AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನ್​ ಶೆಫರ್ಡ್ ಮೊದಲ ಸಲ ಬೆಕ್ಕಿನ ಹಸುಗೂಸುಗಳನ್ನು ನೋಡಲು ಬಂದಾಗ

Kittens : ‘ಅಭಿನಂದನೆ ಬೆಕ್ಕಮ್ಮ, ಎಂಥ ಮುದ್ದಾದ ಮರಿಗಳನ್ನು ಹೆತ್ತಿದ್ದೀಯಾ. ನೀನು ಹುಷಾರಾಗಿದ್ದೀ ತಾನೆ?’ ಬೆಕ್ಕಮ್ಮ ತುಸು ಆತಂಕದಲ್ಲಿಯೇ ಹೂಂ ಎನ್ನುತ್ತಾಳೆ. ಆಕೆಯನ್ನು, ಮರಿಗಳನ್ನು ನೆಕ್ಕಿ ವಿಶ್ವಾಸ ತೋರ್ಪಡಿಸುತ್ತದೆ ಜರ್ಮನ್​ ಶೆಫರ್ಡ್​ ನಾಯಿ.

ಜರ್ಮನ್​ ಶೆಫರ್ಡ್ ಮೊದಲ ಸಲ ಬೆಕ್ಕಿನ ಹಸುಗೂಸುಗಳನ್ನು ನೋಡಲು ಬಂದಾಗ
ಮೊದಲ ಸಲ ಜರ್ಮನ್ ಶೆಫರ್ಡ್​ ಬೆಕ್ಕಿನಮರಿಗಳನ್ನು ನೋಡಿದಾಗ
TV9 Web
| Edited By: |

Updated on:Nov 29, 2022 | 10:12 AM

Share

Viral Video : ಬೆಕ್ಕುನಾಯಿಪ್ರಿಯರು ನೀವಾಗಿದ್ದರೆ ದಿನಕ್ಕೆ ಒಮ್ಮೆಯಾದರೂ ಅವುಗಳ ವಿಡಿಯೋ ನೋಡಿಯೇ ಮಲಗುತ್ತೀರಿ. ಬಹುಶಃ ಈಗ ವೈರಲ್ ಆಗಿರುವ ಇಷ್ಟು ಮುದ್ದಾದ ವಿಡಿಯೋ ಈತನಕ ನೋಡಿಲ್ಲವೇನೋ. ಬೆಕ್ಕು ಮರಿಗಳನ್ನು ಹಾಕಿದೆ. ಜರ್ಮನ್​ ಶೆಫರ್ಡ್​ ಅವುಗಳನ್ನು ನೋಡಲು ಬಂದಿದೆ. ಆ ಚೆಂದದ ಕ್ಷಣಗಳನ್ನು ನೋಡಿಯೇ ಅನುಭವಿಸಬೇಕು. ಈತನಕ 15,000 ಜನರು ಈ ವಿಡಿಯೋ ನೋಡಿ ಈ ಸ್ವರ್ಗದಲ್ಲಿ ಕಳೆದುಹೋಗಿದ್ದಾರೆ.

ಡ್ಯಾನಿ ಡೆರಾನಿ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಬಾಣಂತಿ ಬೆಕ್ಕಮ್ಮ ತನ್ನ ಮರಿಗಳೊಂದಿಗೆ ಹಾಸಿಗೆಯ ಮೇಲೆ ಮಲಗಿದ್ದಾಳೆ. ಜರ್ಮನ್ ಶೆಫರ್ಡ್​ ಸ್ವಲ್ಪ ಹಿಂಜರಿಕೆಯಿಂದಲೇ ಮಂಚದ ಬಳಿ ಬಂದು ನಿಲ್ಲುತ್ತದೆ. ಅದರ ಪೋಷಕಿ ಅದನ್ನು ಹಾಸಿಗೆಯ ಮೇಲೆ ಏರಿ ಕುಳಿತುಕೊಳ್ಳಲು ಸಹಾಯ ಮಾಡುತ್ತಾಳೆ. ಇಂಚಿಂಚೇ ಸರಿದು ಮರಿಗಳ ಹತ್ತಿರ ಬರುತ್ತದೆ. ಬೆಕ್ಕಮ್ಮನನ್ನು ಮುದ್ದು ಮಾಡುತ್ತದೆ. ಆದರೆ ಬೆಕ್ಕಮ್ಮನಿಗೆ ತನ್ನ ಮರಿಗಳ ಚಿಂತೆ. ಮಿಯಾಂವ್​ ಎಂದು ತನ್ನ ಆತಂಕವನ್ನು ತೋರ್ಪಡಿಸುತ್ತದೆ. ನಾ ಅಂಥವನಲ್ಲ ಎಂದು ಜರ್ಮನ್​ ಶೆಫರ್ಡ್​ ಬೆಕ್ಕಮ್ಮಳನ್ನು ನೆಕ್ಕುತ್ತ ವಿಶ್ವಾಸ ಗಳಿಸಿಕೊಳ್ಳುತ್ತದೆ.

ನೂರಾರು ಜನರು ಈ ಹೃದಯಸ್ಪರ್ಶಿಯಾದ ವಿಡಿಯೋ ನೋಡಿ ಭಾವುಕರಾಗಿದ್ದಾರೆ. ಸಾಮಾನ್ಯವಾಗಿ ಬೆಕ್ಕು ನಾಯಿ ಎರಡೂ ಶತ್ರುಗಳೇ. ಬೀದಿನಾಯಿಗಳಾದರೆ ಬೆಕ್ಕಿನ ಮರಿಗಳನ್ನು ಒಂದೇ ಏಟಿಗೆ ಕೊಂದುಬಿಡುತ್ತವೆ. ಆದರೆ ಸಾಕಿದ ನಾಯಿಗಳು ಹೀಗೆ ಮಾಡಲು ಸಾಧ್ಯವಿಲ್ಲ. ಅವುಗಳಿಗೆ ತಿಳಿಹೇಳಿದರೆ ಖಂಡಿತ ತನ್ನ ಸ್ವಂತಮರಿಗಳೇ ಎಂಬಂತೆ ನೋಡಿಕೊಳ್ಳುತ್ತವೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:11 am, Tue, 29 November 22

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್