Viral: ಗರಗಸ ಗಣಿತ; ಸರಳವೆನ್ನಿಸುವ ಈ ಗಣಿತ ಸಮಸ್ಯೆ ಗೊಂದಲ ಮೂಡಿಸಿದ್ದ್ಯಾಕೆ?

Math : 'ಶಿಕ್ಷಣ ವ್ಯವಸ್ಥೆಯ ಉತ್ಕೃಷ್ಟ ಮಾದರಿ' ವ್ಯಂಗ್ಯವಾಡಿದ್ದಾರೆ ಕೆಲವರು. ಸರಿಯಾದ ಉತ್ತರವನ್ನು ಪಡೆಯುವ ಬಗೆಯನ್ನು ವಿವರಿಸಿದ್ದಾರೆ ಹಲವರು. ಇನ್ನುಳಿದವರು ಶಿಕ್ಷಕರ ತಪ್ಪು ತರ್ಕವನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ನೀವೇನನ್ನುತ್ತೀರಿ?

Viral: ಗರಗಸ ಗಣಿತ; ಸರಳವೆನ್ನಿಸುವ ಈ ಗಣಿತ ಸಮಸ್ಯೆ ಗೊಂದಲ ಮೂಡಿಸಿದ್ದ್ಯಾಕೆ?
Follow us
|

Updated on:May 24, 2023 | 3:52 PM

Viral: ಗಣಿತವೆಂದರೆ ಕಬ್ಬಿಣದ ಕಡಲೆ ಎಂದೇ ಬಹುಜನರ ನಂಬಿಕೆ. ಅನೇಕ ಕಾರಣಗಳಿಂದ ಜಗತ್ತಿನಾದ್ಯಂತ ಮಂದಿ ಗಣಿತವೆಂದರೆ ಗಡಗಡ ನಡುಗುವರು. ವಾಸ್ತವದಲ್ಲಿ ಈ ಮಾತನ್ನು ಯಾವುದೇ ವಿಷಯ ಅಥವಾ ಕ್ಷೇತ್ರಕ್ಕೂ ಅನ್ವಯಿಸಬಹುದು. ಆಸಕ್ತಿ ಇದ್ದು ತಕ್ಕ ಶ್ರಮ ವಹಿಸಿದಾಗ ಮೊದಲಿಗೆ ವಜ್ಜೆಯೆನ್ನಿದ್ದು ನಂತರ ಹೂವಿನಷ್ಟು ಹಗುರವೂ ಆಗಬಹುದು. ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡದಿರುವುದಕ್ಕೆ ಮುಖ್ಯ ಕಾರಣಗಳಲ್ಲೊಂದು ಆ ವಿಷಯವನ್ನು ಕಲಿಸುವ ರೀತಿ. ಎಲ್ಲೆಡೆ ಶಿಕ್ಷಣ ವ್ಯವಸ್ಥೆಗಳಲ್ಲಿ ಹೇಳತೀರದಷ್ಟು ಕೊರತೆಗಳಿವೆ. ಅದರ ಮಾದರಿಯೊಂದನ್ನು ಕೆಳಗಿನ ಚಿತ್ರದಲ್ಲಿ ಗಮನಿಸಬಹುದು.

ಗಣಿತ ಮತ್ತು ತಾರ್ಕಿಕ ಚಿಂತನೆ ಬಳಸಿಕೊಂಡು ಪರಿಹರಿಸಬೇಕಾದ ಸಮಸ್ಯೆಯೊಂದು ಇಲ್ಲಿದೆ. ಒಂದು ಕಟ್ಟಿಗೆಯ ಹಲಗೆಯನ್ನು ಇಬ್ಭಾಗ ಮಾಡಲು ಹತ್ತು ನಿಮಿಷ ಬೇಕಾಗುತ್ತದೆ. ಹಾಗಿದ್ದಲ್ಲಿ ಅಂಥದೇ ಇನ್ನೊಂದು ಹಲಗೆಯನ್ನು ಮೂರು ಭಾಗವಾಗಿ ಕತ್ತರಿಸಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದು ಪ್ರಶ್ನೆ. ಚಿತ್ರದಲ್ಲಿ ವಿದ್ಯಾರ್ಥಿ ಬರೆದ ಸರಿಯಾದ ಉತ್ತರವನ್ನು ಕೆಂಪು ಪೆನ್ನಿನಿಂದ ಹೊಡೆದು ಹಾಕಿದ ಶಿಕ್ಷಕರು ಅಸಮರ್ಪಕ ತರ್ಕ ಬಳಸಿ ತಪ್ಪಾದ ಉತ್ತರ ಬರೆದಿದ್ದಾರೆ.

ಇದನ್ನೂ ಓದಿ : Viral Video: ಊರ್ಫಿಯ ಹೊಸ ಅವತಾರ; ಸೆಗಣಿ ಮೆತ್ತಿಕೊಂಡಂತಿದೆ ಎನ್ನುತ್ತಿರುವ ನೆಟ್ಟಿಗರು

ಇದು ಟ್ವಿಟರ್​ನಲ್ಲಿ ಅಲೆಯೆಬ್ಬಿಸಿದೆ. ‘ಶಿಕ್ಷಣ ವ್ಯವಸ್ಥೆಯ ಉತ್ಕೃಷ್ಟ ಮಾದರಿ’ ಎಂದು ವ್ಯಂಗ್ಯವಾಡಿದ್ದಾರೆ. ಹಲವರು ಸರಿಯಾದ ಉತ್ತರವನ್ನು ಪಡೆಯುವ ಬಗೆಯನ್ನು ವಿವರಿಸಿದ್ದರೆ, ಇನ್ನೂ ಕೆಲವರು ಆವೇಶದಿಂದ ಶಿಕ್ಷಕರ ತಪ್ಪು ತರ್ಕವನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಂದಿಬ್ಬರು ಈ ಸರಳ ಪ್ರಶ್ನೆಯನ್ನು ಸಂಕೀರ್ಣಗೊಳಿಸಿ ಇದನ್ನು ಈ ರೀತಿ ನೋಡಿದರೆ ಶಿಕ್ಷಕರ ಉತ್ತರ ಸರಿಯಾಗುವುದು ಎಂದು ಪಾಂಡಿತ್ಯ ಪ್ರದರ್ಶಿಸಿದ್ದಾರೆ. ಅವರ ಪ್ರಯತ್ನದಿಂದ ಬಸವಳಿದವರು ಏನೂ ಹೇಳದೇ ಹಣೆ ಚಚ್ಚಿಕೊಳ್ಳುವ ಗಿಫ್‌ನಿಂದ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಹೈದರಾಬಾದಿನ 76 ವರ್ಷದ ಈ ಯುವಕನ ಲಗೇಜು ತಾಲೀಮು

ಈ ನಿರ್ದಿಷ್ಟ ಪ್ರಶೆಯನ್ನು ಸ್ವಲ್ಪಮಟ್ಟಿಗೆ ‘trick question’ ಎಂದು ನಾವು ಒಪ್ಪಿಕೊಳ್ಳುವುದಾದರೂ ಒಟ್ಟಾರೆಯಾಗಿ ಶಿಕ್ಷಣ ವ್ಯವಸ್ಥೆಯ ಬಗೆಗಿನ ಮೇಲಿನ ಒಕ್ಕಣೆ ಸರಿಯೆಂದೇ ಹೇಳಬೇಕು. ಈ ಗಣಿತದ ಸಮಸ್ಯೆಗೆ ಸರಿಯುತ್ತರ ನಿಮಗೆ ಗೊತ್ತಾಯಿತೇ? ಮನೆಯಲ್ಲಿ ಇದನ್ನು ನಿಮ್ಮ ಮಕ್ಕಳಿಗೆ ಕೇಳಿ. ನಾವು ಗಣಿತ ಅಥವಾ ಇತರ ವಿಷಯಗಳನ್ನು ಸರಿಯಾಗಿ ಕಲಿಸುತ್ತಿದ್ದೇವೆಯೇ? ನಿಮ್ಮ ಅನಿಸಿಕೆಗಳನ್ನು ತಿಳಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:47 pm, Wed, 24 May 23

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ