AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇತುವೆ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಶಿಕ್ಷಕ; ಗ್ರಾಮಸ್ಥರ ನೆರವಿನಿಂದ ಉಳಿಯಿತು ಶಿಕ್ಷಕನ ಪ್ರಾಣ

ತುಂಬಿ ಹರಿಯುವ ಸೇತುವೆ ದಾಟಲು ಹೋಗಿದ್ದ ಶಿಕ್ಷಕನೊಬ್ಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ದಾವಣಗೆರೆ(Davanagere) ಜಿಲ್ಲೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ-ಚೊರಡೋಣಿ ಮಧ್ಯ ನಡೆದಿದೆ. ಇದನ್ನು ನೋಡಿ ಎಚ್ಚೆತ್ತ ಗ್ರಾಮಸ್ಥರು, ಕೂಡಲೇ ನೀರಿಗೆ ಹಾರಿ ರಕ್ಷಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಶಿಕ್ಷಕ(Teacher)ನ ಪ್ರಾಣ ಉಳಿದಿದೆ.

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Nov 07, 2023 | 2:38 PM

Share

ದಾವಣಗೆರೆ, ನ.07: ತುಂಬಿ ಹರಿಯುವ ಸೇತುವೆ ದಾಟಲು ಹೋಗಿದ್ದ ಶಿಕ್ಷಕನೊಬ್ಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ದಾವಣಗೆರೆ(Davanagere) ಜಿಲ್ಲೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ-ಚೊರಡೋಣಿ ಮಧ್ಯ ನಡೆದಿದೆ. ಇದನ್ನು ನೋಡಿ ಎಚ್ಚೆತ್ತ ಗ್ರಾಮಸ್ಥರು, ಕೂಡಲೇ ನೀರಿಗೆ ಹಾರಿ ರಕ್ಷಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಶಿಕ್ಷಕ(Teacher)ನ ಪ್ರಾಣ ಉಳಿದಿದೆ. ಇನ್ನು ರಾತ್ರಿಯಿಂದ ಚನ್ನಗಿರಿ ಭಾಗದಲ್ಲಿ ಸಾಕಷ್ಟು ಮಳೆಯಾಗಿತ್ತು. ಈ ವೇಳೆ ಚನ್ನಗಿರಿ ತಾಲೂಕಿನ ಬಸವಪಟ್ಟಣದಿಂದ ಶಿಕ್ಷಕ ತಿಮ್ಮಯ್ಯ ಎಂಬುವವರು ದೊಡ್ಡಘಟ್ಟ ಗ್ರಾಮದ ಶಾಲೆಗೆ ಹೋಗುತಿದ್ದರು. ಈ ವೇಳೆ ಚಿರಡೋಣಿ-ದೊಡ್ಡಘಟ್ಟ ಮಧ್ಯ ಬರುವ ಸೇತುವೆ ದಾಟುವಾಗ ಬೈಕ್​ ಸಮೇತ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದರು. ಶಿಕ್ಷಕ ತಿಮ್ಮಯ್ಯ ಕೊಚ್ಚಿ ಹೋಗುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಈ ಘಟನೆ ಬಸವಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Doddamani
Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More