AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಬಂಗಾಳದ ರೈಲ್ವೆ ಕೋಚ್​ಗಳಲ್ಲಿ ಅರಳಿದ ಭಿತ್ತಿಚಿತ್ರ; ಅಸಂತುಷ್ಟಗೊಂಡ ನೆಟ್ಟಿಗರು

Indian Railways : ಹೀಗೆ ಕೋಚ್​ಗಳನ್ನು ಬಣ್ಣಬೆಳಕಿನಿಂದ ಅಲಂಕರಿಸಿ ಗಮನ ಸೆಳೆಯುವುದಕ್ಕಿಂತ ಇಲಾಖೆಯ ಸೇವೆಗಳಲ್ಲಿರುವ ಕುಂದು ಕೊರತೆಗಳನ್ನು ಸರಿಪಡಿಸಿ ಎಂದು ಪುರಾವೆ ಸಮೇತ ರೀಟ್ವೀಟ್ ಮಾಡಿದ್ದಾರೆ ನೆಟ್ಟಿಗರು.

ಪಶ್ಚಿಮ ಬಂಗಾಳದ ರೈಲ್ವೆ ಕೋಚ್​ಗಳಲ್ಲಿ ಅರಳಿದ ಭಿತ್ತಿಚಿತ್ರ; ಅಸಂತುಷ್ಟಗೊಂಡ ನೆಟ್ಟಿಗರು
ಭಿತ್ತಿಚಿತ್ರಗಳಿಂದ ಅಲಂಕೃತಗೊಂಡ ಪಶ್ಚಿಮ ಬಂಗಾಳದ ರೈಲು
TV9 Web
| Updated By: ಶ್ರೀದೇವಿ ಕಳಸದ|

Updated on:Dec 29, 2022 | 10:53 AM

Share

Viral Video : ಪ್ರಯಾಣಿಕರ ಯಾನ ಪ್ರಶಾಂತವಾಗಿ ಸಾಗಲಿ, ಕಲಾತ್ಮಕ ಪರಿಸರದಿಂದ ಸ್ಫೂರ್ತಿಗೊಳ್ಳಲಿ ಎಂಬ ಉದ್ದೇಶದಿಂದ ಕೇಂದ್ರ ರೈಲ್ವೆ ಇಲಾಖೆಯು ಪಶ್ಚಿಮ ಬಂಗಾಳದ ಲೋಕಲ್​ ರೈಲಿನ ಕೋಚ್​ಗಳನ್ನು ಹೀಗೆ ಭಿತ್ತಿಚಿತ್ರಗಳ ಮೂಲಕ ಅಲಂಕರಿಸಿದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ ನಿಜ. ಆದರೆ ನೆಟ್ಟಿಗರು ಮಾತ್ರ ಮಿಶ್ರ ಅಭಿಪ್ರಾಯಗಳನ್ನು ಹೊಮ್ಮಿಸುತ್ತಿದ್ದಾರೆ. ಯಾಕಿರಬಹುದು? ಓದಿ.

ಸೀಲ್ದಾ- ಬಂಗಾವ್​ಗೆ ಚಲಿಸುವ ರೈಲ್ವೇಯ ಕೋಚ್​ಗಳೊಳಗೆ ಹಳ್ಳಿಯ ಜನಜೀವವನ್ನು ಬಿಂಬಿಸುವ ಭಿತ್ತಿಚಿತ್ರಗಳನ್ನು ರಚಿಸಿ ನವೀಕರಿಸಲಾಗಿದೆ. ಈ ಮೂಲಕ ಸ್ಥಳೀಯ ರೈಲುಗಳನ್ನು ಆಕರ್ಷಕವಾಗಿ ಅಲಂಕರಿಸಿ ಪ್ರಯಾಣಿಕರ ಗಮನ ಸೆಳೆಯುವುದು ಇಲಾಖೆಯ ಉದ್ದೇಶವಾಗಿದೆ. ಬಾಗಿಲು ಮತ್ತು ಕಿಟಕಿಗಳಿಗೆ ಎಲ್​ಇಡಿ ಲೈಟ್​ಗಳನ್ನು ಅಳವಡಿಸಲಾಗಿದ್ದು ರೈಲು ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

ಇದನ್ನೂ ಓದಿ : 9 ಗಂಟೆ ತಡವಾಗಿ ಬಂದ ರೈಲು; ಪ್ರಯಾಣಿಕರು ಸಂಭ್ರಮಿಸಿದ ವಿಡಿಯೋ ವೈರಲ್

ಈ ವಿಡಿಯೋ ಅನ್ನು ಈತನಕ ಸುಮಾರು 75,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. 1,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ರೈಲ್ವೆ ಇಲಾಖೆಯು ಹೀಗೆ ಬಣ್ಣ, ಲೈಟಿನಿಂದ ಅಲಂಕರಿಸುವುದಕ್ಕಿಂತ ನಿತ್ಯಪ್ರಯಾಣಿಕರು ಸರಿಯಾದ ಸಮಯಕ್ಕೆ ತಲುಪುವಂತೆ ಕಾರ್ಯ ನಿರ್ವಹಿಸಬೇಕು. ಇಲಾಖೆಯ ಇತರೇ ಸೇವೆಗಳು ಸೂಕ್ತ ರೀತಿಯಲ್ಲಿ ಅರ್ಹರಿಗೆ ತಲುಪಬೇಕು. ಈ ವಿಷಯವಾಗಿ ಇಲಾಖೆಯು ಗಮನ ಕೊಡುವುದು ಅತ್ಯವಶ್ಯವಾಗಿದೆ ಎಂದಿದ್ದಾರೆ ಅನೇಕರು.

ಆಹಾರ ಪೂರೈಕೆ, ವಿಳಂಬ ಪ್ರಯಾಣ, ಸ್ವಚ್ಛತೆ ಇತ್ಯಾದಿ ವಿಷಯವಾಗಿ ಇಲಾಖೆಯ ಸೇವೆಯಲ್ಲಿ ಕಂಡುಬಂದಿರುವ ಕುಂದುಕೊರತೆಗಳನ್ನು ದಾಖಲೆ ಸಮೇತ ರೀಟ್ವೀಟ್ ಮಾಡಿ ಇಲಾಖೆಯ ಗಮನ ಸೆಳೆದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:50 am, Thu, 29 December 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ