Viral Video: ಪಶ್ಚಿಮ ಬಂಗಾಳದ ಕಲಾಶಿಕ್ಷಕಿಯ ಕೈಚಳವನ್ನೊಮ್ಮೆ ನೋಡಿ

3D Art : ಹೆಣ್ಣುಮಕ್ಕಳಿಗೆ ಹೊರಿಸಿದ ಅಕಾರಣ ಭಾರಗಳನ್ನು ಇಳಿಸಿದರೆ ಅವರು ಲೀಲಾಜಾಲವಾಗಿ ತಮ್ಮಿಷ್ಟದ  ಕಲೆ, ಕೌಶಲಗಳಲ್ಲಿ ಹೇಗೆ ಹರಿಯುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.

Viral Video: ಪಶ್ಚಿಮ ಬಂಗಾಳದ ಕಲಾಶಿಕ್ಷಕಿಯ ಕೈಚಳವನ್ನೊಮ್ಮೆ ನೋಡಿ
ಪಶ್ಚಿಮ ಬಂಗಾಳದ ಕಲಾ ಶಿಕ್ಷಕಿಯ 3D ಆರ್ಟ್​ ಮ್ಯಾಜಿಕ್​!
Follow us
| Updated By: ಶ್ರೀದೇವಿ ಕಳಸದ

Updated on: Jun 06, 2023 | 1:47 PM

Street Art: ಬೀದಿ ಕಲೆ, ತ್ರೀಡಿ ಕಲೆ ಎಂದಾಗ ನಮಗೆ ಥಟ್ಟನೆ ನೆನಪಾಗುವುದು ಮೈಸೂರಿನ ಪ್ರತಿಭಾವಂತ ಕಲಾವಿದ ಬಾದಲ್​ ನಂಜುಂಡಸ್ವಾಮಿ.  ಮೈಸೂರು ಬೆಂಗಳೂರಿನ ಹಾಳಾದ ರಸ್ತೆಗಳಿಗೆ, ತೆರೆದ ರಸ್ತೆಗುಂಡಿಗಳಿಗೆ ಕಲಾತ್ಮಕ ಸ್ಪರ್ಶ ಕೊಟ್ಟು ಅಧಿಕಾರಿಗಳ ಗಮನ ಸೆಳೆದ ಆರ್ಟ್​ ಆ್ಯಕ್ಟಿವಿಸ್ಟ್​. ಈ ಕೆಳಗಿನ ವಿಡಿಯೋ ಕೂಡ ಬೀದಿಕಲೆಗೆ ಸಂಬಂಧಿಸಿದ್ದು. ಆದರೆ ವಿಡಿಯೋದ ಆರಂಭದಲ್ಲಿ ಈ ಹೆಣ್ಣುಮಗಳು ನಡೆದು ಬರುವ ರೀತಿ ಖಂಡಿತ ನಿಮಗೆ ಮುಂದಿನ ಸುಳಿವನ್ನು ಬಿಟ್ಟುಕೊಡಲಾರದು!

ಹೆಣ್ಣುಮಕ್ಕಳಿಗೆ ಹೊರಿಸಿದ ಅಕಾರಣ ಭಾರಗಳನ್ನು ಇಳಿಸಿದರೆ ಅವರು ಲೀಲಾಜಾಲವಾಗಿ ತಮ್ಮಿಷ್ಟದ  ಕಲೆ, ಕೌಶಲಗಳಲ್ಲಿ ಹೇಗೆ ಹರಿಯುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ತಲೆಯ ಮೇಲೆ ಸೆರಗು ಹೊದ್ದು ಬರುವ ಈಕೆ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಬಂದು ಗೆರೆಗಳನ್ನು ಬರೆಯಲಾರಂಭಿಸುತ್ತಾರೆ. ರಂಗೋಲಿ ಹಾಕುತ್ತಾರೆಯೇ ಎಂದು ಮೊದಲಿಗೆ ಅನ್ನಿಸಿದರೂ ಅದೂ ಅಲ್ಲ. ನೋಡನೋಡುತ್ತಿದ್ದಂತೆ ರಸ್ತೆಯನ್ನು ಸೀಳಿ ಹೆಬ್ಬಾವಿನಂತೆ ಕಾಣುವ ಕಲ್ಲುಗೋಡೆ ಧುತ್ತೆಂದು ನಿಂತುಬಿಡುತ್ತದೆ.

ಇದನ್ನೂ ಓದಿ : Viral Video: ಎಚ್​ಡಿಎಫ್​ಸಿ ಆನ್​ಲೈನ್​ ಮೀಟಿಂಗ್​ನಲ್ಲಿ ಉದ್ಯೋಗಿ ನಿಂದನೆ; ಅಧಿಕಾರಿ ಅಮಾನತು

ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಈಕೆಯ ನೈಪುಣ್ಯತೆಯನ್ನು ಶ್ಲಾಘಿಸುತ್ತಿದ್ದಾರೆ. ನೋಡಲು ಸಾಮಾನ್ಯ ಗೃಹಿಣಿಯಂತೆ ಕಾಣುವ ಈಕೆಯೊಳಗೆ ಇಂಥ ಅದ್ಭುತ ಕಲಾವಿದೆ ಅಡಗಿದ್ದಾಳೆ ಎನ್ನುವುದು ತಿಳಿಯುವುದೇ ಇಲ್ಲ ಎಂದು ಅಚ್ಚರಿಗೆ ಒಳಗಾಗಿದ್ದಾರೆ. ಇವರ ಕಲಾಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ

ಆದರೆ ಈಕೆ ಪಶ್ಚಿಮ ಬಂಗಾಳದ ಕಲಾ ಶಿಕ್ಷಕಿ. ತ್ರೀಡಿ ಆರ್ಟ್ (3D)​ ಅನ್ನು ಕರಗತ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್​ಲೋಡ್ ಮಾಡಿ ಈಗಾಗಲೇ ಜನರ ಮನಸೂರೆಗೊಂಡಿರುವಾಕೆ. ಯೋಚನಾಶಕ್ತಿ ಮತ್ತು ಆಸಕ್ತಿ ಇದ್ದರೆ ಇದ್ದ ಅವಕಾಶದಲ್ಲಿಯೇ ಹೇಗೆ ಕಾಲು ಚಾಚಬೇಕು ಎನ್ನುವುದನ್ನು ಕರಗತ ಮಾಡಿಕೊಂಡಿರುವ ದಿಟ್ಟೆ ಇವರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ