AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓರಿಯನ್ ಮಾಲ್​ನಲ್ಲಿರುವ ಈ ಆನೆ ನಿಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾಯುತ್ತಿದೆ

Baadal Nanjundaswamy : ಗ್ರಾಹಕರಲ್ಲಿ ಶಕ್ತಿ, ಆರೋಗ್ಯ, ಸಂತೋಷ ಮತ್ತು ಅದೃಷ್ಟವನ್ನು ಸಾಂಕೇತಿಸುವ ನಿಟ್ಟಿನಲ್ಲಿ ಈ ಕಲಾಕೃತಿ ಚಿತ್ರಿತಗೊಂಡಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಬಾದಲ್​ ನಂಜುಂಡಸ್ವಾಮಿ ಅವರು ಈ ತ್ರಿಡಿ ಆನೆಯನ್ನು ಚಿತ್ರಿಸಿದ್ದಾರೆ.

ಓರಿಯನ್ ಮಾಲ್​ನಲ್ಲಿರುವ ಈ ಆನೆ ನಿಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾಯುತ್ತಿದೆ
ಕಲಾವಿದ ಬಾದಲ್ ನಂಜುಂಡಸ್ವಾಮಿ ತಮ್ಮ ಕಲಾಕೃತಿಗಳೊಂದಿಗೆ
TV9 Web
| Edited By: |

Updated on:Nov 29, 2022 | 2:31 PM

Share

Viral Video : ಮೈಸೂರಿನ ಯುವಕಲಾವಿದ ಬಾದಲ್​ ನಂಜುಂಡಸ್ವಾಮಿ ಬಣ್ಣಕುಂಚಗಳ ವ್ಯಾಮೋಹವಿರುವ ಪ್ರತಿಯೊಬ್ಬರಿಗೂ ಪರಿಚಿತರು. ಅದರಲ್ಲೂ ಬಿಬಿಎಂಪಿ ಅಧಿಕಾರಿಗಳಿಗಂತೂ ಕೇಳುವುದೇ ಬೇಡ! ಸುಮಾರು ಹತ್ತು ವರ್ಷಗಳಿಂದ ಸ್ಟ್ರೀಟ್​ ಆರ್ಟ್​ ಮೂಲಕ ವ್ಯವಸ್ಥೆಯ ಓರೆಕೋರೆಗಳನ್ನು ಗುರುತಿಸುತ್ತ ಬಂದಿರುವ ಇವರು ನಮ್ಮ ನಡುವಿನ ಅಪರೂಪದ, ಪ್ರತಿಭಾನ್ವಿತ ಕಲಾವಿದರು. ಬೆಂಗಳೂರು ಮತ್ತು ಮೈಸೂರಿನ ಹದಗೆಟ್ಟ ರಸ್ತೆಗಳನ್ನು, ರಸ್ತೆಗುಂಡಿಗಳನ್ನು ಕೇಂದ್ರೀಕರಿಸಿಕೊಂಡು ಕಲೆಯ ಮೂಲಕ ವ್ಯವಸ್ಥೆಯ ಚುಕ್ಕಾಣಿ ಹಿಡಿದವರ ಗಮನ ಸೆಳೆದ ಇವರ ಸೃಜನಶೀಲತೆ ಅಗಾಧ. ಬಾದಲ್​ ಒಂದು ಹಂತದಲ್ಲಿ ಎಷ್ಟು ಜನಪ್ರಿಯರಾದರೆಂದರೆ, ಯಾರೇ ಎಲ್ಲೇ ರಸ್ತೆಗುಂಡಿಗಳನ್ನು ನೋಡಿದರೂ ಮೊದಲು ಬಾದಲ್​ ಅವರಿಗೆ ತಿಳಿಸಬೇಕು ಎನ್ನುವಷ್ಟು! ಹಾಗಿದ್ದರೆ ಬಾದಲ್​ ಈಗ ಹೇಗೆ ಸುದ್ದಿಯಲ್ಲಿದ್ದಾರೆ? ಈ ವಿಡಿಯೋ ನೋಡಿ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Orion Malls (@orionmalls)

ಇತ್ತೀಚೆಗೆ ಬೆಂಗಳೂರಿನ ಓರಿಯನ್​ ಮಾಲ್​ನಲ್ಲಿ ಬಾದಲ್​ ಸೃಷ್ಟಿಸಿದ ತ್ರೀಡಿ ಆನೆ ಬೆಂಗಳೂರಿಗರನ್ನು ಬಹುವಾಗಿ ಸೆಳೆಯುತ್ತಿದೆ. ಗೋಡೆಯೊಡೆದುಕೊಂಡು ಇನ್ನೇನು ಆನೆ ಬಂದೇ ಬಿಡುವುದೇ ಎಂಬಂಥ ನೈಜ ಮತ್ತು ಮಾಂತ್ರಿಕತೆಯನ್ನು ಬಾದಲ್ ಇಲ್ಲಿ​ ಕಟ್ಟಿಕೊಟ್ಟಿದ್ದಾರೆ.

ಬೆಂಗಳೂರಿನ ಓರಿಯನ್ ಮಾಲ್​ನಲ್ಲಿರುವ ಈ ಆನೆಯ ಕಲಾಕೃತಿಯ ಬಳಿ ಯಾರೂ ಹೋಗಿ ಫೋಟೋ ತೆಗೆಸಿಕೊಳ್ಳಬಹುದು. ‘ಈ ಸ್ಥಳದಲ್ಲಿ ಫೋಟೋ ತೆಗೆಸಿಕೊಳ್ಳುವಾಗ ಕಡಿಮೆ ಬೆಳಕಿದ್ದರೆ ಒಳ್ಳೆಯದು’ ಎಂದು ಸಲಹೆಯನ್ನೂ ನೀಡಿದ್ದಾರೆ ಬಾದಲ್​.

ರಂಗಕಲಾವಿದರು, ಕಥೆಗಾರರು, ಕಲಾನಿರ್ದೇಶಕರು ಆಗಿರುವ ಬಾದಲ್​ ಈಗಾಗಲೇ ತಮ್ಮ ಚಿತ್ರಕಲೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವಂಥವರು. ಇವರ ಅದ್ಭುತ ಕಲೆಗಾರಿಕೆಗೆ ಮತ್ತಷ್ಟು ಅಂತಾರಾಷ್ಟ್ರೀಯ ಮನ್ನಣೆ ಸಿಗಬೇಕೆಂದು ನೆಟ್ಟಿಗರು ಹಾರೈಸಿದ್ದಾರೆ. ಇವರ ಸೃಜನಶೀಲತೆಗೆ ಇವರೇ ಸಾಟಿ ಎಂದು ಶ್ಲಾಘಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬಾದಲ್​ ಅವರ ಆರ್ಟ್​ಮ್ಯಾಜಿಕ್​ ಎತ್ತ ಸಾಗಬಹುದು ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಓರಿಯನ್​ ಮಾಲ್​ಗೆ ಭೇಟಿ ಕೊಟ್ಟಾಗ ಮರೆಯದಿರಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:13 pm, Tue, 29 November 22

Follow Us
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ
Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ
Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ
ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ
ಇರಾನ್​​ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ
ಇರಾನ್​​ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ
ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ
ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ