AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನ್​ ಶೆಫರ್ಡ್ ಮೊದಲ ಸಲ ಬೆಕ್ಕಿನ ಹಸುಗೂಸುಗಳನ್ನು ನೋಡಲು ಬಂದಾಗ

Kittens : ‘ಅಭಿನಂದನೆ ಬೆಕ್ಕಮ್ಮ, ಎಂಥ ಮುದ್ದಾದ ಮರಿಗಳನ್ನು ಹೆತ್ತಿದ್ದೀಯಾ. ನೀನು ಹುಷಾರಾಗಿದ್ದೀ ತಾನೆ?’ ಬೆಕ್ಕಮ್ಮ ತುಸು ಆತಂಕದಲ್ಲಿಯೇ ಹೂಂ ಎನ್ನುತ್ತಾಳೆ. ಆಕೆಯನ್ನು, ಮರಿಗಳನ್ನು ನೆಕ್ಕಿ ವಿಶ್ವಾಸ ತೋರ್ಪಡಿಸುತ್ತದೆ ಜರ್ಮನ್​ ಶೆಫರ್ಡ್​ ನಾಯಿ.

ಜರ್ಮನ್​ ಶೆಫರ್ಡ್ ಮೊದಲ ಸಲ ಬೆಕ್ಕಿನ ಹಸುಗೂಸುಗಳನ್ನು ನೋಡಲು ಬಂದಾಗ
ಮೊದಲ ಸಲ ಜರ್ಮನ್ ಶೆಫರ್ಡ್​ ಬೆಕ್ಕಿನಮರಿಗಳನ್ನು ನೋಡಿದಾಗ
TV9 Web
| Edited By: ಶ್ರೀದೇವಿ ಕಳಸದ|

Updated on:Nov 29, 2022 | 10:12 AM

Share

Viral Video : ಬೆಕ್ಕುನಾಯಿಪ್ರಿಯರು ನೀವಾಗಿದ್ದರೆ ದಿನಕ್ಕೆ ಒಮ್ಮೆಯಾದರೂ ಅವುಗಳ ವಿಡಿಯೋ ನೋಡಿಯೇ ಮಲಗುತ್ತೀರಿ. ಬಹುಶಃ ಈಗ ವೈರಲ್ ಆಗಿರುವ ಇಷ್ಟು ಮುದ್ದಾದ ವಿಡಿಯೋ ಈತನಕ ನೋಡಿಲ್ಲವೇನೋ. ಬೆಕ್ಕು ಮರಿಗಳನ್ನು ಹಾಕಿದೆ. ಜರ್ಮನ್​ ಶೆಫರ್ಡ್​ ಅವುಗಳನ್ನು ನೋಡಲು ಬಂದಿದೆ. ಆ ಚೆಂದದ ಕ್ಷಣಗಳನ್ನು ನೋಡಿಯೇ ಅನುಭವಿಸಬೇಕು. ಈತನಕ 15,000 ಜನರು ಈ ವಿಡಿಯೋ ನೋಡಿ ಈ ಸ್ವರ್ಗದಲ್ಲಿ ಕಳೆದುಹೋಗಿದ್ದಾರೆ.

ಡ್ಯಾನಿ ಡೆರಾನಿ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಬಾಣಂತಿ ಬೆಕ್ಕಮ್ಮ ತನ್ನ ಮರಿಗಳೊಂದಿಗೆ ಹಾಸಿಗೆಯ ಮೇಲೆ ಮಲಗಿದ್ದಾಳೆ. ಜರ್ಮನ್ ಶೆಫರ್ಡ್​ ಸ್ವಲ್ಪ ಹಿಂಜರಿಕೆಯಿಂದಲೇ ಮಂಚದ ಬಳಿ ಬಂದು ನಿಲ್ಲುತ್ತದೆ. ಅದರ ಪೋಷಕಿ ಅದನ್ನು ಹಾಸಿಗೆಯ ಮೇಲೆ ಏರಿ ಕುಳಿತುಕೊಳ್ಳಲು ಸಹಾಯ ಮಾಡುತ್ತಾಳೆ. ಇಂಚಿಂಚೇ ಸರಿದು ಮರಿಗಳ ಹತ್ತಿರ ಬರುತ್ತದೆ. ಬೆಕ್ಕಮ್ಮನನ್ನು ಮುದ್ದು ಮಾಡುತ್ತದೆ. ಆದರೆ ಬೆಕ್ಕಮ್ಮನಿಗೆ ತನ್ನ ಮರಿಗಳ ಚಿಂತೆ. ಮಿಯಾಂವ್​ ಎಂದು ತನ್ನ ಆತಂಕವನ್ನು ತೋರ್ಪಡಿಸುತ್ತದೆ. ನಾ ಅಂಥವನಲ್ಲ ಎಂದು ಜರ್ಮನ್​ ಶೆಫರ್ಡ್​ ಬೆಕ್ಕಮ್ಮಳನ್ನು ನೆಕ್ಕುತ್ತ ವಿಶ್ವಾಸ ಗಳಿಸಿಕೊಳ್ಳುತ್ತದೆ.

ನೂರಾರು ಜನರು ಈ ಹೃದಯಸ್ಪರ್ಶಿಯಾದ ವಿಡಿಯೋ ನೋಡಿ ಭಾವುಕರಾಗಿದ್ದಾರೆ. ಸಾಮಾನ್ಯವಾಗಿ ಬೆಕ್ಕು ನಾಯಿ ಎರಡೂ ಶತ್ರುಗಳೇ. ಬೀದಿನಾಯಿಗಳಾದರೆ ಬೆಕ್ಕಿನ ಮರಿಗಳನ್ನು ಒಂದೇ ಏಟಿಗೆ ಕೊಂದುಬಿಡುತ್ತವೆ. ಆದರೆ ಸಾಕಿದ ನಾಯಿಗಳು ಹೀಗೆ ಮಾಡಲು ಸಾಧ್ಯವಿಲ್ಲ. ಅವುಗಳಿಗೆ ತಿಳಿಹೇಳಿದರೆ ಖಂಡಿತ ತನ್ನ ಸ್ವಂತಮರಿಗಳೇ ಎಂಬಂತೆ ನೋಡಿಕೊಳ್ಳುತ್ತವೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:11 am, Tue, 29 November 22

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​