AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹಳ್ಳಿಯ ದಾರಿಯಲ್ಲಿ ಬೈಕ್​ನಲ್ಲಿ ಹೋಗುವಾಗ ದಿಢೀರೆಂದು ಎದುರು ಬಂದ ಸಿಂಹಿಣಿ; ಶಾಕಿಂಗ್ ವಿಡಿಯೋ ಇಲ್ಲಿದೆ

Shocking Video: ಅದೃಷ್ಟವಶಾತ್ ಆ ಸಿಂಹಿಣಿ ಬೈಕ್ ಸಮೀಪವೇ ಬಂದರೂ ಆ ಪ್ರಯಾಣಿಕರ ಮೇಲೆ ಯಾವುದೇ ದಾಳಿ ಮಾಡಲಿಲ್ಲ. ಪ್ರಯಾಣಿಕರ ಹತ್ತಿರಕ್ಕೆ ಬಂದ ಆ ಸಿಂಹಿಣಿ ನಂತರ ಪೊದೆಗಳ ಕಡೆಗೆ ಹೋಗುತ್ತದೆ. ನಂತರ ಪೊದೆಗಳ ಹಿಂದೆ ಆ ಸಿಂಹಿಣಿ ಕಣ್ಮರೆಯಾಗುತ್ತದೆ.

Viral Video: ಹಳ್ಳಿಯ ದಾರಿಯಲ್ಲಿ ಬೈಕ್​ನಲ್ಲಿ ಹೋಗುವಾಗ ದಿಢೀರೆಂದು ಎದುರು ಬಂದ ಸಿಂಹಿಣಿ; ಶಾಕಿಂಗ್ ವಿಡಿಯೋ ಇಲ್ಲಿದೆ
ದಾರಿಯಲ್ಲಿ ಎದುರಾದ ಸಿಂಹಿಣಿ
TV9 Web
| Edited By: |

Updated on: Feb 16, 2022 | 1:14 PM

Share

ನಗರದ ಜನರಿಗೆ ಹಳ್ಳಿಗಳಲ್ಲಿ ಓಡಾಡುವುದೆಂದರೆ ಒಂಥರಾ ಖುಷಿ, ಹಳ್ಳಿಗಳ ಬಗ್ಗೆ ಕುತೂಹಲ. ಸುತ್ತಲಿನ ಹಸಿರು, ವಿಸ್ತಾರವಾದ ನಿರ್ಮಲ ಆಕಾಶ ಮತ್ತು ತಾಜಾ ಗಾಳಿಯ ಅಲೆಗಳು ಎಂಥವರ ಮನಸನ್ನೂ ಉಲ್ಲಸಿತಗೊಳಿಸುತ್ತವೆ. ಹೀಗೆ ಹಳ್ಳಿಯ ದಟ್ಟ ಕಾಡಿನ ಮಧ್ಯೆ ಹೋಗುತ್ತಿರುವಾಗ ಅಕಸ್ಮಾತ್ ಸಿಂಹ (Lion) ಎದುರು ಬಂದರೆ ಹೇಗಿರುತ್ತದೆ? ಆರಾಮಾಗಿ ಹಳ್ಳಿಯ ವಾತಾವರಣದಲ್ಲಿ ಓಡಾಡಬೇಕು ಎಂದು ಹೋಗಿದ್ದವರಿಗೆ ಎದುರಲ್ಲಿ ಸಿಂಹಿಣಿಯೊಂದು ಎದುರು ಬಂದಿದೆ. ಕಿರಿದಾದ ಹಳ್ಳಿಯ ಹಾದಿಯಲ್ಲಿ ಪ್ರಯಾಣಿಸುವಾಗ ಇಬ್ಬರು ಪ್ರಯಾಣಿಕರಿಗೆ ಸಿಂಹಿಣಿ ಎದುರಾಗಿದೆ.

ವೈರಲ್ ಆಗಿರುವ ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕ್ಲಿಪ್‌ನಲ್ಲಿ ಬೈಕಿನಲ್ಲಿ ಇಬ್ಬರು ಪ್ರಯಾಣಿಕರು ಹಳ್ಳಿಯ ಹಾದಿಯಲ್ಲಿ ಹಾದುಹೋಗುತ್ತಿರುವುದನ್ನು ನೋಡಬಹುದು. ಹಾಗೆ ಹೋಗುತ್ತಿರುವಾಗ ರಸ್ತೆಯಲ್ಲೇ ದೂರದಲ್ಲಿ ಸಿಂಹಿಣಿಯೊಂದು ಚಲಿಸುತ್ತಿರುತ್ತದೆ. ನಂತರ ಆ ಸಿಂಹಿಣಿ ಬೈಕ್‌ನತ್ತ ಬರುತ್ತಿರುವುದನ್ನು ವಿಡಿಯೋದಲ್ಲಿ ರೆಕಾರ್ಡ್​ ಮಾಡಲಾಗಿದೆ. ಈ ಮೈ ಜುಂ ಎನಿಸುವ ವಿಡಿಯೋ ಭಾರೀ ವೈರಲ್ ಆಗಿದೆ.

ಅದೃಷ್ಟವಶಾತ್ ಆ ಸಿಂಹಿಣಿ ಬೈಕ್ ಸಮೀಪವೇ ಬಂದರೂ ಆ ಪ್ರಯಾಣಿಕರ ಮೇಲೆ ಯಾವುದೇ ದಾಳಿ ಮಾಡಲಿಲ್ಲ. ಪ್ರಯಾಣಿಕರ ಹತ್ತಿರಕ್ಕೆ ಬಂದ ಆ ಸಿಂಹಿಣಿ ನಂತರ ಪೊದೆಗಳ ಕಡೆಗೆ ಹೋಗುತ್ತದೆ. ನಂತರ ಪೊದೆಗಳ ಹಿಂದೆ ಆ ಸಿಂಹಿಣಿ ಕಣ್ಮರೆಯಾಗುತ್ತದೆ. ಈ ಘಟನೆ ನಡೆದಿರುವುದು ಗುಜರಾತ್‌ನಲ್ಲಿ. ಈ ವಿಡಿಯೋವನ್ನು 31,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಈ ವಿಡಿಯೋ ನೋಡಿದವರು ಆ ಇಬ್ಬರು ಪ್ರಯಾಣಿಕರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಂಹ ಹತ್ತಿರದಲ್ಲೇ ಸುಳಿದಾಡುವಾಗ ಹಾಗೆ ನಿಲ್ಲಲು ಸಾಕಷ್ಟು ಧೈರ್ಯ ಬೇಕು ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಹಾಗೇ, ಆ ಸಿಂಹಿಣಿ ಬೈಕ್ ಸವಾರರ ಮೇಲೆ ಏಕೆ ದಾಳಿ ಮಾಡಲಿಲ್ಲ? ಎಂಬ ಕುತೂಹಲವನ್ನೂ ಅನೇಕರು ವ್ಯಕ್ತಪಡಿಸಿದ್ದಾರೆ.

“ಸಿಂಹಗಳು ಪ್ರಚೋದನೆಗೆ ಒಳಗಾಗದ ಹೊರತು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ” ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಗುಜರಾತ್‌ನ ವಿವಿಧ ಪ್ರದೇಶಗಳಲ್ಲಿ ಸಿಂಹಗಳು ಹೆಚ್ಚಾಗಿವೆ.

ಇದನ್ನೂ ಓದಿ: Shocking News: ಹೆಂಡತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರನ್ನು ಕೊಲ್ಲಲು ಗಂಡ ಮಾಡಿದ ಪ್ಲಾನ್ ಅಂತಿಂಥದ್ದಲ್ಲ!

Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ