AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳ್ಳನ ಕರಾಮತ್ತು: ಭಕ್ತಿಯಿಂದ ನಮಸ್ಕರಿಸಿ ಕೊರಗಜ್ಜನ ಕಟ್ಟೆ ಕಾಣಿಕೆ ಹುಂಡಿ ಕದ್ದೊಯ್ದ ಖದೀಮ

ಕಳ್ಳನ ಕರಾಮತ್ತು: ಭಕ್ತಿಯಿಂದ ನಮಸ್ಕರಿಸಿ ಕೊರಗಜ್ಜನ ಕಟ್ಟೆ ಕಾಣಿಕೆ ಹುಂಡಿ ಕದ್ದೊಯ್ದ ಖದೀಮ

ಅಶೋಕ್​ ಪೂಜಾರಿ, ಮಂಗಳೂರು
| Updated By: Ganapathi Sharma

Updated on:Apr 30, 2025 | 8:12 AM

ಖದೀಮನೊಬ್ಬ ಕಾರಣಿಕ ದೈವ ಕೊರಗಜ್ಜನ ಕಟ್ಟೆಗೆ ಸುತ್ತು ಬಂದು ಕೊರಗಜ್ಜನಿಗೆ ನಮಸ್ಕರಿಸಿ ಅಲ್ಲಿದ್ದ ಹುಂಡಿಯನ್ನೇ ಹೊತ್ತೊಯ್ದ ಘಟನೆ ಮಂಗಳೂರು ನಗರದ ಮೇರಿಹಿಲ್​​ನಲ್ಲಿ ನಡೆದಿದೆ. ಸುತ್ತಮುತ್ತ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಖದೀಮ ಕಾಣಿಕೆ ಹುಂಡಿಗೆ ಕನ್ನ ಹಾಕಿದ್ದಾನೆ. ಆತ ಹುಂಡಿಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.

ಮಂಗಳೂರು, ಏಪ್ರಿಲ್ 30: ಮಂಗಳೂರು ನಗರದ ಮೇರಿಹಿಲ್​​ನ ಕೊರಗಜ್ಜನ ಕಟ್ಟೆಗೆ ಬಂದ ಕಳ್ಳನೊಬ್ಬ ಭಕ್ತಿಯಿಂದ ನಮಸ್ಕರಿಸಿ, ಕಟ್ಟೆಗೆ ಮೂರು ಸುತ್ತು ಬಂದು ಪುನಃ ಕೊರಗಜ್ಜನಿಗೆ ನಮಸ್ಕರಿಸಿ ನಂತರ ಅಲ್ಲಿದ್ದ ಕಾಣಿಕೆ ಹುಂಡಿಯನ್ನೇ ಕದ್ದೊಯ್ದಿದ್ದಾನೆ. ಕಳ್ಳನ ಕರಾಮತ್ತು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ. ಕರಾವಳಿ ಕರ್ನಾಟಕದಲ್ಲಿ ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗಜ್ಜನ ಆರಾಧಕರು ಬಹಳಷ್ಟು ಮಂದಿ ಇದ್ದಾರೆ. ಕೊರಗಜ್ಜ ಈ ಭಾಗದ ಪ್ರಖ್ಯಾತ ಹಾಗೂ ಕಾರಣಕ ದೈವವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 30, 2025 08:06 AM