AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಹೋಟೆಲ್​ನಲ್ಲಿ ಉಳಿದುಕೊಳ್ತೀರಾ, ಹಾಸಿಗೆ ಕೆಳಗೆ ನೀರಿನ ಬಾಟಲಿ ಎಸೆಯುವುದ ಮರಿಬೇಡಿ

ನೀವು ಪದೇ ಪದೇ ಎಲ್ಲಿಗಾದರೂ ಪ್ರವಾಸಕ್ಕೆ ಹೋಗುತ್ತಿರಬಹುದು, ಹೋಟೆಲ್​ನಲ್ಲಿ ಉಳಿಯುವಂತಹ ಅನಿವಾರ್ಯತೆ ಎದುರಾಗಬಹುದು ಆ ಸಂದರ್ಭದಲ್ಲಿ ಹಾಸಿಗೆಯ ಕೆಳಗೆ ನೀರಿನ ಬಾಟಲಿ ಎಸೆಯುವುದನ್ನು ಮರೆಯಬೇಡಿ. ಹೋಟೆಲ್​ ಬುಕ್ ಮಾಡಿದಾಗ ನಿಮಗೆ ಆ ಹೋಟೆಲ್​ ಬಗ್ಗೆ ಏನೂ ತಿಳಿದಿರುವುದಿಲ್ಲ, ಎಲ್ಲೋ ಗುಪ್ತ ಕ್ಯಾಮರಾಗಳಿರಬಹುದು ಅಥವಾ ಯಾರಾದರೂ ನಿಮ್ಮ ಮೇಲೆ ಕಣ್ಣಿಟ್ಟಿರಬಹುದು.

ನೀವು ಹೋಟೆಲ್​ನಲ್ಲಿ ಉಳಿದುಕೊಳ್ತೀರಾ, ಹಾಸಿಗೆ ಕೆಳಗೆ ನೀರಿನ ಬಾಟಲಿ ಎಸೆಯುವುದ ಮರಿಬೇಡಿ
ಬಾಟಲಿ
ನಯನಾ ರಾಜೀವ್
|

Updated on:Aug 16, 2024 | 9:56 AM

Share

ನೀವು ಪದೇ ಪದೇ ಎಲ್ಲಿಗಾದರೂ ಪ್ರವಾಸಕ್ಕೆ ಹೋಗುತ್ತಿರಬಹುದು, ಹೋಟೆಲ್​ನಲ್ಲಿ ಉಳಿಯುವಂತಹ ಅನಿವಾರ್ಯತೆ ಎದುರಾಗಬಹುದು ಆ ಸಂದರ್ಭದಲ್ಲಿ ಹಾಸಿಗೆಯ ಕೆಳಗೆ ನೀರಿನ ಬಾಟಲಿ ಎಸೆಯುವುದನ್ನು ಮರೆಯಬೇಡಿ. ಹೋಟೆಲ್​ ಬುಕ್ ಮಾಡಿದಾಗ ನಿಮಗೆ ಆ ಹೋಟೆಲ್​ ಬಗ್ಗೆ ಏನೂ ತಿಳಿದಿರುವುದಿಲ್ಲ, ಎಲ್ಲೋ ಗುಪ್ತ ಕ್ಯಾಮರಾಗಳಿರಬಹುದು ಅಥವಾ ಯಾರಾದರೂ ನಿಮ್ಮ ಮೇಲೆ ಕಣ್ಣಿಟ್ಟಿರಬಹುದು.

ಬಹುತೇಕ ಎಲ್ಲರೂ ಈ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೋಟೆಲ್ ಕೊಠಡಿಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳಿಂದ ಅನೇಕ ಜನರು ಅನನುಕೂಲತೆ ಎದುರಿಸಿದ್ದಾರೆ. ಅದರಲ್ಲೂ ಮಹಿಳೆಯರ ವಿಷಯದಲ್ಲಿ ಭದ್ರತೆ ಹೆಚ್ಚು ಮುಖ್ಯ ಹಾಗೆಯೇ ಅವರು ಎಲ್ಲದರ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ.

ಇದನ್ನು ಗಮನದಲ್ಲಿಟ್ಟುಕೊಂಡು, ಡಚ್ ಏರ್‌ಲೈನ್ಸ್ ಫ್ಲೈಟ್ ಅಟೆಂಡೆಂಟ್ ಎಸ್ಟರ್ ಸ್ಟ್ರೂಸ್ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪ್ರಯಾಣ ಸುರಕ್ಷತೆ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಅನುಭವದಿಂದ ಹೇಳಿದರು, ನೀವು ಈ ಕೆಲವು ಹ್ಯಾಕ್‌ಗಳನ್ನು ನೆನಪಿಸಿಕೊಂಡರೆ ನೀವು ಹೋಟೆಲ್‌ನಲ್ಲಿ ಸುರಕ್ಷಿತವಾಗಿರುತ್ತೀರಿ.

ಮತ್ತಷ್ಟು ಓದಿ: Viral Photo: ಹುಡುಗಿ ಸಿಗದೇ ಕುಕ್ಕರನ್ನು ಮದುವೆಯಾದ ಯುವಕ

ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನೀರಿನ ಬಾಟಲಿಯನ್ನು ಹಾಸಿಗೆಯ ಕೆಳಗೆ ಎಸೆಯುವುದು. ಈ ಕೆಲಸ ನಿಮ್ಮ ಸುರಕ್ಷತೆಗಾಗಿ. ನಿಮಗನಿಸಬಹುದು ಹಾಸಿಗೆ ಕೆಳಗೆ ನೀರಿನ ಬಾಟಲು ಎಸೆಯುವುದಕ್ಕೂ ನಿಮ್ಮ ಸುರಕ್ಷತೆಗೂ ಏನು ಸಂಬಂಧವೆಂದು.

ವಾಸ್ತವವಾಗಿ, ಹಾಸಿಗೆಯ ಕೆಳಗೆ ನೀರಿನ ಬಾಟಲಿಯನ್ನು ಎಸೆದರೆ, ಅಲ್ಲಿ ಯಾರಾದರೂ ಅಡಗಿದ್ದಾರೆಯೇ ಎಂದು ತಿಳಿಯುತ್ತದೆಯೇ? ಕೆಳಗೆ ಯಾರೂ ಇಲ್ಲದಿದ್ದರೆ ನೀರಿನ ಬಾಟಲಿಯು ಹೊರಬರುತ್ತದೆ, ಇಲ್ಲದಿದ್ದರೆ ಅಲ್ಲಿ ಏನಾದರೂ ತಪ್ಪಾಗಿದೆ ಎಂದು ನಿಮಗೆ ತಿಳಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತಕ್ಷಣ ಕೊಠಡಿಯನ್ನು ಬಿಟ್ಟು ಓಡಿಹೋಗಬಹುದು.

ಆಸ್ಟರ್ ಇನ್ನೂ ಕೆಲವು ತಂತ್ರಗಳನ್ನು ಹೇಳಿದ್ದಾರೆ. ಹೋಟೆಲ್ ರೂಮಿನಲ್ಲಿದ್ದಾಗ ಶೂ ಕಳಚಿ ಲಾಕರ್ ನಲ್ಲಿ ಇಡುತ್ತಾರೆ ಎಂದರು. ಇದರ ಹಿಂದೆ ಒಂದು ಕುತೂಹಲಕಾರಿ ಕಾರಣವೂ ಇದೆ.

ಅನೇಕ ಬಾರಿ ಜನರು ಲಾಕರ್‌ನಲ್ಲಿ ಪ್ರಮುಖ ವಸ್ತುಗಳನ್ನು ಇಡುತ್ತಾರೆ ಆದರೆ ಹೊರಡುವಾಗ ಅವುಗಳನ್ನು ತೆಗೆದುಕೊಳ್ಳಲು ಮರೆತುಬಿಡುತ್ತಾರೆ. ಪಾದರಕ್ಷೆ ಇಲ್ಲದೆ ಹೊರಗೆ ಹೋಗುವಂತಿಲ್ಲವಾದ್ದರಿಂದ ಲಾಕರ್ ನಲ್ಲಿ ಬೂಟುಗಳಿದ್ದರೆ ಲಾಕರ್ ತೆರೆದು ನೋಡುತ್ತಾರೆ. ಈ ರೀತಿಯಾಗಿ ನಿಮ್ಮ ಬೆಲೆಬಾಳುವ ವಸ್ತುಗಳು ಮರೆಯುವುದಿಲ್ಲ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:06 am, Fri, 16 August 24

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ