AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸೈಕಲ್​ಗೆ ಬಿಸಿಲು ಬೀಳದಂತೆ ತಡೆಯಲು ಅಜ್ಜ ಮಾಡಿದ ಉಪಾಯ ನೋಡಿ, ಓಡಿಸುವುದೂ ನಿಲ್ಲಿಲ್ಲ, ಬಿಸಿಲ ಬೇಗೆಯೂ ಇಲ್ಲ

ನಿತ್ಯ ದುಡಿದರೇ ಅನ್ನ, ಒಂದು ಹೊತ್ತು ಕೆಲಸ ಬಿಟ್ಟರೂ ಅಂದು ಉಪವಾಸವೆಂಬ ಪರಿಸ್ಥಿತಿ. ಹೀಗಿರುವಾಗ ಸೈಕಲ್​ನಲ್ಲಿ ಅದೂ ಇಳಿ ವಯಸ್ಸಿನಲ್ಲಿ ಸೈಕಲ್ ಏರಿ ಹೋಗುವಷ್ಟು ಶಕ್ತಿಯೂ ಇಲ್ಲ, ಹೀಗಾಗಿ ಈ ಅಜ್ಜ ಒಂದು ಅದ್ಭುತ ಉಪಾಯ ಮಾಡಿದ್ದಾರೆ.

Viral Video: ಸೈಕಲ್​ಗೆ ಬಿಸಿಲು ಬೀಳದಂತೆ ತಡೆಯಲು ಅಜ್ಜ ಮಾಡಿದ ಉಪಾಯ ನೋಡಿ, ಓಡಿಸುವುದೂ ನಿಲ್ಲಿಲ್ಲ, ಬಿಸಿಲ ಬೇಗೆಯೂ ಇಲ್ಲ
ಸೈಕಲ್Image Credit source: ABP Live
ನಯನಾ ರಾಜೀವ್
|

Updated on: May 25, 2023 | 2:40 PM

Share

ನಿತ್ಯ ದುಡಿದರೇ ಅನ್ನ, ಒಂದು ಹೊತ್ತು ಕೆಲಸ ಬಿಟ್ಟರೂ ಅಂದು ಉಪವಾಸವೆಂಬ ಪರಿಸ್ಥಿತಿ. ಹೀಗಿರುವಾಗ ಬಿಸಿಲಲ್ಲಿ ಅದೂ ಇಳಿ ವಯಸ್ಸಿನಲ್ಲಿ ಸೈಕಲ್ ಏರಿ ಹೋಗುವಷ್ಟು ಶಕ್ತಿಯೂ ಇಲ್ಲ, ಹೀಗಾಗಿ ಈ ಅಜ್ಜ ಒಂದು ಅದ್ಭುತ ಉಪಾಯ ಮಾಡಿದ್ದಾರೆ. ಜನರು ಈ ಬಿಸಿಲಿನಲ್ಲಿ ಕಾರಿನಲ್ಲಿ ಓಡಾಡಲೂ ಹಿಂಜರಿಯುತ್ತಿರುವ ಈ ಸಂದರ್ಭದಲ್ಲಿ ಈ ಅಜ್ಜ ತುಂಬಾ ತಲೆ ಖರ್ಚು ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನು ಸಾಮಾನ್ಯರು ಊಹಿಸಲೂ ಅಸಾಧ್ಯ, ಕೆಲವು ಮರದ ಕಂಬಗಳನ್ನು ಬಳಸಿಕೊಂಡು ಬಿಸಿಲು ಸೈಕಲ್​ಗೆ ತಾಗದಂತೆ ಮಾಡಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಸುಡುವ ಬಿಸಿಲಿನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಸೈಕಲ್ ತುಳಿಯುವುದನ್ನು ನಾವು ನೋಡಬಹುದು.

ಸದ್ಯ ಬಿರು ಬಿಸಿಲಿನಲ್ಲಿ ಸೈಕಲ್ ತುಳಿಯುವುದೇ ಸುಸ್ತು, ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ಆ ಸೈಕಲ್​ ಸುತ್ತಲೂ ಮರದ ಚೌಕಟ್ಟನ್ನು ನಿರ್ಮಿಸಿದ್ದಾರೆ, ಅದರ ಅಡಿಯಲ್ಲಿ ಸಣ್ಣ ಟೈರ್​ಗಳನ್ನು ಅಳವಡಿಸಲಾಗಿದೆ. ಇದರಿಂದ ವ್ಯಕ್ತಿಗೆ ಸೈಕಲ್ ಸವಾರಿ ಮಾಡುವಾಗ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ.

ಮತ್ತಷ್ಟು ಓದಿ: Viral Video: ಎಲ್ಲಿಂದ ಬಂದರೋ ಎಲ್ಲಿಗೆ ಹೊರಟಿರುವರೋ ಈ ಅಜ್ಜಿ; ನಿಮಗೇನಾದರೂ ಗೊತ್ತೆ?

ಆ ಮರದ ಚೌಕಟ್ಟಿಗೆ ಬಟ್ಟೆಯನ್ನು ಹಾಕಿದ್ದಾರೆ, ಇದು ನಡೆಯುವಾಗ ಸೂರ್ಯನ ಶಾಖದಿಂದ ಪರಿಹಾರ ನೀಡುತ್ತದೆ. ಇದೇ ಕಾರಣಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಇಲ್ಲಿಯವರೆಗೂ 31 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿದ್ದು, 2.2 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಕಷ್ಟ ಬಂದಾಗ ಆ ದಾರಿಯೇ ಸರಿ ಇಲ್ಲ ಎಂದು ಬಿಡುವುದಲ್ಲ, ಕಷ್ಟವನ್ನು ಮೆಟ್ಟಿ ಮುಂದೆ ಸಾಗಬೇಕು, ಆಲೋಚಿಸಿದರೆ ಏನಾದರೂ ಮಾರ್ಗ ಸಿಗುವುದು ಎಂಬುದು ಸಾಬೀತಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ