AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಂಡರ್ ರಿವೀಲ್ ಪಾರ್ಟಿಯಲ್ಲಿ ಮಗುವಿನ ತಂದೆಯಾರೆಂಬ ಗೊಂದಲ, ಗರ್ಭಪಾತಕ್ಕೆ ಕಾರಣವಾಯ್ತು

ಜಂಡರ್ ರಿವೀಲ್ ಪಾರ್ಟಿ, ಗರ್ಭಪಾತಕ್ಕೆ ಕಾರಣವಾಗಿರುವ ಘಟನೆ ವೈರಲ್ ಆಗಿದೆ. ಭಾರತದಲ್ಲಿ ಗರ್ಭದಲ್ಲಿರುವ ಶಿಶುವಿನ ಲಿಂಗ ಪರೀಕ್ಷೆ ಕಾನೂನು ಬಾಹಿರ. ಆದರೆ ಬೇರೆ ದೇಶಗಳಲ್ಲಿ ಇದಕ್ಕೆ ಅವಕಾಶವಿದೆ. ಜಂಡರ್ ರಿವೀಲ್ ಪಾರ್ಟಿಯಲ್ಲಿ ಮಗುವಿನ ತಂದೆಯಾರೆಂಬ ಗೊಂದಲ ಸೃಷ್ಟಿಯಾಗಿ, ಬಳಿಕ ಅದು ಗರ್ಭಪಾತಕ್ಕೆ ಎಡೆ ಮಾಡಿಕೊಟ್ಟಿರುವ ಘಟನೆ ನಡೆದಿದೆ. ಡಿಎನ್​ಎ ಪ್ರಯೋಗಾಲಯ ಮಾಡಿದ ತಪ್ಪಿನಿಂದ ಆಕೆಯನ್ನು ಮಗುವನ್ನು ತೆಗೆಸಿದ್ದಾಳೆ. ಬ್ರಾಂಕ್ಸ್ ಮತ್ತು ಓಹಿಯೋ ಮೂಲದ ಡಿಎನ್ಎ ಡಯಾಗ್ನೋಸ್ಟಿಕ್ಸ್ ಸೆಂಟರ್‌ನಲ್ಲಿರುವ ವಿನ್ ಹೆಲ್ತ್ ಲ್ಯಾಬ್ಸ್‌ನ ತಪ್ಪಾದ ಪಿತೃತ್ವ ಪರೀಕ್ಷೆಯ ಫಲಿತಾಂಶ ತಾನು ಗರ್ಭಪಾತ ಮಾಡಿಕೊಳ್ಳಲು ಕಾರಣವಾಯಿತು ಎಂದು ಮಹಿಳೆ ಹೇಳಿದ್ದಾಳೆ. ತನ್ನ ಮಗು ಏಪ್ರಿಲ್ 17ರಂದು ಜನಿಸಬೇಕಿತ್ತು ಎಂದು ಕಣ್ಣೀರು ಹಾಕಿದ್ದಾಳೆ.

ಜಂಡರ್ ರಿವೀಲ್ ಪಾರ್ಟಿಯಲ್ಲಿ ಮಗುವಿನ ತಂದೆಯಾರೆಂಬ ಗೊಂದಲ, ಗರ್ಭಪಾತಕ್ಕೆ ಕಾರಣವಾಯ್ತು
Image Credit source: Letsgokids
Follow us
ನಯನಾ ರಾಜೀವ್
|

Updated on: Apr 13, 2025 | 11:48 AM

ಭಾರತದಲ್ಲಿ ಗರ್ಭದಲ್ಲಿರುವ ಶಿಶುವಿನ ಲಿಂಗ ಪರೀಕ್ಷೆ ಕಾನೂನು ಬಾಹಿರ. ಆದರೆ ಬೇರೆ ದೇಶಗಳಲ್ಲಿ ಇದಕ್ಕೆ ಅವಕಾಶವಿದೆ. ಜಂಡರ್ ರಿವೀಲ್ ಪಾರ್ಟಿಯಲ್ಲಿ ಮಗುವಿನ ತಂದೆಯಾರೆಂಬ ಗೊಂದಲ ಸೃಷ್ಟಿಯಾಗಿ, ಬಳಿಕ ಅದು ಗರ್ಭಪಾತ(Abortion)ಕ್ಕೆ ಎಡೆ ಮಾಡಿಕೊಟ್ಟಿರುವ ಘಟನೆ ನಡೆದಿದೆ. ಡಿಎನ್​ಎ ಪ್ರಯೋಗಾಲಯ ಮಾಡಿದ ತಪ್ಪಿನಿಂದ ಆಕೆಯನ್ನು ಮಗುವನ್ನು ತೆಗೆಸಿದ್ದಾಳೆ. ಬ್ರಾಂಕ್ಸ್ ಮತ್ತು ಓಹಿಯೋ ಮೂಲದ ಡಿಎನ್ಎ ಡಯಾಗ್ನೋಸ್ಟಿಕ್ಸ್ ಸೆಂಟರ್‌ನಲ್ಲಿರುವ ವಿನ್ ಹೆಲ್ತ್ ಲ್ಯಾಬ್ಸ್‌ನ ತಪ್ಪಾದ ಪಿತೃತ್ವ ಪರೀಕ್ಷೆಯ ಫಲಿತಾಂಶ ತಾನು ಗರ್ಭಪಾತ ಮಾಡಿಕೊಳ್ಳಲು ಕಾರಣವಾಯಿತು ಎಂದು ಮಹಿಳೆ ಹೇಳಿದ್ದಾಳೆ. ತನ್ನ ಮಗು ಏಪ್ರಿಲ್ 17ರಂದು ಜನಿಸಬೇಕಿತ್ತು ಎಂದು ಕಣ್ಣೀರು ಹಾಕಿದ್ದಾಳೆ.

ಆಕೆ ಮದುವೆಯಾಗಿದ್ದಳು, ಆದರೆ ಎಷ್ಟು ವರ್ಷಗಳು ಕಳೆದರೂ ಆಕೆ ಗರ್ಭಧರಿಸಲು ಸಾಧ್ಯವಾಗಿರಲಿಲ್ಲ, ಬಂಜೆತನದ ಒತ್ತಡದಿಂದಾಗಿ ಅವರಿಬ್ಬರು ಬೇರ್ಪಟ್ಟರು. ಈ ಸಮಯದಲ್ಲಿ ಆಕೆಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಕೆಲ ಸಮಯದ ಬಳಿಕ ಮತ್ತೆ ಗಂಡ ಹೆಂಡತಿ ಒಂದಾಗಿದ್ದರೆ., ಇದಾದ ಕೆಲವೇ ದಿನಗಳಲ್ಲಿ ಆಕೆ ಗರ್ಭಿಣಿ ಕೂಡ ಆಗಿದ್ದಾಳೆ. ಎಲ್ಲರೂ ಸಂತಸದಿಂದಿದ್ದರು. ಆಕೆಗೆ 20 ವಾರಗಳು ತುಂಬಿದ್ದವು.

ಆಕೆ ತಂದೆಯಾರೆಂದು ತಿಳಿಯಲು ಡಿಎನ್​ಎ ಪರೀಕ್ಷೆ ಮಾಡಿಸಿದ್ದಳು, ತಮ್ಮ ಮಾದರಿಗಳನ್ನು ಸಲ್ಲಿಸಲು ಬ್ರಾಂಕ್ಸ್‌ನಲ್ಲಿರುವ ವಿನ್ ಹೆಲ್ತ್ ಲ್ಯಾಬ್ಸ್‌ಗೆ ಹೋದರು, ಇದು ಹೇರ್ ಸಲೂನ್‌ನ ಹಿಂಭಾಗದಲ್ಲಿ ಕಾರ್ಯನಿರ್ವಹಿಸುತ್ತದೆ. ಹೇಗೂ ತನ್ನ ಗಂಡನೇ ಮಗುವಿನ ತಂದೆ ಎನ್ನುವ ಭಾವನೆಯಲ್ಲಿ ಜಂಡರ್ ರಿವೀಲ್ ಪಾರ್ಟಿಯನ್ನು ಕೂಡ ಆಯೋಜಿಸಿದ್ದರು. ಆದರೆ ಪಾರ್ಟಿ ದಿನವೇ ಬಂದಿರುವ ಡಿಎನ್​ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಆತನಲ್ಲ ಎಂದು ಬರೆಯಲಾಗಿತ್ತು. ಇದು ಅಚ್ಚರಿ ಹಾಗೂ ನಿರಾಸೆಗೊಳಿಸಿತ್ತು.

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಮತ್ತಷ್ಟು ಓದಿ: Viral Video: ಅಂಗಡಿಯೊಂದರಲ್ಲಿ ಪತ್ನಿ ಎದುರೇ ಪತಿಯ ಗುಪ್ತಾಂಗ ಹಿಡಿದ ಮಹಿಳೆ

ಆ ಹೊತ್ತಿಗೆ, ಆ ಮಹಿಳೆ ಸುಮಾರು 20 ವಾರಗಳ ಗರ್ಭಿಣಿಯಾಗಿದ್ದಳು ಬಳಿಕ ಗರ್ಭಪಾತ ಮಾಡಿಸಿಕೊಂಡಿದ್ದಳು. ಗಂಡ ಕೂಡ ಈ ರಿಪೋರ್ಟ್​ ನೋಡಿ ದಂಗಾಗಿದ್ದ. ಎರಡು ದಿನಗಳ ಆಸ್ಪತ್ರೆಯಲ್ಲೇ ಇದ್ದು ಒಲ್ಲದ ಮನಸ್ಸಿನಿಂದ ಶಸ್ತ್ರ ಚಿಕಿತ್ಸೆ ಮಾಡಿಸಿ ಗರ್ಭಪಾತ ಮಾಡಿಸಿಕೊಮಡಿದ್ದಳು.

ಇದಾದ ದಿನವೇ ಲ್ಯಾಬ್​ನಿಂದ ಕರೆ ಬಂದಿತ್ತು. ತಪ್ಪಾಗಿದೆ ಕ್ಷಮಿಸಿ, ತಾಂತ್ರಿಕ ದೋಷದಿಂದ ಇದು ಸಂಭವಿಸಿದೆ. ಆಕೆಯ ಗಂಡನೇ ಮಗುವಿನ ತಂದೆ ಎಂದು ಹೇಳಿದ್ದಾರೆ. ಈ ತಪ್ಪಿನಿಂದ ಗಂಡ ಹೆಂಡತಿ ಮಾರ್ಚ್​ನಲ್ಲಿ ದೂರವಾಗಿದ್ದರು. ಲ್ಯಾಬ್​ ತಪ್ಪಿನಿಂದ ಮುಗ್ದ ಜೀವವೊಂದು ಪ್ರಾಣ ಕಳೆದುಕೊಂಡಿತ್ತು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ