AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿ ಪ್ರಾಕ್​ ಹಾಡಿರುವ ‘ಮನ ಭಾರ್ಯಾ’ ಹಾಡಿಗೆ ಟ್ವಿಸ್ಟ್ ನೀಡಿರುವ ಪಾಕಿಸ್ತಾನಿ ಗಾಯಕ

B Praak : ಮುದಾಸೀರ್ ಆಶೀ ಖಾನ್, ಬಿ ಪ್ರಾಕ್​ ಅವರ ಹಾಡಿಗೆ ಸ್ವಂತ ಸಾಹಿತ್ಯ ಅಳವಡಿಸಿ ಹಾಡಿದ್ದಾರೆ. ಸಂಗೀತಕ್ಕೆ ಗಡಿಗಳ ಹಂಗಿಲ್ಲ, ಈ ಹಾಡನ್ನು 50 ಸಲ ಕೇಳಿದೆ. ಪೂರ್ತಿ ಹಾಡಿ, ಎಂಥ ಪರಿಶುದ್ಧ ಕಂಠ, ಭಾವ ನಿಮ್ಮದು ಎನ್ನುತ್ತಿದ್ದಾರೆ ನೆಟ್ಟಿಗರು.

ಬಿ ಪ್ರಾಕ್​ ಹಾಡಿರುವ ‘ಮನ ಭಾರ್ಯಾ’ ಹಾಡಿಗೆ ಟ್ವಿಸ್ಟ್ ನೀಡಿರುವ ಪಾಕಿಸ್ತಾನಿ ಗಾಯಕ
ಭಾರತೀಯ ಗಾಯಕ ಬಿ ಪ್ರಾಕ್​ ಮತ್ತು ಪಾಕಿಸ್ತಾನಿ ಗಾಯಕ ಮುದಾಶೀರ್ ಆಶೀ ಖಾನ್
TV9 Web
| Edited By: ಶ್ರೀದೇವಿ ಕಳಸದ|

Updated on: Nov 29, 2022 | 11:48 AM

Share

Viral Video : ಬಿ ಪ್ರಾಕ್ ಎಂದೇ ಹೆಸರಾಗಿರುವ ಭಾರತೀಯ ಗಾಯಕ ಬಚನ್ ಪ್ರತೀಕ್ ಅವರ ಪ್ರಸಿದ್ಧ ಹಾಡು ‘ಮನ ಭಾರ್ಯಾ’. ಇದನ್ನು ಅವರು ಕೆಲ ವರ್ಷಗಳ ಹಿಂದೆ ಹಾಡಿದ್ದರು. ಇದೀಗ ಈ ಹಾಡಿನ ದಾಟಿಗೆ ಸ್ವಂತ ಸಾಹಿತ್ಯ ರಚಿಸಿ ಹಾಡಿದ್ದಾರೆ ಪಾಕಿಸ್ತಾನಿ ಗಾಯಕ ಮುದಾಸೀರ್ ಆಶೀ ಖಾನ್​. ಈ ಹಾಡನ್ನು ಮುದಾಸೀರ್ ಇನ್​ಸ್ಟಾಗ್ರಾಂಗೆ ಅಪ್​ಲೋಡ್ ಮಾಡಿದಾಗಿನಿಂದ ವೈರಲ್ ಆಗುತ್ತಿದೆ. ನೆಟ್ಟಿಗರು ಅದರಲ್ಲೂ ಭಾರತೀಯರು ಈ ಹೃದಯಸ್ಪರ್ಶಿಯಾದ ಹಾಡನ್ನು ಕೇಳುತ್ತ ಮೈಮರೆಯುತ್ತಿದ್ದಾರೆ. ಪೂರ್ತಿ ಹಾಡನ್ನು ಹಾಡಿರೆಂದು ಕೇಳಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Mudasir Aashi Khan (@aashi_records)

ಈ ಹಾಡನ್ನು @bpraak ಹಾಡಿದ್ದಾರೆ. ಇದಕ್ಕೆ ನನ್ನದೇ ಆದ ಸಾಹಿತ್ಯ ರಚಿಸಿ ಹಾಡಿದ್ದೇನೆ ಎಂದು ಮುದಾಸೀರ್​ ಈ ವಿಡಿಯೋಗೆ ಒಕ್ಕಣೆ ಬರೆದಿದ್ದಾರೆ. ಮುದಾಸೀರ್​ ತಮ್ಮದೇ ಆದ ವಿಶಿಷ್ಟ ದನಿಬಾನಿಯಲ್ಲಿ ಇದನ್ನು ಹಾಡಿ ಕೇಳುಗರ ಮನಸೂರೆಗೊಳ್ಳುತ್ತಿದ್ದಾರೆ.

ಅನೇಕ ಭಾರತೀಯರು ಇವರ ಹಾಡಿಗೆ ಫಿದಾ ಆಗುತ್ತಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ ನೆಟ್ಟಿಗರು, ಅಣ್ಣಾ ಇನ್ನೊಮ್ಮೆ ಈ ಪೂರ್ತಿ ಹಾಡನ್ನು ಹಾಡಿ ಯೂಟ್ಯೂಬಿಗೆ ಹಾಕಿ ಎಂದು ನಿವೇದಿಸಿಕೊಳ್ಳುತ್ತಿದ್ದಾರೆ. ನೀವು ಈ ಹಾಡನ್ನು ಅನುಭವಿಸಿ ಹಾಡುತ್ತಿದ್ದೀರಿ, ಎಂಥ ಧ್ವನಿ ನಿಮ್ಮದು ಎಂದಿದ್ದಾರೆ ಇನ್ನೊಬ್ಬರು. ಈ ಹಾಡು ಹಾಡಿದ್ದಕ್ಕೆ ನಿಮ್ಮ ಬಗ್ಗೆ ಪ್ರೀತಿ ಮತ್ತು ಅಭಿಮಾನ ಉಂಟಾಯಿತು ಎಂದಿದ್ದಾರೆ ಮತ್ತೊಬ್ಬರು. ಸಂಗೀತಕ್ಕೆ ಗಡಿಗಳ ಹಂಗಿಲ್ಲ ಎನ್ನುವುದು ಇದಕ್ಕೇ. ಈ ಹಾಡನ್ನು 50 ಸಲ ಕೇಳಿದೆ. ಇದು ನನ್ನ ಹೃದಯವನ್ನು ತಾಕಿತು ಎಂದಿದ್ದಾರೆ ಇನ್ನೂ ಒಬ್ಬರು. ನಿಮ್ಮ ಧ್ವನಿ ಪರಿಶುದ್ಧವಾಗಿದೆ, ಧನ್ಯವಾದ ಇಂಥ ಮಾಂತ್ರಿಕತೆ ಹೆಚ್ಚಲಿ ಎಂದಿದ್ದಾರೆ ಮತ್ತೊಬ್ಬರು.

ಈ ಹಾಡು ಕೇಳಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ