AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾ ಈಕೆ ‘ನಿಂಜಾ’ದಿಂದ ಅವತರಿಸಿ ಬಂದಿದ್ದಾಳೇನು? ನೆಟ್​ಮಂದಿಯ ಅಚ್ಚರಿ

Martial Art : ಈಕೆ ಜೆಜೆ ಗೋಲ್ಡನ್​ ಡ್ರ್ಯಾಗನ್​ ಎಂಬ ಹೆಸರಿನಿಂದ ಈ ಹದಿಹರೆಯದ ಹುಡುಗಿ ಖ್ಯಾತಿ ಗಳಿಸಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಸಮರ ಕಲಾ ಪ್ರದರ್ಶನದ ವಿಡಿಯೋಗಳನ್ನು ಸಾಕಷ್ಟು ಜನ ಮೆಚ್ಚುತ್ತಾರೆ.

ಆಹಾ ಈಕೆ ‘ನಿಂಜಾ’ದಿಂದ ಅವತರಿಸಿ ಬಂದಿದ್ದಾಳೇನು? ನೆಟ್​ಮಂದಿಯ ಅಚ್ಚರಿ
ಸಮರ ಕಲೆಯ ಪ್ರದರ್ಶನದಲ್ಲಿ ತೊಡಗಿರುವ ಕಲಾವಿದೆ
TV9 Web
| Edited By: ಶ್ರೀದೇವಿ ಕಳಸದ|

Updated on: Jan 31, 2023 | 10:52 AM

Share

Viral Video : ಸಮರ ಕಲೆ ಎಂದಾಗ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ಬರುವುದು ಪುರುಷಾಕೃತಿ. ಆದರೆ ಈ ಕಲೆಯ ತೊಡಗಿಕೊಳ್ಳುವಲ್ಲಿ ಮಹಿಳೆಯರೇನು ಹಿಂದೆ ಬಿದ್ದಿಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈ ಯುವತಿ ಸಮರ ಕಲೆಯ ಅಭ್ಯಾಸದಲ್ಲಿ ಅದೆಷ್ಟು ಶ್ರದ್ಧೆಯಿಂದ ತೊಡಗಿಕೊಂಡಿದ್ದಾಳೆಂದು. ಕಣ್ಣುಮುಚ್ಚಿ ಗುರಿ ಸಾಧಿಸುತ್ತಾಳೆಂದರೆ ಆಕೆ 24 ಗಂಟೆಗಳ ಕಾಲವೂ ಇದನ್ನೇ ಉಸಿರಾಡಿದ್ದಾಳೆಂದರ್ಥ.

ಕಣ್ಣು ತೆಗೆದೇ ಈಕೆ ಮಾಡುವುದನ್ನು ಮಾಡಲು ಕಷ್ಟ. ಇನ್ನು ಈಕೆ ಹೀಗೆ ಕಣ್ಣುಮುಚ್ಚಿ ಗುರಿ ಸಾಧಿಸುತ್ತಾಳೆಂದರೆ ಹೇಗೆ ಸಾಧ್ಯ? ಈ ವಿಡಿಯೋ ಅನ್ನು ಈತನಕ 1 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಈಕೆ ಎಷ್ಟೊಂದು ಪರಿಪೂರ್ಣವಾಗಿ ಸಾಧನೆಯಲ್ಲಿ ತೊಡಗಿಕೊಂಡಿದ್ದಾಳೆ ಎಂದಿದ್ದಾರೆ ಅನೇಕರು.

ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

ನಾನಂತೂ ಇವಳನ್ನೇ ನೋಡುತ್ತಿದ್ದೇನೆ, ಅದೆಷ್ಟು ತನ್ಮಯಳಾಗಿ ಈಕೆ ಈ ಕಲೆಯನ್ನು ಸಾಧಿಸಿಕೊಂಡಿರಬಹುದು ಎಂದು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ ಕೆಲವರು. ಆದರೆ ಈಕೆಯ ನಿಜವಾದ ಟ್ರಿಕ್ಸ್​ಗಳನ್ನು ಯಾವಾಗ ನೋಡಲು ಸಾಧ್ಯವಾಗಬಹುದು ಎಂದು ಕೇಳಿದ್ದಾರೆ ಕೆಲವರು. ವುಮನ್ ಬ್ರೂಸ್ಲಿ ಎಂದು ಹೇಳಿದ್ದಾರೆ ಒಂದಿಬ್ಬರು.

ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್

ಅಂದಹಾಗೆ ಈಕೆಯ ಹೆಸರು ಜೆಸ್ಸಿ ಜೇನ್​ ಮೆಕ್​ಪಾರ್ಲ್ಯಾಂಡ್​. ಹದಿಹರೆಯದ ಈಕೆ ಜೆಜೆ ಗೋಲ್ಡನ್​ ಡ್ರ್ಯಾಗನ್​ ಎಂಬ ಹೆಸರಿನಿಂದ ಖ್ಯಾತಿ ಗಳಿಸಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈಕೆ ಸಮರ ಕಲೆಯ ವಿಡಿಯೋಗಳನ್ನು ಅಪ್​​ಲೋಡ್​ ಮಾಡುತ್ತಿರುತ್ತಾಳೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು? ಈಕೆ ಟ್ರಿಕ್ಸ್​ ಬಳಸಿದ್ದಾಳೆಯೇ ಅಥವಾ ಕೌಶಲವೆ? ಆದರೆ ಏನು ಮಾಡಲೂ ಶ್ರದ್ಧೆ ಮತ್ತು ಸಮಯ ಕೊಟ್ಟಕೊಳ್ಳಲೇಬೇಕಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು