ಬೇಕೇಬೇಕು ಬಾರೇಹಣ್ಣು ಬೇಕು; ಕಾವೇರಿದ ಆನ್​ಲೈನ್​ ಚಳವಳಿ

Ber Fruit : ಜುಜುಬೆ ಇದು, ಕ್ರ್ಯಾನ್​ಬೆರ್ರಿ ತಾನೆ? ಇದು ನಮ್ಮಲ್ಲಿ ಫಲ್ಸಾ, ಇದಕ್ಕೆ ಧಮ್ನಾ ಅಂತೀವಿ... ಪುಟ್ಟಪುಟ್ಟ ಹುಳಿಸಿಹಿ ಬಾರೇಹಣ್ಣಿಗೆ ಜಗತ್ತಿನ ಮಂದಿಯೆಲ್ಲಾ ಮುಗಿಬಿದ್ದು ಬಾಯಲ್ಲಿ ನೀರೂರಿಸಿಕೊಳ್ಳುತ್ತಿದ್ದಾರೆ. ನೋಡಿ ವಿಡಿಯೋ.

ಬೇಕೇಬೇಕು ಬಾರೇಹಣ್ಣು ಬೇಕು; ಕಾವೇರಿದ ಆನ್​ಲೈನ್​ ಚಳವಳಿ
ಬಾರೇಹಣ್ಣು
Follow us
| Updated By: ಶ್ರೀದೇವಿ ಕಳಸದ

Updated on:Jan 31, 2023 | 2:40 PM

Viral Video : ಸಿಹಿಹುಳಿಯಾದ ಈ ಬಾರೇಹಣ್ಣು, ಬೋರೆಹಣ್ಣಿನ (Ber Fruit) ಋತುಮಾನವೀಗ. ಎರಡು ವಾರಗಳ ಹಿಂದೆಯಷ್ಟೇ ಸಂಕ್ರಾಂತಿ ಸಮಯದಲ್ಲಿ ಮಾರುಕಟ್ಟೆ ತುಂಬಾ ಇವುಗಳದೇ ಸುರಿಮಳೆ. ಕಂದುಬಣ್ಣದ ಪುಟ್ಟಪುಟ್ಟ ಈ ಹಣ್ಣುಗಳು ಮುಟ್ಟಿದರೆ ಪುಳುಪುಳು ಎನ್ನುವಷ್ಟು ಮೃದು. ಈ ವಿಡಿಯೋ ನೋಡುತ್ತಿದ್ದಂತೆ ಬಾಲ್ಯದಲ್ಲಿ ಜೇಬಿನಲ್ಲಿಟ್ಟುಕೊಂಡು ಟೀಚರ್ ಕಣ್ತಪ್ಪಿಸಿ ಮೆಲ್ಲಗೆ ತಿನ್ನುತ್ತಿದ್ದ ಆ ದಿನಗಳು ನಿಮ್ಮ ಕಣ್ಣಮುಂದೆ ಖಂಡಿತ ಬರುತ್ತವೆ. ಅಷ್ಟೇ ಯಾಕೆ ಬಾಯಲ್ಲಿ ಚಿಲ್​ ಎಂದು ನೀರು ಚಿಮ್ಮದೇ ಇರದು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Somya ✨ || Dhanbad Blogger || (@meet_n_eat_food_quest)

ಈಗಾಗಲೇ ಈ ವಿಡಿಯೋ ಅನ್ನು ನಾಲ್ಕು ಮಿಲಿಯನ್ ಜನರು ನೋಡಿದ್ದಾರೆ. 2.5 ಲಕ್ಷಕ್ಕಿಂತಲೂ ಹೆಚ್ಚು ಜನರು  ವಿಡಿಯೋ ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಬಾಯಲ್ಲಿ ನೀರೂರುತ್ತಿದೆ, ನನ್ನ ಬಾಲ್ಯದ ಜಗತ್ತಿಗೆ ಕರೆದೊಯ್ದಿದ್ದಕ್ಕೆ ಧನ್ಯವಾದ. ಈ ಹಣ್ಣು ಎಲ್ಲಿ ಸಿಗುತ್ತವೆ ಎಂದಿದ್ದಾರೆ ಹಲವಾರು ಜನರು.

ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

ಈ ಹಣ್ಣನ್ನು ನಮ್ಮ ಕಾಶ್ಮೀರದಲ್ಲಿ ಫಲ್ಸಾ ಎನ್ನುತ್ತಾರೆ ಎಂದಿದ್ದಾರೆ ಒಬ್ಬರು. ಅದಕ್ಕೆ ಅವರು ಅಲ್ಲ ಫಲ್ಸಾ ಜಾಂಬಳಿ ಬಣ್ಣದ್ದಿರುತ್ತವೆ ಎಂದಿದ್ದಾರೆ. ಮರಾಠಿಯಲ್ಲಿ ಧಮ್ನಾ ಎನ್ನುತ್ತಾರೆ ಇವಕ್ಕೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇದು ಧಮ್ನಾ ಅಲ್ಲ, ಬೋರ್​ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ‘ಚಂದ್ರನ ಬಳಿ ಸಿಲುಕಿಕೊಂಡಿದ್ದೇನೆ’; ಇದು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದ ಮುಂಬೈ ಪೊಲೀಸರು

ಇದು ಕ್ರ್ಯಾನ್​ಬೆರ್ರಿ? ಎಂದು ಮತ್ತೊಬ್ಬರು ಕೇಳಿದ್ದಾರೆ. ಇಲ್ಲ ಇದು ಜುಜುಬೆ ಎಂದು ಹೇಳಿದ್ದಾರೆ ಇನ್ನೊಬ್ಬರು. ಹೌದು ಇದು ಇಂಡಿಯನ್​ ಜುಜುಬೆ ಹಣ್ಣು ಎಂದು ಮತ್ತೂ ಒಬ್ಬರು ಹೇಳಿದ್ದಾರೆ. ಪಹೇಲಿ ಸಿನೆಮಾದಲ್ಲಿ ಈ ಹಣ್ಣು ನೋಡಿದಾಗಿನಿಂದ ನನಗೆ ತಿನ್ನಬೇಕು ಎನ್ನಿಸುತ್ತಿದೆ. ಆದರೆ ಉತ್ತರ ಪ್ರದೇಶದಲ್ಲಿ ಸಿಗುತ್ತಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್

ಎಲ್ಲಿ ಸಿಗುತ್ತದೆ ಅಡ್ರೆಸ್​ ಹೇಳಿ ಎಂದು ಮತ್ತೊಬ್ಬರು. ಇದು ನನ್ನ ಬಾಲ್ಯದ ಸಿಹಿಯಾದ ನೆನಪು ಎಂದು ಮಗದೊಬ್ಬರು. ನಮ್ಮ ತೋಟದಲ್ಲಿ ನೂರು ಗಿಡಗಳಿವೆ ಎಂದು ಒಬ್ಬರು. ದಯವಿಟ್ಟು ಕಳಿಸಿಕೊಡಿ ಎಂದು ಅನೇಕರು ಅವರಿಗೆ ಮುಗಿಬಿದ್ದಿದ್ದಾರೆ. ಒಟ್ಟಿನಲ್ಲಿ ಭಾರತದಲ್ಲಿ ಬೇರೆ ಬೇರೆ ಭಾಷೆಯಲ್ಲಿ ಈ ಹಣ್ಣಿಗೆ ಏನೆನ್ನುತ್ತಾರೆ ಎನ್ನುವುದರ ಚರ್ಚೆ ಸಾಕಷ್ಟು ಜೋರಾಗಿ ನಡೆದಿದೆ. ಆಹಾ ಎಷ್ಟೊಂದು ವೈವಿಧ್ಯತೆ!

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:36 pm, Tue, 31 January 23

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ