AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

'ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸುವವರು ಹಿಂದೂಗಳೇ ಅಲ್ಲ'; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

‘ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸುವವರು ಹಿಂದೂಗಳೇ ಅಲ್ಲ’; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಸುಷ್ಮಾ ಚಕ್ರೆ
|

Updated on: Aug 29, 2026 | 11:32 PM

Share

"ನಮ್ಮ ಸಮಾಜ ಮತ್ತು ನಮ್ಮ ದೇಶವು ವಿದೇಶಿ ಆಕ್ರಮಣಗಳಿಗೆ ಬಲಿಯಾಗಿ ಬಹಳಷ್ಟು ಕಳೆದುಕೊಂಡಿದೆ, ಆದರೆ ಆ ಸಂಪ್ರದಾಯ ಇಂದಿಗೂ ಮುಂದುವರೆದಿದೆ, ಸಾಮಾನ್ಯ ಜನರಿಗೆ ಒಂದೇ ವಿಷಯವನ್ನು ಕಲಿಸುತ್ತದೆ. ಒಂದು ಜಗತ್ತು, ಒಂದು ಮಾನವೀಯತೆ. ಆದರೆ ಜನರು ಅನಗತ್ಯವಾಗಿ ಹೊರುವ ಕೆಲವು ವಿಷಯಗಳು ಅಥವಾ ಹೊರೆಗಳಿವೆ. ನಮ್ಮ ಭಾರತದಲ್ಲಿ, ಭಾರತವು ಸಾಂಪ್ರದಾಯಿಕವಾಗಿ ಎಲ್ಲರಿಗೂ ಆಶ್ರಯ ನೀಡಿರುವುದರಿಂದ ಎಲ್ಲಾ ಧರ್ಮಗಳು ಮತ್ತು ಸಮುದಾಯಗಳ ಜನರು ಸಾಮರಸ್ಯದಿಂದ ಒಟ್ಟಿಗೆ ವಾಸಿಸುತ್ತಾರೆ" ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ನ್ಯೂಯಾರ್ಕ್, ಆಗಸ್ಟ್ 29: ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ “ವಿಶ್ವ ಏಕತೆ ಆಚರಣೆ” ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat), ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾರಾದರೂ ಭಾವಿಸಿದರೆ, ಅವರು ಇನ್ನು ಮುಂದೆ ಹಿಂದೂಗಳಾಗಿ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.

“ನಾನು ಒಂದು ಉಪನ್ಯಾಸ ನೀಡಿದ್ದೆ. ಅಲ್ಲಿ ಮುಸ್ಲಿಂ ಸಹೋದರರು ಸಹ ಇದ್ದರು. ಅವರು ನನಗೆ ಒಂದು ಪ್ರಶ್ನೆ ಕೇಳಿದರು. ‘ನೀವು ಹಿಂದೂ ಸಂಘಟನೆ, ನೀವು ಹಿಂದೂ ರಾಷ್ಟ್ರ ಎಂದು ಹೇಳುತ್ತೀರಿ. ಹಾಗಾದರೆ, ನಮ್ಮ (ಮುಸ್ಲಿಮರ) ಕತೆಯೇನು? ನೀವು ನಮ್ಮನ್ನು ಹೊರಹಾಕುತ್ತೀರಾ?’ ಎಂದು ಕೇಳಿದರು. ನಾನು ಅದಕ್ಕೆ ‘ಇಲ್ಲ. ಆ ರೀತಿ ಹೇಳುವುದು ಹಿಂದುತ್ವವಲ್ಲ. ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾರಾದರೂ ಹಿಂದೂ ಭಾವಿಸಿದರೆ, ಅವನು ಇನ್ನು ಮುಂದೆ ಹಿಂದೂ ಆಗಿರಲು ಲಾಯಕ್ಕಲ್ಲ ಎಂದು ಅರ್ಥ’ ಎಂದು ಹೇಳಿದ್ದೆ” ಎಂದು ಮೋಹನ್ ಭಾಗವತ್ ನೆನಪಿಸಿಕೊಂಡಿದ್ದಾರೆ.

“ನಮ್ಮ ಸಮಾಜ ಮತ್ತು ನಮ್ಮ ದೇಶವು ವಿದೇಶಿ ಆಕ್ರಮಣಗಳಿಗೆ ಬಲಿಯಾಗಿ ಬಹಳಷ್ಟು ಕಳೆದುಕೊಂಡಿದೆ, ಆದರೆ ಆ ಸಂಪ್ರದಾಯ ಇಂದಿಗೂ ಮುಂದುವರೆದಿದೆ, ಸಾಮಾನ್ಯ ಜನರಿಗೆ ಒಂದೇ ವಿಷಯವನ್ನು ಕಲಿಸುತ್ತದೆ. ಒಂದು ಜಗತ್ತು, ಒಂದು ಮಾನವೀಯತೆ. ಆದರೆ ಜನರು ಅನಗತ್ಯವಾಗಿ ಹೊರುವ ಕೆಲವು ವಿಷಯಗಳು ಅಥವಾ ಹೊರೆಗಳಿವೆ. ನಮ್ಮ ಭಾರತದಲ್ಲಿ, ಭಾರತವು ಸಾಂಪ್ರದಾಯಿಕವಾಗಿ ಎಲ್ಲರಿಗೂ ಆಶ್ರಯ ನೀಡಿರುವುದರಿಂದ ಎಲ್ಲಾ ಧರ್ಮಗಳು ಮತ್ತು ಸಮುದಾಯಗಳ ಜನರು ಸಾಮರಸ್ಯದಿಂದ ಒಟ್ಟಿಗೆ ವಾಸಿಸುತ್ತಾರೆ” ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us