AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಶ್ಚಿಮ ಬಂಗಾಳದ ಕಲಾಶಿಕ್ಷಕಿಯ ಕೈಚಳವನ್ನೊಮ್ಮೆ ನೋಡಿ

3D Art : ಹೆಣ್ಣುಮಕ್ಕಳಿಗೆ ಹೊರಿಸಿದ ಅಕಾರಣ ಭಾರಗಳನ್ನು ಇಳಿಸಿದರೆ ಅವರು ಲೀಲಾಜಾಲವಾಗಿ ತಮ್ಮಿಷ್ಟದ  ಕಲೆ, ಕೌಶಲಗಳಲ್ಲಿ ಹೇಗೆ ಹರಿಯುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.

Viral Video: ಪಶ್ಚಿಮ ಬಂಗಾಳದ ಕಲಾಶಿಕ್ಷಕಿಯ ಕೈಚಳವನ್ನೊಮ್ಮೆ ನೋಡಿ
ಪಶ್ಚಿಮ ಬಂಗಾಳದ ಕಲಾ ಶಿಕ್ಷಕಿಯ 3D ಆರ್ಟ್​ ಮ್ಯಾಜಿಕ್​!
TV9 Web
| Updated By: ಶ್ರೀದೇವಿ ಕಳಸದ|

Updated on: Jun 06, 2023 | 1:47 PM

Share

Street Art: ಬೀದಿ ಕಲೆ, ತ್ರೀಡಿ ಕಲೆ ಎಂದಾಗ ನಮಗೆ ಥಟ್ಟನೆ ನೆನಪಾಗುವುದು ಮೈಸೂರಿನ ಪ್ರತಿಭಾವಂತ ಕಲಾವಿದ ಬಾದಲ್​ ನಂಜುಂಡಸ್ವಾಮಿ.  ಮೈಸೂರು ಬೆಂಗಳೂರಿನ ಹಾಳಾದ ರಸ್ತೆಗಳಿಗೆ, ತೆರೆದ ರಸ್ತೆಗುಂಡಿಗಳಿಗೆ ಕಲಾತ್ಮಕ ಸ್ಪರ್ಶ ಕೊಟ್ಟು ಅಧಿಕಾರಿಗಳ ಗಮನ ಸೆಳೆದ ಆರ್ಟ್​ ಆ್ಯಕ್ಟಿವಿಸ್ಟ್​. ಈ ಕೆಳಗಿನ ವಿಡಿಯೋ ಕೂಡ ಬೀದಿಕಲೆಗೆ ಸಂಬಂಧಿಸಿದ್ದು. ಆದರೆ ವಿಡಿಯೋದ ಆರಂಭದಲ್ಲಿ ಈ ಹೆಣ್ಣುಮಗಳು ನಡೆದು ಬರುವ ರೀತಿ ಖಂಡಿತ ನಿಮಗೆ ಮುಂದಿನ ಸುಳಿವನ್ನು ಬಿಟ್ಟುಕೊಡಲಾರದು!

ಹೆಣ್ಣುಮಕ್ಕಳಿಗೆ ಹೊರಿಸಿದ ಅಕಾರಣ ಭಾರಗಳನ್ನು ಇಳಿಸಿದರೆ ಅವರು ಲೀಲಾಜಾಲವಾಗಿ ತಮ್ಮಿಷ್ಟದ  ಕಲೆ, ಕೌಶಲಗಳಲ್ಲಿ ಹೇಗೆ ಹರಿಯುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ತಲೆಯ ಮೇಲೆ ಸೆರಗು ಹೊದ್ದು ಬರುವ ಈಕೆ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಬಂದು ಗೆರೆಗಳನ್ನು ಬರೆಯಲಾರಂಭಿಸುತ್ತಾರೆ. ರಂಗೋಲಿ ಹಾಕುತ್ತಾರೆಯೇ ಎಂದು ಮೊದಲಿಗೆ ಅನ್ನಿಸಿದರೂ ಅದೂ ಅಲ್ಲ. ನೋಡನೋಡುತ್ತಿದ್ದಂತೆ ರಸ್ತೆಯನ್ನು ಸೀಳಿ ಹೆಬ್ಬಾವಿನಂತೆ ಕಾಣುವ ಕಲ್ಲುಗೋಡೆ ಧುತ್ತೆಂದು ನಿಂತುಬಿಡುತ್ತದೆ.

ಇದನ್ನೂ ಓದಿ : Viral Video: ಎಚ್​ಡಿಎಫ್​ಸಿ ಆನ್​ಲೈನ್​ ಮೀಟಿಂಗ್​ನಲ್ಲಿ ಉದ್ಯೋಗಿ ನಿಂದನೆ; ಅಧಿಕಾರಿ ಅಮಾನತು

ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಈಕೆಯ ನೈಪುಣ್ಯತೆಯನ್ನು ಶ್ಲಾಘಿಸುತ್ತಿದ್ದಾರೆ. ನೋಡಲು ಸಾಮಾನ್ಯ ಗೃಹಿಣಿಯಂತೆ ಕಾಣುವ ಈಕೆಯೊಳಗೆ ಇಂಥ ಅದ್ಭುತ ಕಲಾವಿದೆ ಅಡಗಿದ್ದಾಳೆ ಎನ್ನುವುದು ತಿಳಿಯುವುದೇ ಇಲ್ಲ ಎಂದು ಅಚ್ಚರಿಗೆ ಒಳಗಾಗಿದ್ದಾರೆ. ಇವರ ಕಲಾಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ

ಆದರೆ ಈಕೆ ಪಶ್ಚಿಮ ಬಂಗಾಳದ ಕಲಾ ಶಿಕ್ಷಕಿ. ತ್ರೀಡಿ ಆರ್ಟ್ (3D)​ ಅನ್ನು ಕರಗತ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್​ಲೋಡ್ ಮಾಡಿ ಈಗಾಗಲೇ ಜನರ ಮನಸೂರೆಗೊಂಡಿರುವಾಕೆ. ಯೋಚನಾಶಕ್ತಿ ಮತ್ತು ಆಸಕ್ತಿ ಇದ್ದರೆ ಇದ್ದ ಅವಕಾಶದಲ್ಲಿಯೇ ಹೇಗೆ ಕಾಲು ಚಾಚಬೇಕು ಎನ್ನುವುದನ್ನು ಕರಗತ ಮಾಡಿಕೊಂಡಿರುವ ದಿಟ್ಟೆ ಇವರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ