Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಶ್ಚಿಮ ಬಂಗಾಳದ ಕಲಾಶಿಕ್ಷಕಿಯ ಕೈಚಳವನ್ನೊಮ್ಮೆ ನೋಡಿ

3D Art : ಹೆಣ್ಣುಮಕ್ಕಳಿಗೆ ಹೊರಿಸಿದ ಅಕಾರಣ ಭಾರಗಳನ್ನು ಇಳಿಸಿದರೆ ಅವರು ಲೀಲಾಜಾಲವಾಗಿ ತಮ್ಮಿಷ್ಟದ  ಕಲೆ, ಕೌಶಲಗಳಲ್ಲಿ ಹೇಗೆ ಹರಿಯುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.

Viral Video: ಪಶ್ಚಿಮ ಬಂಗಾಳದ ಕಲಾಶಿಕ್ಷಕಿಯ ಕೈಚಳವನ್ನೊಮ್ಮೆ ನೋಡಿ
ಪಶ್ಚಿಮ ಬಂಗಾಳದ ಕಲಾ ಶಿಕ್ಷಕಿಯ 3D ಆರ್ಟ್​ ಮ್ಯಾಜಿಕ್​!
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 06, 2023 | 1:47 PM

Street Art: ಬೀದಿ ಕಲೆ, ತ್ರೀಡಿ ಕಲೆ ಎಂದಾಗ ನಮಗೆ ಥಟ್ಟನೆ ನೆನಪಾಗುವುದು ಮೈಸೂರಿನ ಪ್ರತಿಭಾವಂತ ಕಲಾವಿದ ಬಾದಲ್​ ನಂಜುಂಡಸ್ವಾಮಿ.  ಮೈಸೂರು ಬೆಂಗಳೂರಿನ ಹಾಳಾದ ರಸ್ತೆಗಳಿಗೆ, ತೆರೆದ ರಸ್ತೆಗುಂಡಿಗಳಿಗೆ ಕಲಾತ್ಮಕ ಸ್ಪರ್ಶ ಕೊಟ್ಟು ಅಧಿಕಾರಿಗಳ ಗಮನ ಸೆಳೆದ ಆರ್ಟ್​ ಆ್ಯಕ್ಟಿವಿಸ್ಟ್​. ಈ ಕೆಳಗಿನ ವಿಡಿಯೋ ಕೂಡ ಬೀದಿಕಲೆಗೆ ಸಂಬಂಧಿಸಿದ್ದು. ಆದರೆ ವಿಡಿಯೋದ ಆರಂಭದಲ್ಲಿ ಈ ಹೆಣ್ಣುಮಗಳು ನಡೆದು ಬರುವ ರೀತಿ ಖಂಡಿತ ನಿಮಗೆ ಮುಂದಿನ ಸುಳಿವನ್ನು ಬಿಟ್ಟುಕೊಡಲಾರದು!

ಹೆಣ್ಣುಮಕ್ಕಳಿಗೆ ಹೊರಿಸಿದ ಅಕಾರಣ ಭಾರಗಳನ್ನು ಇಳಿಸಿದರೆ ಅವರು ಲೀಲಾಜಾಲವಾಗಿ ತಮ್ಮಿಷ್ಟದ  ಕಲೆ, ಕೌಶಲಗಳಲ್ಲಿ ಹೇಗೆ ಹರಿಯುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ತಲೆಯ ಮೇಲೆ ಸೆರಗು ಹೊದ್ದು ಬರುವ ಈಕೆ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಬಂದು ಗೆರೆಗಳನ್ನು ಬರೆಯಲಾರಂಭಿಸುತ್ತಾರೆ. ರಂಗೋಲಿ ಹಾಕುತ್ತಾರೆಯೇ ಎಂದು ಮೊದಲಿಗೆ ಅನ್ನಿಸಿದರೂ ಅದೂ ಅಲ್ಲ. ನೋಡನೋಡುತ್ತಿದ್ದಂತೆ ರಸ್ತೆಯನ್ನು ಸೀಳಿ ಹೆಬ್ಬಾವಿನಂತೆ ಕಾಣುವ ಕಲ್ಲುಗೋಡೆ ಧುತ್ತೆಂದು ನಿಂತುಬಿಡುತ್ತದೆ.

ಇದನ್ನೂ ಓದಿ : Viral Video: ಎಚ್​ಡಿಎಫ್​ಸಿ ಆನ್​ಲೈನ್​ ಮೀಟಿಂಗ್​ನಲ್ಲಿ ಉದ್ಯೋಗಿ ನಿಂದನೆ; ಅಧಿಕಾರಿ ಅಮಾನತು

ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಈಕೆಯ ನೈಪುಣ್ಯತೆಯನ್ನು ಶ್ಲಾಘಿಸುತ್ತಿದ್ದಾರೆ. ನೋಡಲು ಸಾಮಾನ್ಯ ಗೃಹಿಣಿಯಂತೆ ಕಾಣುವ ಈಕೆಯೊಳಗೆ ಇಂಥ ಅದ್ಭುತ ಕಲಾವಿದೆ ಅಡಗಿದ್ದಾಳೆ ಎನ್ನುವುದು ತಿಳಿಯುವುದೇ ಇಲ್ಲ ಎಂದು ಅಚ್ಚರಿಗೆ ಒಳಗಾಗಿದ್ದಾರೆ. ಇವರ ಕಲಾಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ

ಆದರೆ ಈಕೆ ಪಶ್ಚಿಮ ಬಂಗಾಳದ ಕಲಾ ಶಿಕ್ಷಕಿ. ತ್ರೀಡಿ ಆರ್ಟ್ (3D)​ ಅನ್ನು ಕರಗತ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್​ಲೋಡ್ ಮಾಡಿ ಈಗಾಗಲೇ ಜನರ ಮನಸೂರೆಗೊಂಡಿರುವಾಕೆ. ಯೋಚನಾಶಕ್ತಿ ಮತ್ತು ಆಸಕ್ತಿ ಇದ್ದರೆ ಇದ್ದ ಅವಕಾಶದಲ್ಲಿಯೇ ಹೇಗೆ ಕಾಲು ಚಾಚಬೇಕು ಎನ್ನುವುದನ್ನು ಕರಗತ ಮಾಡಿಕೊಂಡಿರುವ ದಿಟ್ಟೆ ಇವರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ