AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಶ್ಚಿಮ ಬಂಗಾಳದ ಕಲಾಶಿಕ್ಷಕಿಯ ಕೈಚಳವನ್ನೊಮ್ಮೆ ನೋಡಿ

3D Art : ಹೆಣ್ಣುಮಕ್ಕಳಿಗೆ ಹೊರಿಸಿದ ಅಕಾರಣ ಭಾರಗಳನ್ನು ಇಳಿಸಿದರೆ ಅವರು ಲೀಲಾಜಾಲವಾಗಿ ತಮ್ಮಿಷ್ಟದ  ಕಲೆ, ಕೌಶಲಗಳಲ್ಲಿ ಹೇಗೆ ಹರಿಯುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.

Viral Video: ಪಶ್ಚಿಮ ಬಂಗಾಳದ ಕಲಾಶಿಕ್ಷಕಿಯ ಕೈಚಳವನ್ನೊಮ್ಮೆ ನೋಡಿ
ಪಶ್ಚಿಮ ಬಂಗಾಳದ ಕಲಾ ಶಿಕ್ಷಕಿಯ 3D ಆರ್ಟ್​ ಮ್ಯಾಜಿಕ್​!
TV9 Web
| Edited By: |

Updated on: Jun 06, 2023 | 1:47 PM

Share

Street Art: ಬೀದಿ ಕಲೆ, ತ್ರೀಡಿ ಕಲೆ ಎಂದಾಗ ನಮಗೆ ಥಟ್ಟನೆ ನೆನಪಾಗುವುದು ಮೈಸೂರಿನ ಪ್ರತಿಭಾವಂತ ಕಲಾವಿದ ಬಾದಲ್​ ನಂಜುಂಡಸ್ವಾಮಿ.  ಮೈಸೂರು ಬೆಂಗಳೂರಿನ ಹಾಳಾದ ರಸ್ತೆಗಳಿಗೆ, ತೆರೆದ ರಸ್ತೆಗುಂಡಿಗಳಿಗೆ ಕಲಾತ್ಮಕ ಸ್ಪರ್ಶ ಕೊಟ್ಟು ಅಧಿಕಾರಿಗಳ ಗಮನ ಸೆಳೆದ ಆರ್ಟ್​ ಆ್ಯಕ್ಟಿವಿಸ್ಟ್​. ಈ ಕೆಳಗಿನ ವಿಡಿಯೋ ಕೂಡ ಬೀದಿಕಲೆಗೆ ಸಂಬಂಧಿಸಿದ್ದು. ಆದರೆ ವಿಡಿಯೋದ ಆರಂಭದಲ್ಲಿ ಈ ಹೆಣ್ಣುಮಗಳು ನಡೆದು ಬರುವ ರೀತಿ ಖಂಡಿತ ನಿಮಗೆ ಮುಂದಿನ ಸುಳಿವನ್ನು ಬಿಟ್ಟುಕೊಡಲಾರದು!

ಹೆಣ್ಣುಮಕ್ಕಳಿಗೆ ಹೊರಿಸಿದ ಅಕಾರಣ ಭಾರಗಳನ್ನು ಇಳಿಸಿದರೆ ಅವರು ಲೀಲಾಜಾಲವಾಗಿ ತಮ್ಮಿಷ್ಟದ  ಕಲೆ, ಕೌಶಲಗಳಲ್ಲಿ ಹೇಗೆ ಹರಿಯುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ತಲೆಯ ಮೇಲೆ ಸೆರಗು ಹೊದ್ದು ಬರುವ ಈಕೆ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಬಂದು ಗೆರೆಗಳನ್ನು ಬರೆಯಲಾರಂಭಿಸುತ್ತಾರೆ. ರಂಗೋಲಿ ಹಾಕುತ್ತಾರೆಯೇ ಎಂದು ಮೊದಲಿಗೆ ಅನ್ನಿಸಿದರೂ ಅದೂ ಅಲ್ಲ. ನೋಡನೋಡುತ್ತಿದ್ದಂತೆ ರಸ್ತೆಯನ್ನು ಸೀಳಿ ಹೆಬ್ಬಾವಿನಂತೆ ಕಾಣುವ ಕಲ್ಲುಗೋಡೆ ಧುತ್ತೆಂದು ನಿಂತುಬಿಡುತ್ತದೆ.

ಇದನ್ನೂ ಓದಿ : Viral Video: ಎಚ್​ಡಿಎಫ್​ಸಿ ಆನ್​ಲೈನ್​ ಮೀಟಿಂಗ್​ನಲ್ಲಿ ಉದ್ಯೋಗಿ ನಿಂದನೆ; ಅಧಿಕಾರಿ ಅಮಾನತು

ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಈಕೆಯ ನೈಪುಣ್ಯತೆಯನ್ನು ಶ್ಲಾಘಿಸುತ್ತಿದ್ದಾರೆ. ನೋಡಲು ಸಾಮಾನ್ಯ ಗೃಹಿಣಿಯಂತೆ ಕಾಣುವ ಈಕೆಯೊಳಗೆ ಇಂಥ ಅದ್ಭುತ ಕಲಾವಿದೆ ಅಡಗಿದ್ದಾಳೆ ಎನ್ನುವುದು ತಿಳಿಯುವುದೇ ಇಲ್ಲ ಎಂದು ಅಚ್ಚರಿಗೆ ಒಳಗಾಗಿದ್ದಾರೆ. ಇವರ ಕಲಾಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ

ಆದರೆ ಈಕೆ ಪಶ್ಚಿಮ ಬಂಗಾಳದ ಕಲಾ ಶಿಕ್ಷಕಿ. ತ್ರೀಡಿ ಆರ್ಟ್ (3D)​ ಅನ್ನು ಕರಗತ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್​ಲೋಡ್ ಮಾಡಿ ಈಗಾಗಲೇ ಜನರ ಮನಸೂರೆಗೊಂಡಿರುವಾಕೆ. ಯೋಚನಾಶಕ್ತಿ ಮತ್ತು ಆಸಕ್ತಿ ಇದ್ದರೆ ಇದ್ದ ಅವಕಾಶದಲ್ಲಿಯೇ ಹೇಗೆ ಕಾಲು ಚಾಚಬೇಕು ಎನ್ನುವುದನ್ನು ಕರಗತ ಮಾಡಿಕೊಂಡಿರುವ ದಿಟ್ಟೆ ಇವರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ