುಶಃ ಕೆಳಗೆ ಬಿದ್ದ ಕಾರಣ ಅವನ ಬೆನ್ನು ಮುರಿಸಿರಬೇಕು ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, ತಪ್ಪು ಮಾಡಿದರೆ ತಪ್ಪು ಫಲಿತಾಂಶವೇ ಬರುವುದು ಎಂದು ಬರೆದಿದ್ದಾರೆ. ಇಲ್ಲಿಯವರೆಗೆ 11 ಲಕ್ಷಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು