AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದುಳಿದ ವರ್ಗದ ನಾಯಕತ್ವಕ್ಕೆ ಕೊಡಲಿ ಪೆಟ್ಟು: ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬೊಮ್ಮಾಯಿ

ಹಿಂದುಳಿದ ವರ್ಗದ ನಾಯಕತ್ವಕ್ಕೆ ಕೊಡಲಿ ಪೆಟ್ಟು: ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬೊಮ್ಮಾಯಿ

ರಮೇಶ್ ಬಿ. ಜವಳಗೇರಾ
|

Updated on: May 29, 2026 | 4:54 PM

Share

ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಸಹ ಸಿದ್ದರಾಮಯ್ಯ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಸಿದ್ದರಾಮಯ್ಯ ಅವರು ನಾಲ್ಕು ದಶಕ ರಾಜಕಾರಣ ಮಾಡಿದ್ದಾರೆ. ಅವರು ಮೊದಲ ಅಹಿಂದ ಸಭೆ ಮಾಡಿದಾಗ ನಾನೇ ಮುಖ್ಯ ಭಾಷಣ ಮಾಡಿದ್ದೆ. ಅವರೇ ಮೊನ್ನೆ ನೆನಪು ಮಾಡಿಕೊಂಡಿದ್ರು. ಕಾಂಗ್ರೆಸ್ ಸೇರಿ 2007 ರಲ್ಲಿ ಬೈ ಎಲೆಕ್ಷನ್ ನಿಂತಿದ್ರು. ಆಗ ಅವರಿಗೆ ನಾವೂ ಸಹ ಸಹಾಯ ಮಾಡಿದ್ದೆವು. ಅವರು ಕಾಂಗ್ರೆಸ್ ಗೆ ಹೋದ ಮೇಲೆ ನನಗೆ ಅವರ ಜೊತೆ ರಾಜಕೀಯ ನಂಟಿಲ್ಲ. ಸೈಂದಾತಿಕವಾಗಿ ನಾವು ಕಾಂಪ್ರಮೈಸ್ ಆಗಿಲ್ಲ. ಆದ್ರೆ, ಅವರು ಸಮಾಜವಾದಿ, ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಇರುವ ನಾಯಕ. ಅವರನ್ನು ಇಳಿಸಿ ಕಾಂಗ್ರೆಸ್ ನವರು ಹಿಂದುಳಿದ ವರ್ಗದ ನಾಯಕತ್ವಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ. ಇದರ ಪರಿಣಾಮ ಖಂಡಿತವಾಗಿ ಆಗುತ್ತೆ ಎಂದಿದ್ದಾರೆ.

ಹಾವೇರಿ, (ಮೇ 29): ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದ ಅವರ ಆಪ್ತರಿಗೆ ಹಾಗು ಅಭಿಮಾನಿಗಳಿಗೆ ಬೇಸರ ತರಿಸಿದೆ. ಅದರಲ್ಲೂ ಮುಖ್ಯವಾಗಿ ಪಕ್ಷ ಬೇರೆ ಇದ್ದರೂ ಸಹ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಿದ್ದರಾಮಯ್ಯನವರ ರಾಜೀನಾಮೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರ ಜೊತೆಗಿನ ರಾಜಕೀಯ ಹಳೇ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಅದರಂತೆ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ (Basavaraj bommai) ಸಹ ಸಿದ್ದರಾಮಯ್ಯ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಸಿದ್ದರಾಮಯ್ಯ ಅವರು ನಾಲ್ಕು ದಶಕ ರಾಜಕಾರಣ ಮಾಡಿದ್ದಾರೆ. ಅವರು ಮೊದಲ ಅಹಿಂದ ಸಭೆ ಮಾಡಿದಾಗ ನಾನೇ ಮುಖ್ಯ ಭಾಷಣ ಮಾಡಿದ್ದೆ. ಅವರೇ ಮೊನ್ನೆ ನೆನಪು ಮಾಡಿಕೊಂಡಿದ್ರು. ಕಾಂಗ್ರೆಸ್ ಸೇರಿ 2007 ರಲ್ಲಿ ಬೈ ಎಲೆಕ್ಷನ್ ನಿಂತಿದ್ರು. ಆಗ ಅವರಿಗೆ ನಾವೂ ಸಹ ಸಹಾಯ ಮಾಡಿದ್ದೆವು. ಅವರು ಕಾಂಗ್ರೆಸ್ ಗೆ ಹೋದ ಮೇಲೆ ನನಗೆ ಅವರ ಜೊತೆ ರಾಜಕೀಯ ನಂಟಿಲ್ಲ. ಸೈಂದಾತಿಕವಾಗಿ ನಾವು ಕಾಂಪ್ರಮೈಸ್ ಆಗಿಲ್ಲ. ಆದ್ರೆ, ಅವರು ಸಮಾಜವಾದಿ, ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಇರುವ ನಾಯಕ. ಅವರನ್ನು ಇಳಿಸಿ ಕಾಂಗ್ರೆಸ್ ನವರು ಹಿಂದುಳಿದ ವರ್ಗದ ನಾಯಕತ್ವಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ. ಇದರ ಪರಿಣಾಮ ಖಂಡಿತವಾಗಿ ಆಗುತ್ತೆ ಎಂದಿದ್ದಾರೆ.

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More