Karnataka Power Tussle: ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿ ಕದನಕ್ಕೆ ಮತ್ತೊಂದು ತಿರುವು

ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೋಲಾಹಲವನ್ನೇ ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವೇಳೆ ಹೈಕಮಾಂಡ್ (High Command)​​ ಜೊತೆ ಪವರ್ ಶೇರಿಂಗ್ ಚರ್ಚೆ ನಡೆದಿತ್ತು ಎನ್ನಲಾಗ್ತಿದ್ದು, ಮೇ ತಿಂಗಳಲ್ಲೇ ಮುಖ್ಯಮಂತ್ರಿ ಬದಲಾವಣೆ ಎಂದು ಕಾಂಗ್ರೆಸ್​ ಒಂದು ಬಣದ ಟೀಮ್​ ಹೇಳ್ತಿದೆ. ಸಿಎಂ ಕುರ್ಚಿ ಕಚ್ಚಾಟದ ಗೊಂದಲನ ನಡುವೆ ಸಿಎಂ ಪಟ್ಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೆಸರು ತೇಲಿಬಂದಿದೆ.

ಬೆಂಗಳೂರು (ಮೇ.3): ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆ (Karnataka Power Tussle) ವಿಚಾರ ಕೋಲಾಹಲವನ್ನೇ ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವೇಳೆ ಹೈಕಮಾಂಡ್ (High Command)​​ ಜೊತೆ ಪವರ್ ಶೇರಿಂಗ್ ಚರ್ಚೆ ನಡೆದಿತ್ತು ಎನ್ನಲಾಗ್ತಿದ್ದು, ಮೇ ತಿಂಗಳಲ್ಲೇ ಮುಖ್ಯಮಂತ್ರಿ ಬದಲಾವಣೆ ಎಂದು ಕಾಂಗ್ರೆಸ್​ ಒಂದು ಬಣದ ಟೀಮ್​ ಹೇಳ್ತಿದೆ. ಸಿಎಂ ಕುರ್ಚಿ ಕಚ್ಚಾಟದ ಗೊಂದಲನ ನಡುವೆ ಸಿಎಂ ಪಟ್ಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೆಸರು ತೇಲಿಬಂದಿದೆ.

ಪಟ್ಟದಾಟದಲ್ಲಿ ಕಳೆದ ನಾಲ್ಕು ದಿನದಿಂದ ಉರುಳಿದ ದಾಳಗಳಿವು. ಅದ್ಯಾವಾಗ ಡಿಕೆ ದೆಹಲಿಗೆ ಹೋಗಿ ವಾಪಾಸ್ ಆಗ್ತಿದ್ದಂತೆ ಬಂಡೆ ಬಣದ ನಾಯಕರು ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ಮಾಡ್ಕೊಂಡಿದ್ರು. ಮೇ 15ಕ್ಕೆ ಡಿಕೆ ಬರ್ತ್‌ಡೇ ಇದೆ. ಅಂದೇ ಶುಭ ಸುದ್ದಿ ಸಿಗುತ್ತೆಂಬ ವಿಶ್ವಾಸದಲ್ಲಿದರು. ಆಗ್ಲೇ ನೋಡಿ ಸಿಎಂ ಬಣದ ನಾಯಕರು ದೆಹಲಿಗೆ ಫ್ಲೈಟ್ ಹತ್ತಿದ್ರು. ಅಷ್ಟೇ ಅಲ್ಲ, ಹಿರಿಯರು ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗ್ಬೇಕು ಅನ್ನೋ ಹೆಸರನ್ನ ತೇಲಿಬಿಟ್ರು. ಅದೇ ಸಾಲಿನಲ್ಲಿ ದೆಹಲಿಗೆ ಹೋಗಿದ್ದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ದೆಹಲಿಗೆ ಹೋಗಿದ್ರು. ಖರ್ಗೆ ಜೊತೆ ಮಾತುಕತೆ ನಡೆಸಿದ್ರು. ಖರ್ಗೆ ಜೊತೆ ಏನು ಮಾತನಾಡಿದೆ ಅನ್ನೋದನ್ನ ಟಿವಿ9 ಜೊತೆ ಎಕ್ಸ್‌ಕ್ಲೂಸಿವ್ ಆಗಿ ತೆರೆದಿಟ್ರು. ಸಿದ್ದರಾಮಯ್ಯರನ್ನ ಬಿಟ್ರೆ ಖರ್ಗೆಯವ್ರೇ ಸಿಎಂ ಆಗ್ಬೇಕು ಅಂತಾ ದಾಳ ಉರುಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us