AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲು ನಾಡಿನ ಮಿಂಚೇರಿ ನೀಡ್ತಿದೆ ಮಲೆನಾಡಿನ ಅನುಭವ, ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಂತ್ರಮುಗ್ಧ

ಬಳ್ಳಾರಿ: ಗಣಿನಾಡು ಬಳ್ಳಾರಿ ಅಂದ್ರೆ ಥಟ್ ಅಂತ ನೆನಪಾಗೋದು ಗಣಿ ಧೂಳು. ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಜೆಸಿಬಿ, ಲಾರಿಗಳು ಸದ್ದು ಮಾಡೋದನ್ನ ನೀವು ನೋಡಿದ್ದೀರಾ. ಆದ್ರೆ ಈಗ ಅಲ್ಲಿನ ಆ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ಮಲೆನಾಡಿನಂತೆ ಗಣಿನಾಡಾಗಿದೆ. ಗಣಿನಾಡು ಬಳ್ಳಾರಿಯಲ್ಲಿ ಮಲೆನಾಡಿನ ಸೌಂದರ್ಯ ಮನೆ ಮಾಡಿದೆ. ಬಳ್ಳಾರಿ ತಾಲೂಕಿನಿಂದ 18 ಕಿಮೀ ದೂರದಲ್ಲಿರುವ ಮಿಂಚೇರಿ ಅರಣ್ಯ ಪ್ರದೇಶ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಈ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಮಿಂಚೇರಿ ಅರಣ್ಯ ಪ್ರದೇಶ ಈಗ ಪ್ರವಾಸಿಗರನ್ನ […]

ಬಿಸಿಲು ನಾಡಿನ ಮಿಂಚೇರಿ ನೀಡ್ತಿದೆ ಮಲೆನಾಡಿನ ಅನುಭವ, ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಂತ್ರಮುಗ್ಧ
ಆಯೇಷಾ ಬಾನು
| Edited By: |

Updated on:Oct 14, 2020 | 10:46 AM

Share

ಬಳ್ಳಾರಿ: ಗಣಿನಾಡು ಬಳ್ಳಾರಿ ಅಂದ್ರೆ ಥಟ್ ಅಂತ ನೆನಪಾಗೋದು ಗಣಿ ಧೂಳು. ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಜೆಸಿಬಿ, ಲಾರಿಗಳು ಸದ್ದು ಮಾಡೋದನ್ನ ನೀವು ನೋಡಿದ್ದೀರಾ. ಆದ್ರೆ ಈಗ ಅಲ್ಲಿನ ಆ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ಮಲೆನಾಡಿನಂತೆ ಗಣಿನಾಡಾಗಿದೆ.

ಗಣಿನಾಡು ಬಳ್ಳಾರಿಯಲ್ಲಿ ಮಲೆನಾಡಿನ ಸೌಂದರ್ಯ ಮನೆ ಮಾಡಿದೆ. ಬಳ್ಳಾರಿ ತಾಲೂಕಿನಿಂದ 18 ಕಿಮೀ ದೂರದಲ್ಲಿರುವ ಮಿಂಚೇರಿ ಅರಣ್ಯ ಪ್ರದೇಶ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಈ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಮಿಂಚೇರಿ ಅರಣ್ಯ ಪ್ರದೇಶ ಈಗ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಸುಮಾರು 2625 ಎಕರೆ ವಿಸ್ತೀರ್ಣದ ಈ ಅರಣ್ಯ ಪ್ರದೇಶದಲ್ಲಿ ಬೆಟ್ಟಗುಡ್ಡಗಳು, ಇಲ್ಲಿನ ಪ್ರಕೃತಿ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

ಬ್ರಿಟಿಷ್ ಕಾಲದ ಜಡ್ಜ್​ ಮನೆ ಪ್ರವಾಸಿಗರಿಗೆ ಅಚ್ಚುಮೆಚ್ಚು  ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಮಿಂಚೇರಿ ಅರಣ್ಯ ಪ್ರದೇಶದ ಸೌಂದರ್ಯ ವೀಕ್ಷಿಸಲು ನಿತ್ಯ ಸಾವಿರಾರು ಜನರು ಬರುತ್ತಿದ್ದಾರೆ. ಅದರಲ್ಲೂ ಈ ಅರಣ್ಯ ಪ್ರದೇಶದಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡಿದ್ದ ನ್ಯಾಯಾಧೀಶರ ವಾಸಸ್ಥಳದ ಬಂಗಲೆಯೂ ಕೂಡ ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ. ಮಲೆನಾಡಿನ ಅನುಭವ ನೀಡುತ್ತಿರುವ ಬಿಸಿಲನಾಡಿನ ಈ ಪ್ರದೇಶವನ್ನ ಅಭಿವೃದ್ಧಿ ಮಾಡಬೇಕು ಅನ್ನೋದು ಪ್ರವಾಸಿಗರ ಮಾತು.

ಪ್ರತಿ ವರ್ಷ ಸಮರ್ಪಕ ಮಳೆ ಇಲ್ಲದೇ ಇಲ್ಲಿನ ಗುಡ್ಡಬೆಟ್ಟಗಳು, ಇಲ್ಲಿನ ಪರಿಸರ ಬೆಂದು ಹೋಗುತ್ತಿತ್ತು. ಆದ್ರೆ ಈ ವರ್ಷ ನಿರಂತರ ಮಳೆಯಿಂದ ಮಿಂಚೇರಿ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಾ ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ.

Published On - 2:51 pm, Tue, 13 October 20

Follow Us
ಕಾಂಗ್ರೆಸ್​​ ಶಾಸಕರ ಖರೀದಿಗೆ ಬಿಜೆಪಿ ಯತ್ನ: ಡಿಕೆಶಿ ಸ್ಫೋಟಕ ಆರೋಪ
ಕಾಂಗ್ರೆಸ್​​ ಶಾಸಕರ ಖರೀದಿಗೆ ಬಿಜೆಪಿ ಯತ್ನ: ಡಿಕೆಶಿ ಸ್ಫೋಟಕ ಆರೋಪ
ವಿಚ್ಛೇದನಕ್ಕಾಗಿ ಬಂದಿದ್ದ 37 ದಂಪತಿಗಳ ಒಂದು ಮಾಡಿದ ನ್ಯಾಯಾಧೀಶರು!
ವಿಚ್ಛೇದನಕ್ಕಾಗಿ ಬಂದಿದ್ದ 37 ದಂಪತಿಗಳ ಒಂದು ಮಾಡಿದ ನ್ಯಾಯಾಧೀಶರು!
ಮದುವೆ ವಿಷಯಕ್ಕೆ ವೇದಿಕೆಯಲ್ಲೇ ಅನುಶ್ರೀಗೆ ಕೈ ಮುಗಿದು ಕ್ಷಮೆ ಕೇಳಿದ ಪ್ರೇಮ್
ಮದುವೆ ವಿಷಯಕ್ಕೆ ವೇದಿಕೆಯಲ್ಲೇ ಅನುಶ್ರೀಗೆ ಕೈ ಮುಗಿದು ಕ್ಷಮೆ ಕೇಳಿದ ಪ್ರೇಮ್
ನೈಸ್ ರೋಡ್ ಬನ್ನೇರುಘಟ್ಟ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಚಿರತೆ ಸಾವು
ನೈಸ್ ರೋಡ್ ಬನ್ನೇರುಘಟ್ಟ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಚಿರತೆ ಸಾವು
ವಾರ ಭವಿಷ್ಯ; ಈ ರಾಶಿಗೆ ಈ ವಾರ ಆದಾಯದಲ್ಲಿ ಏರಿಕೆ, ಉದ್ಯೋಗದಲ್ಲಿ ಪ್ರಗತಿ
ವಾರ ಭವಿಷ್ಯ; ಈ ರಾಶಿಗೆ ಈ ವಾರ ಆದಾಯದಲ್ಲಿ ಏರಿಕೆ, ಉದ್ಯೋಗದಲ್ಲಿ ಪ್ರಗತಿ
ಮಂಡ್ಯದಲ್ಲಿ ಮುಂದುವರಿದ JDS-BJP ಮೈತ್ರಿ ಮುನಿಸು!
ಮಂಡ್ಯದಲ್ಲಿ ಮುಂದುವರಿದ JDS-BJP ಮೈತ್ರಿ ಮುನಿಸು!
ಕ್ರಿಕೆಟ್​ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ: ಅಮಿರ್ ಆಕ್ರೋಶ
ಕ್ರಿಕೆಟ್​ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ: ಅಮಿರ್ ಆಕ್ರೋಶ
ಪ್ರತಿ ಭಾನುವಾರ ಫ್ಯಾನ್ಸ್ ಭೇಟಿ ಮಾಡೋದು ಯಾಕೆ? ಕಾರಣ ತಿಳಿಸಿದ ಧ್ರುವ ಸರ್ಜಾ
ಪ್ರತಿ ಭಾನುವಾರ ಫ್ಯಾನ್ಸ್ ಭೇಟಿ ಮಾಡೋದು ಯಾಕೆ? ಕಾರಣ ತಿಳಿಸಿದ ಧ್ರುವ ಸರ್ಜಾ
ರಾಯಚೂರಿನ ರೈಸ್ ಮಿಲ್​ಗಳಿಗೂ ಯುದ್ಧಾಘಾತ!
ರಾಯಚೂರಿನ ರೈಸ್ ಮಿಲ್​ಗಳಿಗೂ ಯುದ್ಧಾಘಾತ!
ಯುವತಿಗೆ ಹಲ್ಲೆ ಯತ್ನ, ಯುವಕನ ಅಟ್ಟಹಾಸದ ವಿಡಿಯೋ ಸಿಸಿಟಿವಿಲಿ ಸೆರೆ
ಯುವತಿಗೆ ಹಲ್ಲೆ ಯತ್ನ, ಯುವಕನ ಅಟ್ಟಹಾಸದ ವಿಡಿಯೋ ಸಿಸಿಟಿವಿಲಿ ಸೆರೆ