Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಸೊಪ್ಪುಗಳನ್ನು ಗುರುತಿಸಿ ರೂ. 5000 ನಗದು ಬಹುಮಾನ ಗೆಲ್ಲಿ; ಸ್ವಿಗ್ಗಿ ಇನ್​ಸ್ಟಾಮಾರ್ಟ್​ ಸ್ಪರ್ಧೆ

Swiggy Instamart : ನಾನು ಸರಿಯಾದ ಉತ್ತರ ಹೇಳಿದ್ದೇನೆ ನನ್ನ ಅಕೌಂಟಿಗೆ ಬಹುಮಾನದ ಹಣವನ್ನು ಕಳಿಸಿ ಎಂದು ಹಲವಾರು ಜನ ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ್ಧಾರೆ. ಆದರೆ ಬಹುಮಾನ ಪಡೆದುಕೊಂಡವರು ಎಷ್ಟು ಜನ ಇರಬಹುದು?

Viral: ಸೊಪ್ಪುಗಳನ್ನು ಗುರುತಿಸಿ ರೂ. 5000 ನಗದು ಬಹುಮಾನ ಗೆಲ್ಲಿ; ಸ್ವಿಗ್ಗಿ ಇನ್​ಸ್ಟಾಮಾರ್ಟ್​ ಸ್ಪರ್ಧೆ
ಈ ಸೊಪ್ಪುಗಳನ್ನು ಹೆಸರಿಸಿ ನಗದು ಬಹುಮಾನ ಗೆಲ್ಲಿ!
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 25, 2023 | 12:33 PM

Greens : ಶೀರ್ಷಿಕೆ ಓದಿದಾಗ ನಿಮ್ಮಲ್ಲಿ ಕೆಲವರಿಗೆ ನಗು ಬರಬಹುದು. ಆದರೆ ಇದು ನಗುವ ಸಂಗತಿಯಲ್ಲ. ಈಗಿನ ಪೀಳಿಗೆಗೆ ಹೋಟೆಲ್​ ಅಥವಾ ಅಪ್ಲಿಕೇಷನ್​ನಲ್ಲಿರುವ ಮೆನು ಸೆಲೆಕ್ಟ್​ ಮಾಡಿ ಗೊತ್ತಿರುತ್ತದೆ. ಅಂದರೆ ಖಾದ್ಯಗಳ ರುಚಿ, ಹೆಸರುಗಳು ಸಲೀಸಾಗಿ ನಾಲಗೆ ಮತ್ತು ಮೆದುಳಿನಲ್ಲಿ ಅಚ್ಚೊತ್ತಿರುತ್ತವೆ. ಆದರೆ ಯಾವ ಸಾಮಗ್ರಿಗಳಿಂದ, ತರಕಾರಿ, ಸೊಪ್ಪುಗಳಿಂದ ಏನನ್ನು ತಯಾರಿಸುತ್ತಾರೆ ಎಂಬ ಅರಿವಿರುವುದಿಲ್ಲ. ಸ್ವಿಗ್ಗಿ ಇನ್​ಸ್ಟಾಮಾರ್ಟ್​ (Swiggy Instamart) ಇಂಥವರಿಗಾಗಿ(?) ಕುತೂಹಲಕರವಾದ ಸೊಪ್ಪುಸ್ಪರ್ಧೆ ಏರ್ಪಡಿಸಿತ್ತೇ?

ಮೇ 24 ರಂದು ಇದನ್ನು ಟ್ವೀಟ್ ಮಾಡಲಾಗಿತ್ತು. ಇಲ್ಲಿರುವ ಸೊಪ್ಪುಗಳ ಹೆಸರು ಹೇಳಿದವರಿಗೆ ನಗದು ಬಹುಮಾನವನ್ನೂ ಕೊಡಲಾಗುವುದು ಎಂದು ತಿಳಿಸಲಾಗಿತ್ತು. ಆ ಪ್ರಕಾರ ನೆಟ್ಟಿಗರೊಬ್ಬರು ರೂ. 5,000 ನಗದು ಬಹುಮಾನ ಪಡೆದುಕೊಂಡರು. ಅದಕ್ಕೂ ಮುನ್ನ ಸಾಗರೋಪಾದಿಯಲ್ಲಿ ಪ್ರತಿಕ್ರಿಯೆಗಳು ಹರಿದುಬಂದವು. ಇನ್ನೂ ಬರುತ್ತಲೂ ಇವೆ.

ಇದನ್ನೂ ಓದಿ : Viral Video: ದಾರಿಬಿಡಿ ಜಿಂಕೆಟೀಚರ್ ಬಂದರು; ಸಾಲಾಗಿ ನಿಲ್ಲಿ ಎಡ್ಮಿಷನ್ ಶುರುವಾಗಿದೆ!

ಈ ತನಕ 1.8 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ಪೋಸ್ಟ್​ ನೋಡಿದ್ದಾರೆ. ಮೆಂತ್ಯೆ, ಕೊತ್ತಂಬರಿ, ಲೆಟ್ಯೂಸ್​, ಪುದೀನಾ ಎಂದು ಅನೇಕರು ಹೇಳಿದ್ದಷ್ಟೇ ಅಲ್ಲದೆ, ನನ್ನ ರೂ. 5,000 ಅಕೌಂಟಿಗೆ ಕಳಿಸಿ ಎಂದಿದ್ದಾರೆ. ನನಗೆ ಪುದೀನಾ, ಕೊತ್ತಂಬರಿ ಕಳಿಸಿ ಚಟ್ನಿ ಮಾಡಲು ಕಾಯುತ್ತಿದ್ದೇನೆ ಈವತ್ತು ತರಕಾರಿ ಪಲ್ಯ ಮಾಡಲಾಗುತ್ತಿಲ್ಲ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಶಾಲಿನಿಯ ಲೈಫ್​ ಇಷ್ಟೇನೇ ಸಲಹಾ ಕೇಂದ್ರಕ್ಕೆ ನಿಮಗೆ ಸ್ವಾಗತ!

ನನಗಂತೂ ಈ ಎಲ್ಲಾ ಸೊಪ್ಪುಗಳು ಒಂದೇ ಥರ ಕಾಣುತ್ತಿವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇಷ್ಟೊಂದು ಜನರೆಲ್ಲರೂ ಸರಿಯಾದ ಉತ್ತರ ಹೇಳಿದ್ದಾರೆ. ಅವರೆಲ್ಲರಿಗೂ ಬಹುಮಾನ ದೊರಕುವುದೆ? ಎಂದು ಕೆಲವರು ಕೇಳಿದ್ದಾರೆ. ನಾನು ಉತ್ತರ ಹೇಳಿದ್ದೇನೆ ನನಗೆ ಹಣ ಕಳಿಸಲೇಬೇಕು ಎಂದು ಕೆಲವರು ತಮಾಷೆಯಿಂದ ಒತ್ತಾಯಿಸಿದ್ದಾರೆ.

ಚೆನ್ನಾಗಿದೆಯಲ್ಲ ಸ್ವಿಗ್ಗಿ ಇನ್​ಸ್ಟಾಮಾರ್ಟ್​ನ ಪ್ರೊಮೋಷನಲ್​ ಪೋಸ್ಟ್​​? ನೀವೇನಂತೀರಿ ಇಂಥ ಸ್ಪರ್ಧೆಗಳ ಕುರಿತು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:22 pm, Thu, 25 May 23

ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ