AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾ ಈಕೆ ‘ನಿಂಜಾ’ದಿಂದ ಅವತರಿಸಿ ಬಂದಿದ್ದಾಳೇನು? ನೆಟ್​ಮಂದಿಯ ಅಚ್ಚರಿ

Martial Art : ಈಕೆ ಜೆಜೆ ಗೋಲ್ಡನ್​ ಡ್ರ್ಯಾಗನ್​ ಎಂಬ ಹೆಸರಿನಿಂದ ಈ ಹದಿಹರೆಯದ ಹುಡುಗಿ ಖ್ಯಾತಿ ಗಳಿಸಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಸಮರ ಕಲಾ ಪ್ರದರ್ಶನದ ವಿಡಿಯೋಗಳನ್ನು ಸಾಕಷ್ಟು ಜನ ಮೆಚ್ಚುತ್ತಾರೆ.

ಆಹಾ ಈಕೆ ‘ನಿಂಜಾ’ದಿಂದ ಅವತರಿಸಿ ಬಂದಿದ್ದಾಳೇನು? ನೆಟ್​ಮಂದಿಯ ಅಚ್ಚರಿ
ಸಮರ ಕಲೆಯ ಪ್ರದರ್ಶನದಲ್ಲಿ ತೊಡಗಿರುವ ಕಲಾವಿದೆ
TV9 Web
| Edited By: ಶ್ರೀದೇವಿ ಕಳಸದ|

Updated on: Jan 31, 2023 | 10:52 AM

Share

Viral Video : ಸಮರ ಕಲೆ ಎಂದಾಗ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ಬರುವುದು ಪುರುಷಾಕೃತಿ. ಆದರೆ ಈ ಕಲೆಯ ತೊಡಗಿಕೊಳ್ಳುವಲ್ಲಿ ಮಹಿಳೆಯರೇನು ಹಿಂದೆ ಬಿದ್ದಿಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈ ಯುವತಿ ಸಮರ ಕಲೆಯ ಅಭ್ಯಾಸದಲ್ಲಿ ಅದೆಷ್ಟು ಶ್ರದ್ಧೆಯಿಂದ ತೊಡಗಿಕೊಂಡಿದ್ದಾಳೆಂದು. ಕಣ್ಣುಮುಚ್ಚಿ ಗುರಿ ಸಾಧಿಸುತ್ತಾಳೆಂದರೆ ಆಕೆ 24 ಗಂಟೆಗಳ ಕಾಲವೂ ಇದನ್ನೇ ಉಸಿರಾಡಿದ್ದಾಳೆಂದರ್ಥ.

ಕಣ್ಣು ತೆಗೆದೇ ಈಕೆ ಮಾಡುವುದನ್ನು ಮಾಡಲು ಕಷ್ಟ. ಇನ್ನು ಈಕೆ ಹೀಗೆ ಕಣ್ಣುಮುಚ್ಚಿ ಗುರಿ ಸಾಧಿಸುತ್ತಾಳೆಂದರೆ ಹೇಗೆ ಸಾಧ್ಯ? ಈ ವಿಡಿಯೋ ಅನ್ನು ಈತನಕ 1 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಈಕೆ ಎಷ್ಟೊಂದು ಪರಿಪೂರ್ಣವಾಗಿ ಸಾಧನೆಯಲ್ಲಿ ತೊಡಗಿಕೊಂಡಿದ್ದಾಳೆ ಎಂದಿದ್ದಾರೆ ಅನೇಕರು.

ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

ನಾನಂತೂ ಇವಳನ್ನೇ ನೋಡುತ್ತಿದ್ದೇನೆ, ಅದೆಷ್ಟು ತನ್ಮಯಳಾಗಿ ಈಕೆ ಈ ಕಲೆಯನ್ನು ಸಾಧಿಸಿಕೊಂಡಿರಬಹುದು ಎಂದು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ ಕೆಲವರು. ಆದರೆ ಈಕೆಯ ನಿಜವಾದ ಟ್ರಿಕ್ಸ್​ಗಳನ್ನು ಯಾವಾಗ ನೋಡಲು ಸಾಧ್ಯವಾಗಬಹುದು ಎಂದು ಕೇಳಿದ್ದಾರೆ ಕೆಲವರು. ವುಮನ್ ಬ್ರೂಸ್ಲಿ ಎಂದು ಹೇಳಿದ್ದಾರೆ ಒಂದಿಬ್ಬರು.

ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್

ಅಂದಹಾಗೆ ಈಕೆಯ ಹೆಸರು ಜೆಸ್ಸಿ ಜೇನ್​ ಮೆಕ್​ಪಾರ್ಲ್ಯಾಂಡ್​. ಹದಿಹರೆಯದ ಈಕೆ ಜೆಜೆ ಗೋಲ್ಡನ್​ ಡ್ರ್ಯಾಗನ್​ ಎಂಬ ಹೆಸರಿನಿಂದ ಖ್ಯಾತಿ ಗಳಿಸಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈಕೆ ಸಮರ ಕಲೆಯ ವಿಡಿಯೋಗಳನ್ನು ಅಪ್​​ಲೋಡ್​ ಮಾಡುತ್ತಿರುತ್ತಾಳೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು? ಈಕೆ ಟ್ರಿಕ್ಸ್​ ಬಳಸಿದ್ದಾಳೆಯೇ ಅಥವಾ ಕೌಶಲವೆ? ಆದರೆ ಏನು ಮಾಡಲೂ ಶ್ರದ್ಧೆ ಮತ್ತು ಸಮಯ ಕೊಟ್ಟಕೊಳ್ಳಲೇಬೇಕಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ