Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೈದರಾಬಾದಿನ 76 ವರ್ಷದ ಈ ‘ಯುವಕ’ನ ಲಗೇಜು ತಾಲೀಮು

Senior Citizen : ಇವರು ಹೆಂಡತಿಯೊಂದಿಗೆ ಪ್ರವಾಸಕ್ಕೆ ಹೊರಟಿದ್ಧಾರೆ. ಇಲ್ಲಿ ರೈಲೂ, ಬಸ್ಸೂ ಬರುವುದಿಲ್ಲ. ಏಕೆಂದರೆ ಇದು ಮನೆ. ಆದರೂ ಯಾಕಿವರು ಹೀಗೆ ಓಡಾಡುತ್ತಿದ್ಧಾರೆ? ಪರಾವಲಂಬಿಗಳಾಗುತ್ತಿರುವ ನಮ್ಮೆಲ್ಲರಿಗೂ ಇಲ್ಲೊಂದು ಸಂದೇಶವಿದೆ!

Viral Video: ಹೈದರಾಬಾದಿನ 76 ವರ್ಷದ ಈ 'ಯುವಕ'ನ ಲಗೇಜು ತಾಲೀಮು
76 ವರ್ಷದ ಇವರು ರೈಲುನಿಲ್ದಾಣದಲ್ಲಿ ಕೂಲಿ ಸಹಾಯವಿಲ್ಲದೆ ನಡೆಯುವುದು ಹೇಗೆ ಎನ್ನುವುದನ್ನು ಮನೆಯೊಳಗೆ ಅಭ್ಯಾಸ ಮಾಡುತ್ತಿರುವುದು.
Follow us
ಶ್ರೀದೇವಿ ಕಳಸದ
|

Updated on:May 24, 2023 | 10:26 AM

Hyderabad : ಫುಟ್​ಬಾಲ್​, ಕ್ರಿಕೆಟ್​, ವಾಲಿಬಾಲ್​ ಹೀಗೆ ಯಾವ ಕ್ರೀಡೆಯಾಗಲಿ, ನಾಟಕ, ಸಂಗೀತ, ನೃತ್ಯ ಹೀಗೆ ಯಾವುದೇ ಪ್ರದರ್ಶನ ಕಲೆಯಾಗಲಿ ಅಷ್ಟೇ ಏಕೆ ನಿತ್ಯವೂ ತಟ್ಟುವ ರೊಟ್ಟಿಯೇ ಇರಲಿ, ಅಭ್ಯಾಸವಿಲ್ಲದೇ ಯಾವುದೂ ಕರಗತವಾಗದು. ಅಭ್ಯಾಸ ಎನ್ನುವುದು ಆತ್ಮವಿಶ್ವಾಸವನ್ನು ಕೊಡುತ್ತದೆ ಅಲ್ಲವೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ವೃದ್ಧರೊಬ್ಬರು ಮನೆಯೊಳಗೆ ಲಗೇಜುಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ.  ಅರೆ! ಇವರು ಹೀಗೇಕೆ ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಏಳುತ್ತಿದೆಯೇ?

ಹೈದರಾಬಾದಿನಲ್ಲಿ ಪತ್ರಕರ್ತೆಯಾಗಿರುವ ಮಂಜು ಲತಾ ಕಲಾನಿಧಿ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಇವರ ತಂದೆ ಪ್ರವಾಸಕ್ಕೆ ಹೋಗುವ ಮೊದಲು ಹೀಗೆ ಮನೆಯೊಳಗೆ ‘ಲಗೇಜು ತಾಲೀಮು’ ನಡೆಸಿದ ವಿಡಿಯೋ ಇದಾಗಿದೆ. ಅಂದರೆ, 76 ವರ್ಷದ ಅವರು ಅವರ ಹೆಂಡತಿ ಮತ್ತು ಲಗೇಜುಗಳೊಂದಿಗೆ ರೈಲುನಿಲ್ದಾಣದಲ್ಲಿ ಕೂಲಿಯ ಸಹಾಯವಿಲ್ಲದೆ ನಡೆಯಬಲ್ಲೆನೇ? ಎಂದು ಸ್ವಯಂಪರೀಕ್ಷೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Viral Video: ದೇಶವಿಭಜನೆಯಲ್ಲಿ ಬೇರ್ಪಟ್ಟ ಒಡಹುಟ್ಟಿದವರು 75 ವರ್ಷಗಳ ನಂತರ ಪುನರ್ಮಿಲನಗೊಂಡಾಗ

ಇಂದು ಬೆರಳತುದಿಯಲ್ಲಿಯೇ ಇಷ್ಟೆಲ್ಲ ಸೌಲಭ್ಯಗಳು ಲಭ್ಯವಿದ್ದರೂ ಹಳೆಯ ತಲೆಮಾರಿನವರು ಆದಷ್ಟು ಸ್ವಾವಲಂಬಿತನವನ್ನು ಕಾಪಾಡಿಕೊಳ್ಳುವಲ್ಲಿ ಉತ್ಸುಕರಾಗಿರುತ್ತಾರೆ. ಇದು ಮೈಗೂ ಮನಸಿಗೂ ಹಿತಕರ ಎಂಬ ಗಟ್ಟಿ ನಿಲುವು ಅವರದು. ಹಾಗಾಗಿ ನಿತ್ಯದ ಚಟುವಟಿಕೆಗಳಿರಲಿ ಅಥವಾ ಇಂಥ ಅಪರೂಪದ ಚಟುವಟಿಕೆಗಳಿರಲಿ, ಅವಲಂಬನೆಯಿಂದ ತಪ್ಪಿಸಿಕೊಳ್ಳುವ ಆಲೋಚನೆಯಲ್ಲಿ ಅವರು ಸದಾ ಮುಳುಗಿರುತ್ತಾರೆ.

ಇದನ್ನೂ ಓದಿ : Viral Video: ಮುಂಬೈ ಲೋಕಲ್​ ಟ್ರೇನಿನ ಈ ನಿತ್ಯಪ್ರಯಾಣಿಕನ ವಿಡಿಯೋ ವೈರಲ್

ಈ ವಿಡಿಯೋ ಅನ್ನು ಸುಮಾರು 6.7 ಲಕ್ಷ ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ತಂದೆಗೆ ಸಲಾಮ್​ ತಿಳಿಸಿ, ಅವರು ಯುವಕರಿಗಿಂತ ಯುವಕರಾಗಿ ಕಾಣುತ್ತಿದ್ದಾರೆ ಎಂದು ಒಬ್ಬರು ಹೇಳಿದ್ಧಾರೆ. 79 ವರ್ಷದ ನನ್ನ ತಂದೆಯೂ ಹೀಗೇ. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಅವರ ಮುಖದ ಮೇಲಿನ  ಆತ್ಮವಿಶ್ವಾಸವನ್ನು ನೋಡಲು ಹೆಮ್ಮೆ ಎನ್ನಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಹೌದು ನಮ್ಮ ತಂದೆತಾಯಿಯ ತಲೆಮಾರಿನವರೆಲ್ಲರೂ ಸ್ವಸಹಾಯವನ್ನು ನೆಚ್ಚಿಕೊಂಡಿದ್ದವರು. ಅದಕ್ಕೇ ಅವರ ಆರೋಗ್ಯ, ಮನಸ್ಸು ಅಷ್ಟು ಗಟ್ಟಿಯಾಗಿರುವುದು ಎಂದು ಕೆಲವರು ಹೇಳಿದ್ಧಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:22 am, Wed, 24 May 23

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು